Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಅರಸೀಕೆರೆ : ಇಬ್ರಾಹೀಂ ಕುಟುಂಬದ ಮೇಲಿನ...

ಅರಸೀಕೆರೆ : ಇಬ್ರಾಹೀಂ ಕುಟುಂಬದ ಮೇಲಿನ ಆರೋಪದ ಸುದ್ದಿ ನಿರಾಧಾರ

ವಾರ್ತಾಭಾರತಿವಾರ್ತಾಭಾರತಿ4 Feb 2016 10:15 PM IST
share
ಅರಸೀಕೆರೆ : ಇಬ್ರಾಹೀಂ ಕುಟುಂಬದ ಮೇಲಿನ ಆರೋಪದ ಸುದ್ದಿ ನಿರಾಧಾರ

ಅರಸೀಕೆರೆ (ಕೋಡಿಮಠದ ಮಹಾಸಂಸ್ಥಾನ), ಫೆ.4: ಸೌಹಾರ್ದ ಸಮಾಜ ನಿರ್ಮಾಣಕ್ಕೆ ದುಡಿಯುತ್ತಿರುವ ಸಕಲೇಶಪುರದ ಆನೆಮಹಲ್ ಗ್ರಾಮದ ಕೆ.ಇಬ್ರಾಹೀಂ ಕುಟುಂಬದ ಮೇಲೆ ಮಾಡಲಾಗುತ್ತಿರುವ ಐಸಿಸ್ ನಂಟಿನ ಸುದ್ದಿ ನಿರಾಧಾರ. ಇವರ ಕುಟುಂಬದ ದೇಶ ಪ್ರೇಮವನ್ನು ನಾನು ಸಾಕ್ಷೀಕರಿಸುತ್ತೇನೆ ಎಂದು ಕೋಡಿಮಠದ ಮಹಾ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ತಿಳಿಸಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆೆ ಕೋಡಿಮಠದ ಮಹಾ ಸಂಸ್ಥಾನದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ಓದಿ ನನಗೆ ಖೇದ, ಆಶ್ಚರ್ಯ, ದಿಗ್ಭ್ರಮೆಯಾಯಿತು ಎಂದರು. ಇಬ್ರಾಹೀಂ ಅವರು ಧರ್ಮ ಸಂಘರ್ಷಕ್ಕೆ ಇಳಿಯದೆ ಧರ್ಮಗಳನ್ನು ಜೋಡಿಸಲು ಯತ್ನಿಸುತ್ತಿರುವ ವ್ಯಕ್ತಿ. ಹಿಂದೂ-ಮುಸ್ಲಿಮ್ ಭಾವೈಕ್ಯ ಮೂಡಿಸಲು ನೂರಾರು ಕಾರ್ಯಕ್ರಮಗಳನ್ನು ಇವರೊಂದಿಗೆ ಹಮ್ಮಿ ಕೊಂಡಿದ್ದೇವೆ. ಸಭೆ ಸಮಾರಂಭ ಮಾಡಿದ್ದೇವೆ. ಜನ-ಮನವನ್ನು ಸ್ಪಷ್ಟಗೊಳಿಸಿದ್ದೇವೆ. ಇಬ್ರಾಹೀಂ ಅವರ ದಿನಚರಿ ನೀತಿ ಕಥೆಗಳನ್ನು ನಾವು ಚೆನ್ನಾಗಿ ಬಲ್ಲೆವು. ಇವರ ಮೇಲಿನ ಹೇಳಿಕೆ ಬಾಲಿಶತನದ ಹೇಳಿಕೆಯಾಗಿದೆ ಎಂದು ಅವರು ತಿಳಿಸಿದರು.

ಘಟನೆಯ ಸತ್ಯಾಸತ್ಯತೆಯನ್ನು ವಿಮರ್ಶೆಮಾಡಿ ಕ್ರಮ ಕೈಗೊಳ್ಳಲಿ, ಇದಕ್ಕೆ ನನ್ನ ವಿರೋಧವಿಲ್ಲ. ಆದರೆ, ನಿರಪರಾಧಿಗೆ ತೊಂದರೆ ಉಂಟಾಗಬಾರದು ಎಂದು ಕೋಡಿಮಠ ಸ್ವಾಮಿ ಹೇಳಿದರು. ಈ ವಿಷಯವನ್ನು ಕೇಳಿ ಇಬ್ರಾಹೀಂ ಅವರು ಬಹಳ ಖಿನ್ನರಾಗಿದ್ದಾರೆ, ಮನೋವ್ಯಥೆಯಲ್ಲಿದ್ದಾರೆ ಎಂದು ತಿಳಿದು ನನಗೆ ಗಾಬರಿಯಾಯಿತು. ಇಬ್ರಾಹೀಂ ಯಾವುದೇ ಕಾರಣಕ್ಕೂ ಗಾಬರಿಪಡುವ ಅಗತ್ಯವಿಲ್ಲ. ಅಲ್ಲಾಹನನ್ನು ನಂಬಿದವರಿಗೆ ಆತ ಎಂದೂ ದುಃಖ ನೀಡುವುದಿಲ್ಲ ಎಂದರು.

