ಕಾಸರಗೋಡು : ವ್ಯಕ್ತಿ ಮನೆಯಲ್ಲಿ ನಿಗೂಡ ಸಾವು, ಮೂರು ದಿನ ಬಳಿಕ ಘಟನೆ ಬೆಳಕಿಗೆ

ಕಾಸರಗೋಡು : ಏಕಾಂಗಿಯಾಗಿ ವಾಸವಾಗಿದ್ದ ವ್ಯಕ್ತಿಯೋರ್ವ ಮನೆಯಲ್ಲೇ ನಿಗೂಡವಾಗಿ ಮ್ರತಪಟ್ಟ ಘಟನೆ ಬದಿಯಡ್ಕ ಟಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ,ಮೂರು ದಿನ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ.
ಪೆರ್ಲ ನಲ್ಕ ಕುರೆಡ್ಕದ ಸತೀಶ ನಾಯ್ಕ ( ೩೫) ಮ್ರತಪಟ್ಟವರು. ಒಡ್ಯ ಸಮೀಪದ ಮಾಯಿಲಕ್ಕಾನ ದಲ್ಲಿರುವ ಮನೆಯಲ್ಲಿ ಮ್ರತದೇಹ ಪತ್ತೆಯಾಗಿದೆ. ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಬಂದು ಪರಿಶೀಲಿಸಿದಾಗ ಅಜೀರ್ಣಾವಸ್ಥೆಯಲ್ಲಿ ಮ್ರತದೇಹ ಪತ್ತೆಯಾಗಿದೆ. ಮಾಯಿಲಕ್ಕಾನದಲ್ಲಿ ಸಣ್ಣ ಮನೆ ನಿರ್ಮಿಸಿ ಪತ್ನಿ ಮಕಕ್ಕಳ ಜೊತೆ ವಾಸಿಸುತ್ತಿದ್ದರು. ದಿನನಿತ್ಯ ಸತೀಶ ಪಾನಮತ್ತನಾಗಿ ಬರುತ್ತಿದ್ದು , ಇದರಿಂದ ಪತ್ನಿ , ಮಕ್ಕಳು ತಾಯಿ ಮನೆಗೆ ತೆರಳಿದ್ದರು ಎನ್ನಲಾಗಿದೆ . ಇದರಿಂದ ಏಕಾಂಗಿಯಾಗಿ ಸತೀಶ ಈ ಮನೆಯಲ್ಲಿ ವಾಸಿಸುತ್ತಿದ್ದರು, ಮೂರು ದಿನಗಳ ಹಿಂದೆಯೇ ಮ್ರತಪಟ್ಟಿ ದ್ದಾರೆ ಎನ್ನಲಾಗಿದೆ. ಮ್ರತದೆಹವನ್ನು ತಜ್ಞ ಮರಣೋತ್ತರ ಪರೀಕ್ಷೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಾವಿಗೆ ಅತೀಯಾದ ಮದ್ಯ ಸೇವನೆ ಅಥವಾ ಇನ್ಯಾವುದೇ ಕಾರಣವಾಗಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತೀಶ ಈ ಹಿಂದೆ ನಲ್ಕ ದಲ್ಲಿ ಹೊಟೇಲ್ ನಡೆಸುತ್ತಿದ್ದರು.





