ಕಾಸರಗೋಡು : ಸೋಲಾರ್ ಹಗರಣ ಪ್ರಕರಣ - ಡಿ ವೈ ಎಫ್ ಐ ಮಂಜೇಶ್ವರ ನೇತ್ರತ್ವದಲ್ಲಿ ಪ್ರತಿಭಟನೆ

ಕಾಸರಗೋಡು : ಸೋಲಾರ್ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ವಿದ್ಯುತ್ ಸಚಿವ ಆರ್ಯಾಡನ್ ಮುಹಮ್ಮದ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಡಿ ವೈ ಎಫ್ ಐ ಮಂಜೇಶ್ವರ ಬ್ಲಾಕ್ ಸಮಿತಿ ನೇತ್ರತ್ವದಲ್ಲಿ ಹೊಸಂಗಡಿಯಲ್ಲಿ ಗುರುವಾರ ಪ್ರತಿಭಟನಾ ಧರಣಿ ನಡೆಯಿತು.
ಧರಣಿಯನ್ನು ಸಿಪಿಐ ಎಂ ಜಿಲ್ಲಾ ಸಮಿತಿ ಸದಸ್ಯ ಕೆ. ಆರ್ ಜಯಾನಂದ ಉದ್ಘಾಟಿಸಿದರು.
ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ಸಿದ್ದಿಕ್ ಪಾವೂರು , ಅಶ್ರಫ್ ಗುಡ್ಡೆಕೇರಿ, ನಿತಿನ್ ಕನಿಲ , ಸತ್ತಾರ್ ಬಳ್ಳೂರು, ಇಬ್ರಾಹಿಂ ರಾಮತ್ತಮಜಲ್ , ಸಿದ್ದಿಕ್ ಚೆರುಗೋಳಿ ನೇತ್ರತ್ವ ನೀಡಿದರು
Next Story





