Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಒಬ್ಬ ಕಕ್ಷಿದಾರರ ಅನಿಸಿಕೆ

ಒಬ್ಬ ಕಕ್ಷಿದಾರರ ಅನಿಸಿಕೆ

ಕೆ.ಶಾರದ ಭಟ್, ಉಡುಪಿ.ಕೆ.ಶಾರದ ಭಟ್, ಉಡುಪಿ.8 Feb 2016 10:56 PM IST
share

ಇದು ಮೂರು ವರ್ಷಗಳ ಹಿಂದಿನ ಮಾತು. ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಗಿ ಅನಂತರ ಡಿಸ್‌ಚಾರ್ಜ್ ಆದ ಮೇಲೆ ಆರೋಗ್ಯ ಸುಧಾರಿಸಲು ಮಂಗಳೂರಿನ ನಂತೂರು ಬಳಿ ಇರುವ ಬಜ್ಜೋಡಿಯ ಆಶ್ರಯ ಪುನರ್ವಸತಿ ಕೇಂದ್ರಕ್ಕೆ ಕೆಲವು ದಿನಗಳ ಮಟ್ಟಿಗೆ ನಮ್ಮ ಸಂಬಂಧಿಯೊಬ್ಬರನ್ನು ಸೇರಿಸಿದ್ದೆ. ಎಲ್ಲ ವಯೋಮಾನದವರು ಸೇರಿದಂತೆ ಸುಮಾರು 40-50ರಷ್ಟು ಮಂದಿ ಅಲ್ಲಿ ವಾಸಿಸುತ್ತಿದ್ದರು. ತಾನು ಮುಂಬೈಯ ನರ್ಸಿಂಗ್ ಕಾಲೇಜೊಂದರಲ್ಲಿ ನಿವೃತ್ತ ಪ್ರಾಂಶುಪಾಲನಾಗಿದ್ದು ಆಶ್ರಯ ಕೇಂದ್ರದಲ್ಲಿನ ಅಸ್ವಸ್ಥರ ಆರೈಕೆ ಮಾಡುವುದರಲ್ಲಿ ತನಗೆ ಪರಿಣಿತಿ ಇದೆಯೆಂದು ಆ ಕೇಂದ್ರದ ಸ್ಥಾಪಕ ಬಿಂಬಿಸಿಕೊಳ್ಳುತ್ತಿದ್ದ ಕಾರಣ ಎಲ್ಲರಿಗೂ ಆತನ ಮೇಲೆ ಸಂಪೂರ್ಣ ಭರವಸೆಯಿತ್ತು. ಆ ಕೇಂದ್ರದ ಸ್ಥಾಪನೆಯ ಹಿಂದೆ ಬರೇ ದುಡ್ಡು ಗಳಿಕೆಯ ಉದ್ದೇಶವಿತ್ತೆಂದು ಎಲ್ಲರಿಗೂ ತಿಳಿಯುವಂತಾದದ್ದು ಆತನ ಕಿರುಕುಳ ತಡೆಯಲಾರದೇ ರಾತ್ರೋರಾತ್ರಿ ಯಾರಿಗೂ ಕಾಣದಂತೆ ಅಲ್ಲಿದ ಒಬ್ಬ ಹುಡುಗಿ ಕಂಪೌಂಡ್ ಗೋಡೆ ಹಾರಿ ಅಲ್ಲಿಂದ ತಪ್ಪಿಸಿಕೊಂಡ ಮೇಲೆ. ನಂತರ ಈ ಕುರಿತು ನೆರೆಹೊರೆಯವರಿಂದ ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ಬಂದು ಇಲಾಖೆ ಅಲ್ಲಿನ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೇಂದ್ರವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತು. ಆಗ ನಾನು ಆ ಕೇಂದ್ರದ ಸ್ಥಾಪಕನನ್ನು ಸಂಪರ್ಕಿಸಿ ನಮ್ಮ ಸಂಬಂಧಿಯನ್ನು ಅಲ್ಲಿ ಸೇರ್ಪಡೆಗೊಳಿಸಲು ನೀಡಿದ ಮುಂಗಡ ಹಣ ರೂಪಾಯಿ ಐವತ್ತು ಸಾವಿರದಲ್ಲಿ ನಮ್ಮ ಸಂಬಂಧಿ ವಾಸ್ತವ್ಯಕ್ಕಿದ್ದ ಆರು ದಿನಗಳ ವೆಚ್ಚ ಕಳೆದು ಉಳಿದ ಹಣ ವಾಪಾಸು ನೀಡಲು