Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ನಾಪ್ ಡೀಲ್ ಉದ್ಯೋಗಿ ದೀಪ್ತಿ ಅಪಹರಣ...

ಸ್ನಾಪ್ ಡೀಲ್ ಉದ್ಯೋಗಿ ದೀಪ್ತಿ ಅಪಹರಣ ಸುತ್ತ ರಹಸ್ಯದ ಹುತ್ತ

ವಾರ್ತಾಭಾರತಿವಾರ್ತಾಭಾರತಿ13 Feb 2016 11:56 PM IST
share
ಸ್ನಾಪ್ ಡೀಲ್ ಉದ್ಯೋಗಿ ದೀಪ್ತಿ ಅಪಹರಣ ಸುತ್ತ ರಹಸ್ಯದ ಹುತ್ತ

ಗಾಝಿಯಾಬಾದ್, ಫೆ.13: ಸ್ನ್ಯಾಪ್ ಡೀಲ್ ಉದ್ಯೋಗಿ ದೀಪ್ತಿ ಸಾರ್ನಾ ಅಪಹರಣ ಹಾಗೂ ಬಿಡುಗಡೆ ಪ್ರಕರಣ ಇನ್ನೂ ರಹಸ್ಯವಾಗಿಯೇ ಉಳಿದಿದ್ದು ಪೊಲೀಸರು 24ರ ಹರೆಯದ ದೀಪ್ತಿ ವಿವರಿಸಿರುವ ‘ವಿಚಿತ್ರ ಘಟನೆ’ಗಳ ಸುತ್ತ ತಮ್ಮ ತನಿಖೆ ಕೇಂದ್ರೀಕರಿಸಿದ್ದಾರೆ.

 ಬುಧವಾರ ಸಂಜೆ ಆಕೆ ತನ್ನ ಕಚೇರಿಯಿಂದ ಆಟೋರಿಕ್ಷಾವೊಂದರಲ್ಲಿ ಗಾಝಿಯಾಬಾದ್‌ಗೆ ಮರಳುತ್ತಿದ್ದ ಸಂದರ್ಭ ಆಟೋ ಚಾಲಕ ಆಕೆಯನ್ನು ಮತ್ತೆಲ್ಲಿಗೋ ಕರೆದೊಯ್ದಿದ್ದನೆಂದು ನಂಬಲಾಗಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಮನೆಗೆ ಮರಳಿದ ದೀಪ್ತಿ ತನ್ನನ್ನು ನಾಲ್ಕು ವ್ಯಕ್ತಿಗಳು 36 ಗಂಟೆಗಳ ಮೊದಲು ಅಪಹರಿಸಿದ್ದಾಗಿಯೂ ನಂತರ ಬಿಡುಗಡೆಗೊಳಿಸಿ ರೈಲ್ವೇ ನಿಲ್ದಾಣದಲ್ಲಿ ಬಿಟ್ಟರೆಂದೂ ಹೇಳಿದ್ದಳು. ‘‘ನಾವು ಆಕೆಯ ಹೇಳಿಕೆಗಳನ್ನು ನಿರಾಕರಿಸುವುದಿಲ್ಲವಾದರೂ ಅದಕ್ಕೆ ಸೂಕ್ತ ಸಾಕ್ಷಿಗಳನ್ನು ಹುಡುಕುತ್ತಿದ್ದೇವೆ,ಎಂದು ಗಾಝಿಯಾಬಾದಿನ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ.

 ದೀಪ್ತಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ ಆಕೆಯನ್ನು ಮೊದಲು ಐ-10 ಕಾರೊಂದರಲ್ಲಿ ಕರೆದೊಯ್ಯಲಾಗಿದ್ದು, ನಂತರ ದೂರದೂರದ ತನಕ ನಡೆಯುವಂತೆ ಮಾಡಲಾಗಿದ್ದು ಒಂದು ದಿನ ಕಬ್ಬಿನ ತೋಟದಲ್ಲಿ ನೆಲೆಸುವಂತೆಯೂ ಮಾಡಲಾಗಿತ್ತು. ನಂತರ ತನ್ನನ್ನು ಅಪಹರಣಕಾರರು ನರೇಲಾ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋದರೆಂದೂ ಆಕೆ ಹೇಳಿದ್ದಳು.

