Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೆಡ್ಲಿ ಸಾಕ್ಷವನ್ನು ಪ್ರಶ್ನಿಸಿದ ಇಶ್ರತ್...

ಹೆಡ್ಲಿ ಸಾಕ್ಷವನ್ನು ಪ್ರಶ್ನಿಸಿದ ಇಶ್ರತ್ ಕುಟುಂಬ

ವಾರ್ತಾಭಾರತಿವಾರ್ತಾಭಾರತಿ11 Feb 2016 11:56 PM IST
share
ಹೆಡ್ಲಿ ಸಾಕ್ಷವನ್ನು ಪ್ರಶ್ನಿಸಿದ ಇಶ್ರತ್ ಕುಟುಂಬ

ಮುಂಬೈ, ಫೆ.11: ಗುಜರಾತ್‌ನಲ್ಲಿ ನಕಲಿ ಎನ್‌ಕೌಂಟರ್‌ಗೆ ಬಲಿಯಾದ ಇಶ್ರತ್ ಜಹಾನ್, ಲಷ್ಕರೆ ತಯ್ಯಿಬಾ ಉಗ್ರಗಾಮಿ ಗುಂಪಿನ ಸದಸ್ಯೆಯೆಂದು, 26/11 ದಾಳಿ ಸಂಚಿನ ಆರೋಪಿ ಡೇವಿಡ್ ಕೋಲ್‌ಮನ್ ಹೆಡ್ಲಿಯ ಹೇಳಿಕೆಯನ್ನು, ಆಕೆಯ ಕುಟುಂಬ ಸದಸ್ಯರು ಹಾಗೂ ನ್ಯಾಯವಾದಿ ಪ್ರಶ್ನಿಸಿದ್ದಾರೆ. ‘‘ಕೆಲವು ದೊಡ್ಡ ವ್ಯಕ್ತಿಗಳ ರಾಜಕೀಯ ಲಾಭಕ್ಕಾಗಿ, ಇಶ್ರತ್ ಹೆಸರಿಗೆ ಮಸಿ ಬಳಿಯಲಾಗುತ್ತಿದೆ’’ ಎಂದವರು ಹೇಳಿದ್ದಾರೆ.
   19 ವರ್ಷ ವಯಸ್ಸಿನ ಕಾಲೇಜ್ ಯುವತಿ ಇಶ್ರತ್‌ಗೆ, ಉಗ್ರ ಗುಂಪಿನ ಜೊತೆಗೆ ಯಾವುದೇ ರೀತಿಯ ನಂಟಿರಲಿಲ್ಲವೆಂದು ಆಕೆಯ ಸಹೋದರಿ ಮುಶ್ರತ್ ಹಾಗೂ ನ್ಯಾಯವಾದಿ ವೃಂದಾ ಗ್ರೋವರ್ ಹೇಳಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹೆಡ್ಲಿಯ ವಿಚಾರಣೆಗೆ , ಸರಕಾರಿ ವಕೀಲ ಉಜ್ವಲ್ ನಿಕಮ್ ಅನುಸರಿಸುತ್ತಿರುವ ತಂತ್ರಗಾರಿಕೆಯನ್ನೂ ಗ್ರೋವರ್ ಪ್ರಶ್ನಿಸಿದ್ದಾರೆ. ನಿಕಮ್ ಅವರು ಹೆಡ್ಲಿಗೆ ಕೇಳಿದ ಕೆಲವು ಪ್ರಶ್ನೆಗಳು, ಮುಂಬೈ ದಾಳಿ ಪ್ರಕರಣದ ಜೊತೆ ಯಾವ ರೀತಿಯ ಸಂಬಂಧವನ್ನೂ ಹೊಂದಿರಲಿಲ್ಲ. ಬದಲಿಗೆ ಅವು ‘ರಾಜಕೀಯವಾಗಿ ಪ್ರಸ್ತುತತೆ’ ಹೊಂದಿದ್ದವು ಎಂದು ಟೀಕಿಸಿದ್ದಾರೆ.
‘‘ಇಶ್ರತ್‌ಜಹಾನ್ ಹತ್ಯೆಯಲ್ಲಿ ಹಲವು ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದರು. ಅವರು ರಾಜಕೀಯ ಲಾಭಕ್ಕಾಗಿ ಹೇಡ್ಲಿ ಹೀಗೆ ಹೇಳಿದ್ದಾನೆ. ಸ್ವತಃ ಭಯೋತ್ಪಾದಕನಾದ ಹೆಡ್ಲಿ ಅವೆುರಿಕದ ಜೈಲಿನಲ್ಲಿರುವಾಗ ಆತನ ಹೇಳಿಕೆಯನ್ನು ಹೇಗೆ ಪರಿಗಣಿಸಲು ಸಾಧ್ಯ?ಎಂದು ಮುಶ್ರತ್ ಪ್ರಶ್ನಿಸಿದ್ದಾರೆ.
   ಹೆಡ್ಲಿಯ ಹೇಳಿಕೆಯ ಮೂಲಕ ಇಶ್ರತ್‌ಳ ಹೆಸರನ್ನು ಭಯೋತ್ಪಾದನೆಯ ಜೊತೆ ತಳುಕುಹಾಕಲು ಪ್ರಯತ್ನಗಳು ನಡೆಯುತ್ತಿವೆಯೆಂದು ಆಕೆಯ ಚಿಕ್ಕಪ್ಪ ರವೂಫ್ ವಿಷಾದಿಸಿದ್ದಾರೆ. ‘‘ ಇಶ್ರತ್ ಹತ್ಯೆಯಿಂದ ತಮ್ಮ ಹೆಸರಿಗೆ ತಗಲಿದ ಕಳಂಕವನ್ನು ತೊಡೆದುಹಾಕಲು, ಕೆಲವರು ನಡೆಸಿದ ಷಡ್ಯಂತ್ರ ಇದಾಗಿದೆಯೆಂದು, ಇಶ್ರತ್‌ತಾಯಿ ಶಮಿನಾ ಕೌಸರ್ ಹೇಳಿದ್ದಾರೆ. ಹೆಡ್ಲಿಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಹೆಡ್ಲಿಗೆ ಕೇಳಿದ ಪ್ರಶ್ನೆಯೊಂದರಲ್ಲಿ, ಆತನಿಗೆ ಮೂರು ಆಯ್ಕೆಗಳನ್ನು ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆಯೆಂದು ಆಕೆ ಹೇಳಿದ್ದಾರೆ. ನಿಕಮ್ ಅವರು ಹೆಡ್ಲಿಗೆ, ‘‘ನೂರ್‌ಜಹಾನ್, ಇಶ್ರತ್ ಜಹಾನ್ ಹಾಗೂ ಮುಮ್ತಾಝ್ ಬೇಗಂ’ ಹೀಗೆ ಮೂರು ಹೆಸರುಗಳನ್ನು ಹೇಳುತ್ತಿದ್ದೇನೆ. ಅವರಲ್ಲಿ ಲಷ್ಕರೆ ತಯ್ಯಿಬಾದ ಆತ್ಮಹತ್ಯಾ ಬಾಂಬರ್‌ನ ಹೆಸರನ್ನು ಆಯ್ಕೆ ಮಾಡುವಂತೆ ತಿಳಿಸಿದ್ದರು.
 ಆಗ ಹೆಡ್ಲಿ ಇಶ್ರತ್ ಜಹಾನ್‌ಳ ಹೆಸರನ್ನು ಆಯ್ದುಕೊಂಡ. ಆದರೆ ಆತ ಬೇರೆಯವರು ಹೇಳಿದ್ದನ್ನು ಕೇಳಿದ್ದೇನೆಯೇ ಹೊರತು ವೈಯಕ್ತಿವಾಗಿ ಆಕೆಯ ಬಗ್ಗೆ ತನಗೆ ತಿಳಿದಿಲ್ಲವೆಂದು ಆತ ಹೇಳಿರುವುದಾಗಿ ಗ್ರೋವರ್ ತಿಳಿಸಿದ್ದಾರೆ.‘‘ಹೆಡ್ಲಿಯ ಸಾಕ್ಷ ನೀಡಿಕೆಯ ಹಿಂದೆ ರಾಜಕೀಯ ಸಂಚಿದೆ’’ ಎಂದವರು ಆರೋಪಿಸಿದ್ದಾರೆ.

