ಕಾಸರಗೋಡು : ದೋಣಿ ಯಿಂದ ಹೊಳೆಗೆ ಬಿದ್ದು ಕಾರ್ಮಿಕ ಮೃತ್ಯು
ಕಾಸರಗೋಡು : ದೋಣಿ ಯಿಂದ ಹೊಳೆಗೆ ಬಿದ್ದು ಉತ್ತರ ಪ್ರದೇಶ ಮೂಲದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ವರನ್ನು ಧರಂ ಪಾಲ್ ( 45) ಎಂದು ಗುರುತಿಸಲಾಗಿದೆ. ಕಾಂಕ್ರೀಟ್ ಕೆಲಸ ನಿರ್ವಹಿಸುತ್ತಿದ್ದ ಇವರು ಆದಿತ್ಯವಾರ ಸಂಜೆ ಕೆಲಸ ಮುಗಿಸಿ ಉಳಿದ ಎಂಟು ಮಂದಿ ಜೊತೆ ದೋಣಿ ಯಲ್ಲಿ ಮರಳುತ್ತಿದ್ದಾಗ ತುರ್ತಿ ಹೊಳೆಯಲ್ಲಿ ಹೊಳಗೆ ಎಸೆಯಲ್ಪಟ್ಟಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ತಡರಾತ್ರಿ ತನಕ ಶೋಧ ನಡೆಸಿದ್ದರು . ಆದರೆ ಮ್ರತದೇಹ ಪತ್ತೆಯಾಗಲಿಲ್ಲ . ಈ ನಡುವೆ ಇಂದು ಬೆಳಿಗ್ಗಿನಿಂದ ಶೋಧ ಕಾರ್ಯ ಆರಂಭಿಸಿದ್ದು , ಮಧ್ಯಾಹ್ನದ ವೇಳೆಗೆ ಮ್ರತದೇಹ ಪತ್ತೆಯಾಗಿದೆ. ಮ್ರತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದೆ.
Next Story