  ಫೆಬ್ರವರಿ 10ರಂದು ತನ್ನ ಗುರ್ಗಾಂವ್ ಕಚೇರಿಯಿಂದ ದೀಪ್ತಿ ಹೊರಬಿದ್ದ ನಂತರ ವೈಶಾಲಿ ಮೆಟ್ರೊ ಸ್ಟೇಶನ್‌ನಲ್ಲಿ ಹಲವರೊಂದಿಗೆ ಆಟೊ ಏರಿದ್ದಳು, ಆದರೆ ದಾರಿ ಮಧ್ಯೆ ಮೋಹನ್ ನಗರದಲ್ಲಿ ಆಟೋ ಕೈಕೊಟ್ಟಾಗ ಪ್ರಯಾಣಿಕರು ಇನ್ನೊಂದು ಆಟೊ ಹಿಡಿದು ಗಾಝಿಯಾಬಾದಿನ ಹಳೆ ಬಸ್ ನಿಲ್ದಾಣದತ್ತ ತೆರಳಿದ್ದಳು. ಆದರೆ ಹಲವು ನಿಮಿಷಗಳ ತರುವಾಯ ಆಟೋದಲ್ಲಿದ್ದ ಇನ್ನೊಬ್ಬ ಪ್ರಯಾಣಿಕೆಯನ್ನು ಚೂರಿ ತೋರಿಸಿ ಇಳಿಯುವಂತೆ ಮೂವರು ಆಗಂತುಕರು ಮಾಡಿದರು ಎಂದು ದೀಪ್ತಿ ಪೊಲೀಸರಿಗೆ ತಿಳಿಸಿದ್ದಾಳೆ. ಆ ವ್ಯಕ್ತಿಗಳು ದೀಪ್ತಿಯ ಬ್ಯಾಗ್, ಮೊಬೈಲನ್ನು ಸೆಳೆದಾಗ ಆಕೆ ಗೆಳತಿಗೆ ಫೋನ್ ಮಾಡುತ್ತಿದ್ದಳು ಹಾಗೂ ಆ ಗೆಳತಿ ಆಕೆಯ ಕಿರುಚಾಟವನ್ನು ಮೊಬೈಲಿನಲ್ಲಿ ಕೇಳಿಸಿಕೊಂಡಿದ್ದಾಳೆನ್ನಲಾಗಿದೆ.

‘‘ಆಕೆಯ ಅಪಹರಣಕಾರರಿಗೆ ಆಕೆ ಯಾರನ್ನೋ ಭೇಟಿಯಾಗಬೇಕಿತ್ತು ಎಂದು ದೀಪ್ತಿ ಹೇಳಿಕೊಂಡಿದ್ದಾಳೆ. ತಾನು ಇಷ್ಟ ಪಡುವ ಚಿಪ್ಸ್ ಬ್ರ್ಯಾಂಡ್ ಕೂಡ ಗೊತ್ತೆಂದು ಅಪಹರಣಕಾರರು ಹೇಳಿದ್ದರೆಂದು ಆಕೆ ಹೇಳಿದ್ದಾಳೆ. ಆಕೆಗೆ ವಿಶ್ರಾಂತಿ ಬೇಕಿದ್ದರಿಂದ ನಾವು ಆಕೆಯನ್ನು ಹೆಚ್ಚಿನವಿಚಾರಣೆಗೆ ಒಳಪಡಿಸಿಲ್ಲ,’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘‘ದೀಪ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿತ್ತಾದರೂ ಆಕೆ ಕೇವಲ ಬಾಹ್ಯ ಪರೀಕ್ಷೆಗೆ ಒಪ್ಪಿಕೊಂಡಳು ಆದರೆ ಆಕೆಯ ಮೈ ಮೇಲೆ ಯಾವುದೇ ಗಾಯಗಳಿರಲಿಲ್ಲ,’’ಎಂದು ಅವರು ಹೇಳಿದ್ದಾರೆ.

ಮಾಧ್ಯಮದವರು ದೀಪ್ತಿಯನ್ನು ಭೇಟಿ ಮಾಡಲು ಆಕೆಯ ಕುಟುಂಬ ನಿರಾಕರಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X