ಉಡುಪಿ : ಪತ್ರಕರ್ತ ಭರತ್ ಶೆಟ್ಟಿಗಾರ್ಗೆ ಬೀಳ್ಕೊಡುಗೆ

ಉಡುಪಿ, ಜ.28: ಮಂಗಳೂರಿಗೆ ವರ್ಗಾವಣೆಗೊಂಡಿರುವ ವಿಜಯವಾಣಿ ಪತ್ರಿಕೆಯ ಉಡುಪಿ ವರದಿಗಾರ ಭರತ್ ಶೆಟ್ಟಿಗಾರ್ ಅವರಿಗೆ ಉಡುಪಿ ಪ್ರೆಸ್ ಕ್ಲಬ್ ವತಿಯಿಂದ ಗುರುವಾರ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಭರತ್ ಶೆಟ್ಟಿಗಾರ್ ಅವರನ್ನು ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಸನ್ಮಾನಿಸಿದರು. ಪ್ರೆಸ್ ಕ್ಲಬ್ ಸಹಸಂಚಾಲಕರಾದ ನಝೀರ್ ಪೊಲ್ಯ, ಹರ್ಷರಾಜ್ ಕೋಡಿಕನ್ಯಾಣ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು ಸ್ವಾಗತಿಸಿ ದರು. ಪ್ರೆಸ್ ಕ್ಲಬ್ ಸಂಚಾಲಕ ಚೇತನ್ ಪಡುಬಿದ್ರಿ ವಂದಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
Next Story





