Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಿರುಚಿದ ವೀಡಿಯೋ, ನಕಲಿ ಐಬಿ ವರದಿ ಬಗ್ಗೆ...

ತಿರುಚಿದ ವೀಡಿಯೋ, ನಕಲಿ ಐಬಿ ವರದಿ ಬಗ್ಗೆ ಜೆಎನ್‌ಯುವಿನಲ್ಲಿ ಪ್ರಶ್ನೆ ಎದುರಿಸಲು ಅರ್ನಬ್ ಗೋಸ್ವಾಮಿಗೆ ಸವಾಲು

ವಾರ್ತಾಭಾರತಿವಾರ್ತಾಭಾರತಿ20 Feb 2016 12:49 PM IST
share
ತಿರುಚಿದ ವೀಡಿಯೋ, ನಕಲಿ ಐಬಿ ವರದಿ ಬಗ್ಗೆ ಜೆಎನ್‌ಯುವಿನಲ್ಲಿ ಪ್ರಶ್ನೆ ಎದುರಿಸಲು ಅರ್ನಬ್ ಗೋಸ್ವಾಮಿಗೆ ಸವಾಲು

ಮುಂಬೈ : ಟೈಮ್ಸ್ ನೌ ಟಿವಿ ಚಾನೆಲ್ 9 ಗಂಟೆಗೆ ಪ್ರಸಾರ ಮಾಡುವ ನ್ಯೂಸ್ ಅವರ್ ಸಂವಾದದ ಆ್ಯಂಕರ್ ಅರ್ನಬ್ ಗೋಸ್ವಾಮಿಯವರಿಗೆ ಜೆಎನ್‌ಯು ಹಗರಣದ ಸಂಬಂಧ ತಿರುಚಿದ ವೀಡಿಯೋ ಹಾಗೂ ನಕಲಿ ಐಬಿ ವರದಿ ಬಗ್ಗೆ ಜೆಎನ್‌ಯುವಿನಲ್ಲಿ ಪ್ರಶ್ನೆಗಳನ್ನು ಎದುರಿಸಲು ಫೇಸ್ಬುಕ್ಕಿನಲ್ಲಿ ಬಹಿರಂಗ ಸವಾಲೊಂದನ್ನು ಹಾಕಿದ್ದಾರೆ ಆಲ್ ಇಂಡಿಯಾ ಪ್ರೋಗ್ರೆಸ್ಸಿವ್ ವಿಮೆನ್ಸ್ ಎಸೋಸಿಯೇಶನ್ ಇದರ ಕಾರ್ಯದರ್ಶಿ ಕವಿತಾ ಕೃಷ್ಣನ್.

ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿರುವ ಬಹಿರಂಗ ಸವಾಲಿನಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಮಾಸಿಕ ‘ಲಿಬರೇಶನ್’ ಸಂಪಾದಕಿಯೂ ಆಗಿರುವ ಕವಿತಾ ಹೀಗೆಂದು ಬರೆದಿದ್ದಾರೆ ‘‘ನಮ್ಮ ಆಯ್ಕೆಯ ಸ್ಥಳಕ್ಕೆ, ಪ್ರಾಯಶಃ ಜೆಎನ್‌ಯು ಆಗಿರಬಹುದು, ನೀವು ನ್ಯೂಸ್ ಅವರ್‌ಗೆ ಒಂದು ರಾತ್ರಿ ಬರಬೇಕು. ಆದರೆ ಅಲ್ಲಿ ನೀವು ಆ್ಯಂಕರ್ ಕುರ್ಚಿಯಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಬದಲಾಗಿ ನಾವು ನ್ಯೂಸ್ನ ರಾಹುಲ್ ಶಿವಶಂಕರ್ ಹಾಗೂ ಝೀ ನ್ಯೂಸ್‌ನ ಸುಧೀರ್ ಚೌಧುರಿಯವರನ್ನು ನಿಮ್ಮೊಂದಿಗೆ ಅತಿಥಿಗಳಾಗಿ ಆಹ್ವಾನಿಸುತ್ತೇವೆ. ನೀವು ಮೂವರೂ  ತಿರುಚಿದ ವೀಡಿಯೋ,ನಕಲಿ ಐಬಿ ವರದಿ ಸಹಿತಿ ಜೆಎನ್‌ಯು ಹಗರಣ ಸಂಬಂಧ ನಿಮ್ಮ ಸಂವಾದ ಕಾರ್ಯಕ್ರಮಗಳಲ್ಲಿರುವ ಹಲವಾರು ಇತರ ‘ಪ್ರಮಾದ’ಗಳ ಸಂಬಂಧ ಪ್ರಶ್ನೆಗಳನ್ನು ಎದುರಿಸಬಹುದು.