ಸತ್ಯಕ್ಕೆ ದೂರವಾದ ವಿಷಯ ಪ್ರಕಟಿಸಿರುವುದು ಶ್ಲಾಘನೀಯವಾದುದಲ್ಲ. ಈ ದೃಷ್ಟಿಯಲ್ಲಿ ವರದಿಗಾರರು ಇವರಿಗಾದ ಅನ್ಯಾಯವನ್ನು ಸರಿಪಡಿಸಿಕೊಡಬೇಕೆಂದು ಆಗ್ರಹಿಸುತ್ತೇನೆ ಎಂದು ಕೋಡಿಮಠ ಶ್ರೀ ಹೇಳಿದರು.

ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಭಯೋತ್ಪಾದಕರು ಮುಸ್ಲಿಮರು ಅಲ್ಲವೇ ಅಲ್ಲ ಎಂದು ವಿಶ್ಲೇಶಿಸಿದ ಸ್ವಾಮಿಗಳು, ಮುಸ್ಲಿಮರ ಜೀವನವನ್ನು ಕೋಮುವಾದಿ ಸಂಘಟನೆಗಳು ಸಂಕಷ್ಟಕ್ಕೆ ತಂದು ನಿಲ್ಲಿಸಿವೆ. ಅಮಾಯಕರು ಬಲಿಯಾಗುತ್ತಿರುವುದು ವಿಷಾದನೀಯ ಎಂದು ಅವರು ನೋವು ವ್ಯಕ್ತಪಡಿಸಿದರು. ಇಬ್ರಾಹೀಂರ ಮಗ ಸೌದಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದಾನೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ, ಇವರ ಮಗನ ಪಾತ್ರ ಏನೂ ಇಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದರೂ ಕಲ್ಪಿತ ಸುದ್ದಿ ಪ್ರಕಟಿಸಿರುವುದು ಸರಿಯಲ್ಲ ಎಂದರು.

ಇಬ್ರಾಹೀಂ ಅವರಿಗೆ ಧೈರ್ಯತುಂಬಿದ ಕೋಡಿಮಠ ಶ್ರೀ, ಧೈರ್ಯವಾಗಿರಿ, ನಾನೂ ನಿಮ್ಮಾಂದಿಗಿದ್ದೇನೆ. ಸಂಬಂಧಪಟ್ಟವರೊಂದಿಗೆ ಮಾತನಾಡುತ್ತೇನೆ ಎಂದರು.

ಉದಯವಾಣಿಯಿಂದ ಸುಳ್ಳು ಸುದ್ದಿ

ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದ ಯುವಕ ನೌಫಲ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದು, ಈತ ಐಸಿಸ್ ಜೊತೆ ಸಂಪರ್ಕದಲ್ಲಿದ್ದಾನೆ. ನಕಲಿ ಪಾಸ್‌ಪೋರ್ಟ್‌ನಿಂದ ತೆರಳಿದ್ದಾನೆ. ಈತನ ಕುಟುಂಬ ಊರು ಬಿಟ್ಟಿದೆ ಎಂದು ಉದಯವಾಣಿ ಪತ್ರಿಕೆ ಈ ಹಿಂದೆ ಸುಳ್ಳು ವರದಿ ಮಾಡಿತ್ತು.

ಜೈಲಿಗೆ ಬರಲು ಸಿದ್ಧ

ಸ್ವಾಮಿಯನ್ನು ಭೇಟಿಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಿಸಿದ ಇಬ್ರಾಹೀಂರನ್ನು ಬಿಗಿದಪ್ಪಿಕೊಂಡ ಕೋಡಿ ಮಠ ಶ್ರೀ, ನಿಮ್ಮ ಕುಟುಂಬ ದ್ರೋಹಮಾಡಲು ಸಾಧ್ಯವಿಲ್ಲ, ನಿಮ್ಮ ಕುಟುಂಬಕ್ಕೆ ಸುಮ್ಮನೆ ಧಕ್ಕೆಮಾಡಿದರೆ ನಾನು ನಿಮ್ಮೆಂದಿಗೆ ಜೈಲಿಗೆ ಬರಲು ಸಿದ್ಧ್ದ ಎಂದರು.

ಆರೆಸ್ಸೆಸ್ ವಿರುದ್ಧ ಕಿಡಿ

   ದೇಶದಲ್ಲಿ ಶಾಂತಿ ಕದಡುತ್ತಿರುವುದೇ ಆರೆಸ್ಸೆಸ್. ಇವರಿಂದ ದೇಶ ಹಾಳಾಗುತ್ತಿದೆ. ಸರ್ವಧರ್ಮಗಳು ಸೌಹಾರ್ದವಾಗಿ ಬದುಕಲು ಆರೆಸ್ಸೆಸ್ ಬಿಡುತ್ತಿಲ್ಲ. ಇವರಿಗೂ ಈ ದೇಶದ ಸಂಸ್ಕೃತಿಗೂ ಸಂಬಂಧವೇ ಇಲ್ಲ. ಇಲ್ಲಿಯ ಮೂಲನಿವಾಸಿಗಳನ್ನು ದಮನಮಾಡಲಾಗಿದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X