Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಿ.ಪಂ ಚುನಾವಣಾ ಪ್ರಚಾರ ಸಭೆ ಕನ್ನಭಾಗ್ಯ,...

ಜಿ.ಪಂ ಚುನಾವಣಾ ಪ್ರಚಾರ ಸಭೆ ಕನ್ನಭಾಗ್ಯ, ಪುಡಾರಿಗಳ ರಕ್ಷಣೆ ಕಾಂಗ್ರೆಸ್ ಸರಕಾರದ ಸಾಧನೆ : ಸಂಸದ ನಳಿನ್ ಟೀಕೆ

ವಾರ್ತಾಭಾರತಿವಾರ್ತಾಭಾರತಿ17 Feb 2016 5:09 PM IST
share
ಜಿ.ಪಂ ಚುನಾವಣಾ ಪ್ರಚಾರ ಸಭೆ ಕನ್ನಭಾಗ್ಯ, ಪುಡಾರಿಗಳ ರಕ್ಷಣೆ ಕಾಂಗ್ರೆಸ್ ಸರಕಾರದ ಸಾಧನೆ : ಸಂಸದ ನಳಿನ್ ಟೀಕೆ

ಮೂಡುಬಿದಿರೆ : ಮನೆಯ ಹಟ್ಟಿಯಿಂದ ಗೋವುಗಳ ಕಳ್ಳತನ, ಹಳ್ಳಗಳ ರಸ್ತೆ ಬದಿಯಿಂದ ಮರಗಳ ಕಳ್ಳತನ, ನದಿಯಿಂದ ಮರಳಿನ ಕಳ್ಳತನ, ತಮ್ಮ ಮನೆಯಲ್ಲಿ ಮಲಗಲು ಹೆದರಬೇಕಾದಂತಹ ಪರಿಸ್ಥಿತಿಯ ಮೂಲಕ ರಾವಣರಾಜ್ಯವನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರದ ಆಡಳಿತ. ಕಾಂಗ್ರೆಸ್ ಸರಕಾರದ ಸಾಧನೆಗಳು ಒಂದೆರಡಲ್ಲ. ಕನ್ನಭಾಗ್ಯ, ಮರಗಳ್ಳರಿಗೆ ಜೈಲಿನಿಂದ ಬಿಡುಗಡೆ, ಹೊಗೈ ಕದಿಯುವವರಿಗೆ ಭಕ್ಷಣೆ, ಪುಡಾರಿಗಳ ರಕ್ಷಣೆ ಇದು ಕಾಂಗ್ರೆಸ್ ಸರಕಾರದ ಚಿಂತನೆಯ ಯೋಜನೆ. ಸಿದ್ರಾಮಯ್ಯ ಸರಕಾರದ ಘೋಷಣೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಟೀಕೆ ಮಾಡಿದ ಘಟನೆ ಶಿರ್ತಾಡಿಯಲ್ಲಿ ನಡೆದಿದೆ.  ಅವರು ಶಿರ್ತಾಡಿ ಜಿ.ಪಂ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಅಳಿಯೂರಿನಲ್ಲಿ ನಡೆದ ಮತಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ಯಾಗ್ ಹಿಡಿದುಕೊಂಡು ದೇಶ ಸುತ್ತುತ್ತಿದ್ದ ಕಾಂಗ್ರೆಸ್, ದೇಶದ ಸ್ವಾಭಿಮಾನವನ್ನು ಜಗತ್ತಿಗೆ ತೋರಿಸಲು ಪ್ರವಾಸಕೈಗೊಂಡು 40 ಲಕ್ಷ ಕೋಟಿ ರೂವನ್ನು ದೇಶಕ್ಕೆ ತಂದಿರುವ ಮೋದಿ ಬಗ್ಗೆ ಟೀಕೆ ಮಾಡುತ್ತಿರುವುದು ಖಂಡನೀಯ.

