Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 4 ತಾಸಿನಲ್ಲಿ 23 ಬಾರಿ ಹೃದಯ ಸ್ತಂಭನವಾಗಿ...

4 ತಾಸಿನಲ್ಲಿ 23 ಬಾರಿ ಹೃದಯ ಸ್ತಂಭನವಾಗಿ ಬದುಕುಳಿದ ಭೂಪ!

ವಾರ್ತಾಭಾರತಿವಾರ್ತಾಭಾರತಿ29 Jan 2016 11:47 PM IST
share
4 ತಾಸಿನಲ್ಲಿ 23 ಬಾರಿ ಹೃದಯ ಸ್ತಂಭನವಾಗಿ ಬದುಕುಳಿದ ಭೂಪ!

ಕೊಚ್ಚಿ, ಜ.29: ಅರುವತ್ತರ ಹರೆಯದ ಅಜಿತ್ ಎಂಬವರು (ಹೆಸರು ಬದಲಾಯಿಸಲಾಗಿದೆ) ತನ್ನ 7ರ ಹರೆಯದ ಮೊಮ್ಮಗನೊಂದಿಗೆ ಕ್ರಿಕೆಟ್ ಆಡುತ್ತಿರುವುದನ್ನು ನೋಡಿದರೆ, ಆ ಮನುಷ್ಯ 4 ತಾಸುಗಳ ಕಿರು ಅವಧಿಯಲ್ಲಿ 23 ಬಾರಿ ಹೃದಯಸ್ತಂಭನವಾದರೂ ಬದುಕಿದ್ದಾನೆಂದು ನಂಬುವುದು ಕಷ್ಟವಾದೀತು.

ಮಹಾ ಧೂಮಪಾನಿಯಾಗಿರುವ ಅಜಿತ್, ಭಾರೀ ಎದೆ ನೋವಾಗುತ್ತದೆಂದು ಹೇಳಿದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತವಾಗಿರುವುದನ್ನು ಸೂಚಿಸಿತು. ಅವರಿಗೆ ಚಿಕಿತ್ಸೆ ನೀಡುವ ಸತತ ಪ್ರಯತ್ನಗಳು ವಿಫಲವಾದವು. ಅನೇಕ ಬಾರಿ ಅಜಿತ್‌ರ ಹೃದಯ ಬಡಿತ ನಿಂತಿತ್ತು. ಸತತ ಹೃದಯ ಸ್ತಂಭನಗಳಿಂದಾಗಿ ರಕ್ತದ ಹರಿವಿನ ತಡೆಯನ್ನು ನಿವಾರಿಸಲಾಗದೆ ಆಸ್ಪತ್ರೆಯು ಅವರನ್ನು ಆ್ಯಸ್ಟರ್ ಮೆಡಸಿಟಿಗೆ ವರ್ಗಾಯಿಸಿತು.

ನಾಲ್ಕು ತಾಸುಗಳ ಅವಧಿಯಲ್ಲಿ 23 ಬಾರಿ ಹೃದಯ ಸ್ತಂಭನವಾಗಿ ಒಬ್ಬ ಬದುಕುಳಿದಿರುವ ಸಂಗತಿಯನ್ನು ಯಾರೂ ಕೇಳಲಾರರು. ನಿರ್ಣಾಯಕ ಚಿಕಿತ್ಸಾ ಅವಧಿ ಕಳೆದಿತ್ತು. ಈ ಜಟಿಲತೆಯೊಂದಿಗೆ ಇನ್ನಷ್ಟು ಅವರ ಹೃದಯ ಬಡಿತ ನಿಂತಿತ್ತು. ಅದನ್ನು ಅನೇಕ ಬಾರಿ ಪುನಶ್ಚೇತನಗೊಳಿಸಬೇಕಾಯಿತು.

ತಾವು ಸ್ಟೆಂಟಿಂಗ್ ಮೂಲಕ ರಕ್ತ ತಡೆಯನ್ನು ಸರಿಪಡಿಸಿದೆವು. ಹೃದಯಾಘಾತವು ಹೃದಯದ ಒಂದು ಭಾಗಕ್ಕೆ ರಕ್ತ ಪರಿಚಲನೆಯನ್ನು ತಡೆಯುತ್ತದೆ. ಆದರೆ, ಹೃದಯ ಬಡಿತ ನಡೆಯುತ್ತಿರುತ್ತದೆ. ಹೃದಯ ಸ್ತಂಭನವೆಂದರೆ ಹೃದಯ ಬಡಿತ ಸಂಪೂರ್ಣ ನಿಲ್ಲುವುದು. ಅದನ್ನು ಆಘಾತಗಳ ಮೂಲಕ ಪುನಶ್ಚೇತನಗೊಳಿಸಬೇಕಾಗುತ್ತದೆಂದು ಆ್ಯಸ್ಟರ್‌ಮೆಡ್‌ಸಿಟಿಯ ಹಿರಿಯ ಹೃದ್ರೋಗ ತ್ರಜ್ಞ ಡಾ.ಅನಿಲ್ ಕುಮಾರ್ ಆರ್.ವಿವರಿಸಿದ್ದಾರೆ.

ಅಜಿತ್ ಜೀವನದ ವೇಗವನ್ನು ನಿಧಾನಗೊಳಿಸಬೇಕು, ರಕ್ತ ಪರಿಚಲನೆ ಬಾಧಿತವಾಗಿದೆ. ಅವರ ಹೃದಯ ಕೇವಲ ಶೇ.30ರಷ್ಟು ರಕ್ತವನ್ನು ಪಂಪ್ ಮಾಡುತ್ತಿದೆ. ಆದರೆ, ರೋಗಿಯು ದೈನಂದಿನ ಕೆಲಸಗಳನ್ನು ಮಾಡಬಹುದು. ಅಜಿತ್ ಈಗ ಧೂಮಪಾನ ನಿಲ್ಲಿಸಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ತನಗೆ ನೀಡಲಾಗಿರುವ ಹೊಸ ಜೀವದಾನವನ್ನು ಗರಿಷ್ಠವಾಗಿ ಉಪಯೋಗಿಸಬಯಸಿದ್ದೇನೆ. ತಾನು ಪ್ರತಿದಿನ ಮುಂಜಾನೆ 20 ನಿಮಿಷ ನಡೆಯುತ್ತೇನೆ. ವೈದ್ಯರು ಹೇಳಿರುವ ಪಥ್ಯವನ್ನು ಮಾಡುತ್ತಿದ್ದೇನೆ. ಅದು ಅಷ್ಟು ಸುಲಭವಲ್ಲವಾದರೂ ದಿನ ಕಳೆದಂತೆ ತಾನು ಹೆಚ್ಚು ಹುರುಪನ್ನು ಅನುಭವಿಸುತ್ತಿದ್ದೇನೆಂದು ಅಜಿತ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X