ಕೇಳಿದೆ. ಆರು ದಿನಗಳಿಗೆ ಏಳು ಸಾವಿರ ರೂಪಾಯಿಗಳ ವೆಚ್ಚವನ್ನು ತೋರಿಸಿ ಉಳಿದ ನಾಲ್ವತ್ಮೂರು ಸಾವಿರ ರೂಪಾಯಿಗಳಿಗೆ ಬ್ಯಾಂಕ್ ಚೆಕ್ ಆತ ನೀಡಿದ. ಆದನ್ನು ಬ್ಯಾಂಕಿಗೆ ನೀಡಿದಾಗ ಅದು ಮೂರು ಬಾರಿಯೂ ಬೌನ್ಸ್ ಆದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಕೋರ್ಟ್ ಮೂಲಕ ಪ್ರಕರಣ ಶೀಘ್ರ ವಿಲೇವಾರಿ ಆಗುವುದೆಂದು ಪೊಲೀಸರು ತಿಳಿಸಿದಂತೆ ಪರಿಚಯದ ವಕೀಲರೊಬ್ಬರನ್ನು ಸಂಪರ್ಕಿಸಿದೆ. ಆ ವಕೀಲರು ಹಣದ ಪಾವತಿಗಾಗಿ ಆತನಿಗೆ ನೋಟಿಸ್ ಕಳುಹಿಸಿದರು. ಅದಾಗಲೇ ಬಹುಶಃ ಆತ ವಿಳಾಸ ಬದಲಿಸಿದ ಕಾರಣ ನೋಟಿಸ್ ವಾಪಾಸು ಬಂತು. ಆನಂತರ ವಕೀಲರು ಕೋರ್ಟ್‌ನಲ್ಲಿ ಆತನ ವಿರುದ್ಧ ದಾವೆ ದಾಖಲಿಸಿ ಕೋರ್ಟ್ ನೋಟಿಸ್ ಕಳುಹಿಸಿದರು. ಆದು ಕೂಡಾ ವಾಪಾಸ್ ಬಂತು. ಈ ಮೂರು ವರ್ಷಗಳ ಅವಧಿಯಲ್ಲಿ ಕೋರ್ಟ್ ಹಿಯರಿಂಗ್ ನಡೆದದು ಬರೀ ಮೂರು ನಾಲ್ಕು ಬಾರಿ ಮಾತ್ರ. ಕೇಂದ್ರದ ಸ್ಥಾಪಕ ಆರೋಪಿಗೆ ಲಾಯರ್ ನೋಟಿಸ್ ಕೊಡಲು ಒಮ್ಮೆ ಮತ್ತು ಕೋರ್ಟ್ ಕೇಸು ದಾಖಲಿಸಲೆಂದು ಎರಡು ಬಾರಿ ಪೂರ್ತಿ ಶುಲ್ಕವನ್ನು ನನ್ನಿಂದ ಪಡೆಯಲಾಗಿದೆ. ಈಗ ಆ ವಕೀಲರ ಧೋರಣೆ ಬೇರೆಯಾಗಿದೆ. ಆರೋಪಿಯ ಸರಿಯಾದ ವಿಳಾಸ ಹುಡುಕಿ ತಂದರೆ ಮಾತ್ರ ಕೋರ್ಟ್ ಕೇಸು ನಿಲ್ಲುತ್ತದೆ. ಇಲ್ಲವಾದಲ್ಲಿ ಕೇಸು ಬಿದ್ದು ಹೋಗುತ್ತದೆ ಎಂದು ಹೇಳಿ ಆರೋಪಿಯನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅವರು ನನ್ನನ್ನೇ ಹೊಣೆ ಮಾಡುತ್ತಾರೆ. ಆರೋಪಿ ಸ್ಥಾನದಲ್ಲಿರುವವರು ಯಾವಾಗಲೂ ವಿಳಾಸ ಬದಲಿಸುತ್ತಲೇ ಇರಿತ್ತಾರೆ. ಅವರನ್ನು ಪತ್ತೆ ಹಚ್ಚುವುದು ಪೊಲೀಸರ ಕೆಲಸವೆಂಬುದು ಸಾಮಾನ್ಯ ಜ್ಞಾನ. ಹೀಗಿರುವಾಗ ಆರೋಪಿಯ ಸರಿಯಾದ ವಿಳಾಸ ಹುಡುಕಲು ನನ್ನನ್ನೇ ಹೊಣೆ ಮಾಡುವ ಈ ವಕೀಲರ ಧೋರಣೆ ಅರ್ಥವಾಗುವುದಿಲ್ಲ. ಇದರಲ್ಲಿ ಸಂತ್ರಸ್ತರ ಕುರಿತು ಮಾನವೀಯತೆ ಕಾಳಜಿಯ ಬದಲು ಅವರ ನಿರ್ಲಕ್ಷ ಎದ್ದು ಕಾಣುತ್ತದೆ ಎಂದು ನನ್ನ ಗ್ರಹಿಕೆ.

share
ಕೆ.ಶಾರದ ಭಟ್, ಉಡುಪಿ.
ಕೆ.ಶಾರದ ಭಟ್, ಉಡುಪಿ.
Next Story
X