 ಇಶ್ರತ್ ಹತ್ಯೆಯಿಂದ ತಮ್ಮ ಹೆಸರಿಗೆ ತಗಲಿದ ಕಳಂಕವನ್ನು ತೊಡೆದುಹಾಕಲು, ಕೆಲವರು ನಡೆಸಿದ ಷಡ್ಯಂತ್ರ ಇದಾಗಿದೆ. -ಶಮಿನಾ ಕೌಸರ್, ಇಶ್ರತ್‌ಜಹಾನ್ ತಾಯಿ


ಇಶ್ರತ್ ಅಮಾಯಕಳಾಗಿದ್ದು, ಆಕೆಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತೆಂಬುದನ್ನು ಭಾರತೀಯ ತನಿಖಾಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಇಶ್ರತ್ ಹತ್ಯೆಯು ಒಂದು ರಾಜಕೀಯ ಸಂಚು.
-ಮುಶ್ರತ್, ಇಶ್ರತ್‌ಜಹಾನ್ ಸಹೋದರಿ


ಹೆಡ್ಲಿಯ ವಿಚಾರಣೆ ಸಂದರ್ಭದಲ್ಲಿ ಇಶ್ರತ್‌ಳ ಹೆಸರನ್ನು ಉಜ್ವಲ್ ನಿಕಂ ಹಠಾತ್ತನೆ ಪ್ರಸ್ತಾಪಿಸಿರುವುದು ತನಗೆ ಅಚ್ಚರಿಯುಂಟು ಮಾಡಿದೆ.
-ವೃಂದಾ ಗ್ರೋವರ್, ನ್ಯಾಯವಾದಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X