ನೀವು ದೇಶದ್ರೋಹ ಅಥವಾ ಘೋಷಣೆಗಳೆಡೆಗೆ ನಿಮ್ಮ ಮಾತುಗಳನ್ನು ತಿರುಗಿಸುವ ಹಾಗಿಲ್ಲ. ಈ ಸಂವಾದ ಕೇವಲ ತಿರುಚಿದ ವೀಡಿಯೋ, ನಕಲಿ ಐಬಿ ವರದಿ ಹಾಗೂ ನಕಲಿ ಟ್ವೀಟ್‌ಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.’’


‘‘ನೀವು ತಿರುಚಿದ ವೀಡಿಯೋಗಳನ್ನು ಉಪಯೋಗಿಸಿ ಜೆಎನ್‌ಯುಗೆ ಮಾಡಿರುವುದಕ್ಕೂ ಎಬಿವಿಪಿ ರೋಹಿತ್ ವಿಚಾರದಲ್ಲಿ ಆತನಿಗೆ ಅಪೆಂಡಿಸೈಟಿಸ್ ಇದ್ದರೂ ಆತನಿಗೆ ಗಾಯಗಳಾಗಿವೆಯೆಂದು ಸುಳ್ಳು ಹೇಳಿರುವುದರ ಮಧ್ಯೆ ಏನು ವ್ಯತ್ಯಾಸವಿದೆಯೆಂದು ನಿಮ್ಮನ್ನು ಪ್ರಶ್ನಿಸಲಾಗುವುದು.

ನಿಮ್ಮನ್ನು ವೈರ್ ಸುದ್ದಿ ಸಂಸ್ಥೆಯ ಸಿದ್ಧಾರ್ಥ್ ವರದರಾಜನ್ ಮೊದಲು ಎಕ್ಸ್‌ಪೋಸ್ ಮಾಡಿದಾಗ ನೀವೇಕೆ ಸುಳ್ಳು ಹೇಳಿದಿರೆಂದು ನಿಮ್ಮನ್ನು ಪ್ರಶ್ನಿಸಲಾಗುವುದು. ಜೆಎನ್‌ಯುವಿನ ಖ್ಯಾತಿಗೆ ಮಸಿ ಬಳಿದು ರಾತ್ರಿ ಅದು ಹೇಗೆ ಅರ್ನಬ್, ರಾಹುಲ್ ಹಾಗೂ ಸುಧೀರ್ ಅವರಿಗೆ ನಿದ್ದೆ ಬರುವುದೆಂದು ದೇಶಕ್ಕೆ ಗೊತ್ತಾಗಬೇಕು. ಇಂತಹ ಪ್ರಶ್ನೆಗಳನ್ನು ನೀವು ಎದುರಿಸಬಹುದೇ? ಇಲ್ಲದಿದ್ದಲ್ಲಿ ಇಂತಹ ವಿಷಯಗಳಲ್ಲಿ ನೀವೇ ನ್ಯಾಯಾಧೀಶರಂತೆ ವರ್ತಿಸಬೇಡಿ. ನಿಮ್ಮ ಖ್ಯಾತಿ ಚಿಂದಿ ಚೂರಾಗಿದೆ. ನೀವೊಬ್ಬ ಸುಳ್ಳುಗಾರ ಹಾಗೂ ನಿಮ್ಮ ಸುಳ್ಳುಗಳು ಯುವಜನರ ಜೀವನವನ್ನೇ ಹಾಳುಗೆಡಹಬಹುದೆಂಬ ಕಿಂಚಿತ್ತೂ ಯೋಚನೆ ನಿಮಗಿಲ್ಲ,’’ಎಂದು ಕವಿತಾ ತಮ್ಮ ಫೇಸ್ಬುಕ್ ಪುಟದಲ್ಲಿ ಕೆಂಡ ಕಾರಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X