 ಕಳಂಕ ರಹಿತ, ಭ್ರಷ್ಠಾಚಾರ ಮುಕ್ತ ಆಡಳಿತವನ್ನು ನೀಡಿರುವ ದ,ಕ ಜಿ.ಪಂಚಾಯತು ರಾಷ್ಟ್ರದಿಂದ ನಿರ್ಮಲ ಗ್ರಾಮ ಪುರಸ್ಕಾರದ ಮೂಲಕ 50ಲಕ್ಷ ಬಹುಮಾನವನ್ನು ಪಡೆದಿರುವುದು ಬಿಜೆಪಿ ಅಧಿಕಾರದಲ್ಲಿದ್ದಾಗ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ.  ಬಿಜೆಪಿ ಸರಕಾರವು ಒಂದೊಂದು ಕೋಟಿ ರೂಗಳ ಅನುದಾವನ್ನು ನೀಡಿದೆ ಆದರೆ ಕಾಂಗ್ರೆಸ್ ಒಂದು ರೂಪಾಯಿ ಅನುದಾವನ್ನೂ ನೀಡಿಲ್ಲ ಚುನಾಯಿತ ಪ್ರತಿನಿಧಿಗಳ, ತಾಲೂಕು ಪಂಚಾಯತ್ ಸದಸ್ಯರುಗಳ ಹಕ್ಕನ್ನು ಕಸಿದುಕೊಂಡಿದೆ. ಕೇಂದ್ರ ಸರಕಾರವು 14 ನೇ ಹಣಕಾಸು ಆಯೋಗದಿಂದ ನೀಡಿರುವ ಅನುದಾನವನ್ನು ಬಾಕಿ ಇರುವ ಕರೆಂಟ್ ಬಿಲ್ಲುಗಳಿಗೆ ಪಾವತಿಸುವ ಪಂಚಾಯತ್ ಸದಸ್ಯರುಗಳ ಹಕ್ಕನ್ನು ಮತ್ತು ಗೌರವವನ್ನು ಕಸಿದುಕೊಂಡಿದೆ ಶಾಸಕರುಗಳ ಮೂಲಕ ಸರಕಾರವು ಕಸಿದುಕೊಂಡಿದೆ ಎಂದು ಆರೋಪಿಸಿ ಇಂತಹ ದುರಾಡಳಿ ದುರಂಕಾರವನ್ನು ಹೊಂದಿರುವ ಕಾಂಗ್ರೆಸ್ ಸರಕಾರವನ್ನು ಮತದಾರರು ಒದ್ದೋಡಿಸುವ ಆಸಕ್ತಿಯನ್ನು ಈ ಚುನಾವಣೆಯಲ್ಲಿ ತೋರಬೇಕಾಗಿದೆ ಎಂದರು.

ಕುಮ್ಕಿ ಹಕ್ಕನ್ನು ಕಸಿದುಕೊಂಡವರು ಕಾಂಗ್ರೆಸಿಗರು: ಬಿಜೆಪಿ ಸರಕಾರವು ಕುಮ್ಕಿ ಹಕ್ಕನ್ನು ರೈತರಿಗೆ ನೀಡುವ ತಿರ್ಮಾನವನ್ನು ಕೈಗೊಂಡು ರಾಜ್ಯಪಾಲರಿಗೆ ಮನವಿ ಸಲ್ಲಿಸಿದಾಗ ತಡೆ ಹಿಡಿಯಲಾಗಿತ್ತು. ಅಲ್ಲದೆ ಈ ಬಗ್ಗೆ ಶ್ರೀನಿವಾಸ್ ಎಂಬವರು ಸುಪ್ರಿಂಕೋರ್ಟ್‌ಗೆ ಹೋಗಿ ಈ ಹಕ್ಕನ್ನು ಸರಕಾರವೇ ಕಸಿದುಕೊಳ್ಳಬೇಕೆಂದು ಮನವಿ ಸಲ್ಲಿಸಿದ್ದರಿಂದ ಕುಮ್ಕಿ ಹಕ್ಕನ್ನು ಕಸಿದುಕೊಂಡಿದೆ.

 ಬಿಜೆಪಿ ಬೀಡಿ ಕಾರ್ಮಿಕರ ಪರವಾಗಿದೆ : ಬೀಡಿ, ಅಡಿಕೆ ಮತ್ತು ಹೊಗೆಸೊಪ್ಪು ನಿಷೇಧಕ್ಕೆ ಕಾಂಗ್ರೆಸ್ ಒತ್ತಡ ತಂದಿದೆ ಹೊರತು ಬಿಜೆಪಿಯಲ್ಲ. ತಾವು ಬೀಡಿಯನ್ನು, ಬೀಡಿ ಕಾರ್ಮಿಕರನ್ನು ಉಳಿಸಿಯೇ ಉಳಿಸುತ್ತೇವೆ ಎಂದ ಅವರು ಶಿರ್ತಾಡಿ ಜಿ.ಪಂ ಮತ್ತು ತಾ.ಪಂ ಕ್ಷೇತ್ರದ ಅಭ್ಯರ್ಥಿಗಳಿಗೆ ಮತಹಾಕಿ ಗೆಲ್ಲಿಸಿದರೆ ಅವರ ಹಿಂದೆ ನಿಂತು ತಾನು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು.

ಬಿಜೆಪಿ ಮುಖಂಡರುಗಳಾದ ಕೆ.ಪಿ ಜಗದೀಶ ಅಧಿಕಾರಿ, ಕೆ.ಆರ್. ಪಂಡಿತ್, ಕೆ.ಕೃಷ್ಣರಾಜ ಹೆಗ್ಡೆ, ಸುದರ್ಶನ್, ಎಂ.ಕೆ.ಹರೀಶ್, ಜಿ.ಪಂ ಅಭ್ಯರ್ಥಿ ಸುಜಾರ, ತಾ.ಪಂ ಸದಸ್ಯರಾದ ನಾಗವೇಣಿ, ರೇಖಾ ಸಾಲ್ಯಾನ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X