Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುನ್ನೂರು ಸಿನೆಮಾಗಳ ಪಂಜಾಬಿ...

ಮುನ್ನೂರು ಸಿನೆಮಾಗಳ ಪಂಜಾಬಿ ಸೂಪರ್‌ಸ್ಟಾರ್ ಸತೀಶ್ ಕೌಲ್‌ರಲ್ಲೀಗ ಚಿಕ್ಕಾಸು ಇಲ್ಲ! ಚಿಕಿತ್ಸೆಗೂ ಗತಿಯಿಲ್ಲ!

ವಾರ್ತಾಭಾರತಿವಾರ್ತಾಭಾರತಿ22 Feb 2016 6:24 PM IST
share
ಮುನ್ನೂರು ಸಿನೆಮಾಗಳ ಪಂಜಾಬಿ ಸೂಪರ್‌ಸ್ಟಾರ್ ಸತೀಶ್ ಕೌಲ್‌ರಲ್ಲೀಗ ಚಿಕ್ಕಾಸು ಇಲ್ಲ! ಚಿಕಿತ್ಸೆಗೂ ಗತಿಯಿಲ್ಲ!

ಪಂಜಾಬ್,ಫೆ22: ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸೂಪರ್‌ಸ್ಟಾರ್‌ನ ಬದುಕು ಈಗ ಹೇಗಿದೆ ಗೊತ್ತಾ? ಕಾಶ್ಮೀರದಲ್ಲಿ ಹುಟ್ಟಿ ಎಂಬತ್ತರ ದಶಕದಲ್ಲಿ ಪಂಜಾಬಿ ಸಿನೆಮಾಗಳಲ್ಲಿ ದೊಡ್ಡ ಹೆಸರಾಗಿದ್ದ ಸತೀಶ್ ಕೌಲ್ ಈಗ ರೋಗಿಯಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೂ ಗತಿಯಿಲ್ಲದ ರೀತಿಯಲ್ಲಿದ್ದಾರೆ!. ಮುನ್ನೂರು ಪಂಜಾಬ್ ಮತ್ತು ಮೂವತ್ತು ಹಿಂದಿ ಫಿಲಂಗಳಲ್ಲಿ ಪಾತ್ರನಿರ್ವಹಿಸಿದ ಇವರು ದಿಲೀಪ್‌ಕುಮಾರ್, ದೇವ್ ಆನಂದ್, ಅಮಿತಾಬ್ ಬಚ್ಚನ್, ಶಾರೂಕ್ ಖಾನ್‌ರಂತಹ ಅತಿರಥ ಮಹಾರಥರಂತಹ ನಟರೊಂದಿಗೆ ನಟಿಸಿದ್ದಾರೆ. ಒಟ್ಟು ಫಿಲಂ ಇಂಡಸ್ಟ್ರಿಯಲ್ಲಿ ಮೂವತ್ತು ವರ್ಷ ಕೆಲಸಮಾಡಿದ ಇವರಿಗೆ ಇಂದು ಗತಿಯಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಜಾಬ್‌ನಲ್ಲಿ ಆಕ್ಟಿಂಗ್ ಸ್ಕೂಲ್ ತೆರೆದ ಸತೀಶ್ ಕೌಲ್‌ಗೆ ಹಣಕಾಸು ಅಡಚಣೆ ಉಂಟಾಯಿತು. ಅತ್ತ ಅವರ ನಟನಾ ತರಬೇತಿ ಶಾಲೆ ಸರಿಯಾಗಿ ನಡೆಯಲಿಲ್ಲ. ಮೂವತ್ತು ವರ್ಷಗಳಲ್ಲಿ ಗಳಿಸಿದ್ದೆಲ್ಲವನ್ನೂ ಅದಕ್ಕೆ ಧಾರೆ ಎರೆದಿದ್ದರು. ಅದ್ದೂರಿ ಕಾರಿನಲ್ಲಿ ಒಂದು ಕಾಲದಲ್ಲಿ ಓಡಾಡಿದ್ದ ವ್ಯಕ್ತಿ ಆಟೊದಲ್ಲಿ ಅಡ್ಡಾಡಬೇಕಾಗಿ ಬಂದಿತ್ತು. ಬಾತ್‌ರೂಮ್‌ನಲ್ಲಿ ಬಿದ್ದುಕಾಲು ಮುರಿದುಕೊಂಡರು. ಅದಕ್ಕಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರ್ಪಡೆಯಾಗಿ ಲಕ್ಷಾಂತರ ಹಣ ಚೆಲ್ಲಬೇಕಾಗಿ ಬಂದಿತ್ತು. ನಂತರ ಸಂಪಾದನೆಯಿಲ್ಲದ ಕೌಶಿಕ್ ಅಲ್ಲಿಂದ ಪಟಿಯಾಲದ ಜ್ಞಾನ ಸಾಗರ ಆಸ್ಪತ್ರೆಗೆ ದಾಖಲಾದರು. ಇವರ ಈ ಸ್ಥಿತಿ ಕಂಡು ಮರುಗಿದವರಿಲ್ಲವೆಂದಲ್ಲ. ನೆರವಿನ ಭರವಸೆ ನೀಡಿದವರೂ ಇದ್ದಾರೆ. ಆದರೆ ಅವೆಲ್ಲವೂ ಬಾಯಿಮಾತಲ್ಲೇ ಕೊನೆಯಾಗಿತ್ತು. ಪಟಿಯಾಲ ಆಸ್ಪತ್ರೆ ಈಗ ಮಾನವೀಯ ನೆಲೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದೆ. ಮಹಾನ್ ನಟ ಕೊನೆಗಳಿಗೆಯಲ್ಲಿ ದಿವಾಳಿಯಾಗಿದ್ದರು. ದುಃಖಕರವೆಂದರೆ ಯಾವುದೇ ಸಮಾಜ ಸೇವಾ ಸಂಸ್ಥೆಗಳೂ ಇವರನ್ನು ಗಮನಿಸಿಲ್ಲವೆಂಬುದಾಗಿದೆ. ಯಾವುದೇ ಅಭಿಮಾನಿಗಳೂ ಅವರತ್ತ ಸುಳಿಯಲಿಲ್ಲ. ಹೆಂಡತಿ ಹಲವು ವರ್ಷಗಳ ಹಿಂದೆ ಇವರಿಗೆ ಡೈವೋರ್ಸ್ ಕೊಟ್ಟು ಅಮೆರಿಕದಲ್ಲಿದ್ದ ಪುತ್ರನ ಬಳಿಗೆ ಹೊರಟು ಹೋಗಿದ್ದಾರೆ. ಇರುವಒಬ್ಬಳು ಸಹೋದರಿ ಹೈದರಾಬಾದ್‌ಗೆ ಮದುವೆಯಾಗಿ ಹೋಗಿದ್ದಾರೆ. ಕೌಲ್ ಅವರಿಗೆ ಅವರದ್ದೇ ದೊಡ್ಡ ವಿಷಯವಾದ್ದರಿಂದ ತನ್ನನ್ನು ನೋಡಿಕೊಳ್ಳುವ ಶಕ್ತಿಯಿಲ್ಲ ಎಂದು ಹೇಳುತ್ತಾರೆ. ಅಮೆರಿಕದ ