Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾರ್ಕಳ : ಆದಿಗ್ರಾಮೋತ್ಸವ ಹೊಸತನದ ಸಕಾರ-...

ಕಾರ್ಕಳ : ಆದಿಗ್ರಾಮೋತ್ಸವ ಹೊಸತನದ ಸಕಾರ- ಶ್ರೀಪತಿ ಭಟ್

ವಾರ್ತಾಭಾರತಿವಾರ್ತಾಭಾರತಿ31 Jan 2016 5:37 PM IST
share
ಕಾರ್ಕಳ : ಆದಿಗ್ರಾಮೋತ್ಸವ ಹೊಸತನದ ಸಕಾರ- ಶ್ರೀಪತಿ ಭಟ್

ಕಾರ್ಕಳ ಸುಂದರ ಗ್ರಾಮೀಣ ಪರಿಸರದಲ್ಲಿ ಹೊಸತನದ ಸಾಕಾರವಾಗಿರುವ ಆದಿ ಗ್ರಾಮೋತ್ಸವ ಒಂದು ವಿನೂತನ ಅನುಭವ ನೀಡಿದೆ. ಯುವ ಪ್ರತಿಭೆಗಳು ಮತ್ತು ಹಿರಿಯ ಸಾಧಕರನನ್ನು ಗೌರವಿಸುವ ಉಪಕ್ರಮ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡುವ ಮೂಲಕ ಇಲ್ಲಿ ನಡೆಯುತ್ತಿರುವ ವ್ಯಕ್ತಿತ್ವ ನಿರ್ಮಾಣದ ಕೆಲಸ ಪ್ರಶಂಸನೀಯ ಎಂದು ಹಿರಿಯ ಉದ್ಯಮಿ ಮೂಡುಬಿದಿರೆ ಧನಲಕ್ಷ್ಮಿ ಉದ್ಯಮ ಸಮೂಹಗಳ ಮಾಲಕ ಶ್ರೀಪತಿ ಭಟ್ ಹೇಳಿದರು.

ಅವರು ಅಜೆಕಾರು ಕುರ್ಪಾಡಿಯಲ್ಲಿ ಸೋಮವಾರ ನಡೆದ ಆದಿಗ್ರಾಮೋತ್ಸವದ ಅಧ್ಯಕ್ಷತೆ ವಹಿಸಿ, ಸಾಧಕರಿಗೆ ಗೌರವ ನೀಡಿ ಮಾತನಾಡುತ್ತಿದ್ದರು.

ಹಳ್ಳಿ ಹಳ್ಳಿಗಳಲ್ಲಿ ಜನರ ಮನಸ್ಸುಗಳನ್ನು ಕಟ್ಟುವ ಕೆಲಸ ಆಗುವುದು ಅನಿವಾರ್ಯವಾಗಿದೆ. ಅಜೆಕಾರು ಅವರಂತಹ ವಿಶಿಷ್ಟವ್ಯಕ್ತಿತ್ವದ ಜನರು ಹೀಗೆ ವಿಶೇಷವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಒಂದು ಮಾದರಿ ಎಂದು ಅವರು ಅಭಿಪ್ರಾಯಪಟ್ಟರು.

ಆದಿಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸಂತೋಷ್ ಕುಮಾರ್ ಗ್ರಾಮ ದೀಪೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.

ಇದೊಂದು ಅತ್ಯಂತ ಆತ್ಮೀಯ- ವಿಶಿಷ್ಟ ಕಾರ್ಯಕ್ರಮ. ಹೊಸತನಗಳ ಸಾಕಾರಕ್ಕೆ ಅಜೆಕಾರು ಒಂದು ಮಾದರಿ, ಗ್ರಾಮೋತ್ಸವ ಆದಿಗ್ರಾಮೋತ್ಸವವಾಗಿ ಬೆಳೆದ ಬಗೆಯನ್ನು ಹತ್ತಿರದಿಂದ ಗಮನಿಸಿದ್ದೇನೆ, ಖುಷಿ ಪಟ್ಟಿದ್ದೇನೆ ಎಂದು ನಿಕಟಪೂರ್ವ ಶಾಸಕ ಎಚ್.ಗೋಪಾಲ ಭಂಡಾರಿ ಪ್ರಶಂಸಿದರು.

ಬೆಳ್ಮಣ್ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಮಾಲತಿ ಪೈ, ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಕುಮಾರ್, ಕುರ್ಸುಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಾಗೇಶಪ್ಪ, ಎಂ.ಜಿ ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಬೋರ್ಗಲ್‌ಗುಡ್ಡೆ ಮುಖ್ಯ ಅತಿಥಿಗಳಾಗಿದ್ದರು.

ಕಂಬಳದಿಂದ ತಾತ್ಕಾಲಿಕವಾಗಿ ನಿವೃತ್ತ ಘೋಷಿಸಿದ ಸಂದರ್ಭದಲ್ಲಿ ಆದಿಗ್ರಾಮೋತ್ಸವ ಗೌರವ ಹೊಸ ಸ್ಪೂರ್ತಿ ನೀಡಿದೆ ಎಂದು ಗೌರವ ಪುರಷ್ಕೃತ ನಂದಳಿಕೆ ಶ್ರೀಕಾಂತ್ ಭಟ್ ಸನ್ಮಾನ ಸ್ವೀಕರಿಸಿ ಉತ್ತರಿಸಿದರು.

ಸಮಾಜ ಸಂಘಟನೆಯ ಜವಾಬ್ದಾರಿಗೆ ಈ ಗ್ರಾಮ ಗೌರವ ನೀಡಿರುವುದು ಸಂತಸ ತಂದಿದೆ ಎಂದು ಗೌರವ ಸ್ವೀಕರಿಸಿದ ಸವಿತಾ ಸಮಾಜದ ಉಡುಪಿ ಜಿಲ್ಲಾ ಅಧ್ಯಕ್ಷ ಗೋವಿಂದ ಭಂಡಾರಿ ಹೇಳಿದರು.

ಗ್ರಾಮೋತ್ಸವ ಯುವ ಗೌರವಕ್ಕೆ ಕವಯತ್ರಿ ಪ್ರೇಮಾ. ವಿ ಸೂರಿಗ, ಸಮಾಜ ಸೇವಕ-ಉದ್ಯಮಿ ಉದಯ ಶೆಟ್ಟಿ ಕಾಂತಾವರ- ಪೂನಾ, ಕ್ರೀಡಾ ಅಂಕಣಕಾರ- ಸಮಾಜಸೇವಕ ನವೀನ್ ಕೆ. ಇನ್ನಾ ಮುಂಬಯಿ, ಪತ್ರಕರ್ತ ಪ್ರಸನ್ನ ಹೆಗ್ಡೆ ಮೂಡುಬಿದಿರೆ, ಗುರ್ಬಿ ಸಿನಿಮಾದ ನಾಯಕಿ ಅಶ್ವಿತಾ ನಾಯಕ್, ಸಂಘಟಕ ಪುಷ್ಟರಾಜ್ ಶೆಟ್ಟಿ ಅಜೆಕಾರು, ಅಂಗನವಾಡಿ ಶಿಕ್ಷಕಿ ಮಮತಾ ಪ್ರಶಾಂತ್ ಶೆಟ್ಟಿ ಕೈಕಂಬ, ಕಲಾವಿದೆ -ಪಂಚಾಯತ್ ಸದಸ್ಯೆ ಭವ್ಯ ಕೈಕಂಬ, ಪುಸ್ತಕ ಪ್ರಕಾಶಕ- ಮಾರಾಟಗಾರ ಪ್ರಕಾಶ ಕೊಡಂಕಿರಿ ಪುತ್ತೂರು , ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಉಡುಪಿ ಲೆಕ್ಕಾಧೀಕ್ಷಕ ಸುಂದರ ನಾಯ್ಕಾ ನೇಲ್‌ನಕರೆ, ಯುವ ಉದ್ಯಮಿ ಪ್ರದೀಪ್ ಹೆಗ್ಡೆ ಅಜೆಕಾರು, ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು. ಸಮಾಜ ಸೇವಕ-ಕವಿ ತಾರಾನಾಥ.ಜೆ. ಮೇಸ್ತ, ಗ್ರಾಮೋತ್ಸವ ಸಮಿತಿಯ ಆಕಾಶಬೆಟ್ಟು ಪ್ರಭಾಕರ ಶೆಟ್ಟಿ ಪಾತ್ರರಾದರು.

ಬೆಳ್ಳಿ ಹಬ್ಬದ ಸಂಭ್ರಮದ ಮಂಜುನಾಥ ಪೈ ಸ್ಮಾರಕ ಪದವಿಪೂರ್ವ ಕಾಲೇಜು ಮತ್ತು ಬೆಳ್ಳಿ ಹಬ್ಬದ ಬ್ರದರ್ಸ್‌ ಕ್ರಿಕೆಟರ್ ಸಂಸ್ಥೆ ಮತ್ತು ನೂತನ ಕ್ರಿಯಾಶೀಲ ಕೆಮ್ಮಂಜ- ಅಜೆಕಾರು ರಿಕ್ಷಾ ಚಾಲಕ ಮಾಲಕ ಸಂಘದವರು ಆದಿಗ್ರಾಮೋತ್ಸವ ಸಾಂಸ್ಥಿಕ ಗೌರವ ಸ್ವೀಕರಿಸಿದರು.

ಬಾಲಕೃಷ್ಣ ಹೆಗ್ಡೆ ಕವಿತಾ ವಾಚನ ಮಾಡಿದರು. ಶ್ರೀ ವಿನಾಯಕ ಯಕ್ಷ ಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಅವರು ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶಿಸಿದರು. ಶ

 ವಿದ್ಯಾರ್ಥಿ ಸಾಧಕಿ ಆಳ್ವಾಸ್ ಕಾಲೇಜಿನ ಎಂ.ಎಸ್ಸಿ ವಿದ್ಯಾರ್ಥಿನಿ ಪೂಜಾ ಆಚಾರ್ಯ, ವಿವಾಹ ಜೀವನದ ಸುವರ್ಣ ಸಂಭ್ರಮದ ಗ್ರಾಮೋತ್ಸವದ ಮೊದಲ ಪ್ರಜೆಗಳಾದ ಶಂಕರ- ಗಿರಿಜಾ ದಂಪತಿಗಳನ್ನು, ಕಂಬಳ ಓಟಗಾರ ನಕ್ರೆ ಜಯಕರ ಮಡಿವಾಳ, ಪಂಚಾಯತ್ ಉಪಾಧ್ಯಕ್ಷೆ ಜ್ಯೋತಿ ಪೂಜಾರಿ, ಕೆರೆಕಾಡು ಮಕ್ಕಳ ಮೇಳದ ಅಧ್ಯಕ್ಷ ಜಯಂತ್ ಅಮೀನ್ ಅವರನ್ನು ಗೌರವಿಸಲಾಯಿತು.

ಪರಿಕಲ್ಪಕ- ಸಂಘಟಕ ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುರ್ಪಾಡಿ ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸೌಮ್ಯಶ್ರೀ ಅಜೆಕಾರು, ಉಮಾಧರ ವಿಶ್ವಕರ್ಮ, ಜ್ಯೋತಿ, ಶ್ರೇಯಾ, ಆಶ್ರಯ್, ಅರುಣ್ ಶೆಟ್ಟಿ ನೀರೆ, ಆರ್ಥಿಕಾ, ಶ್ವೇತಾ, ಅಶ್ವಿನಿ ನಕ್ರೆ, ಸುಜಿತ್, ಉಮೇಶ್, ಭಾಸ್ಕರ್ ವಿನೋದಾ, ಶಾಲಿನಿ, ಸಂಪ, ಚಂದ್ರಕಲಾ, ಸುಖಲತಾ ಮೊದಲಾದವರು ಯಶಸ್ಸಿಗೆ ಸಹಕರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X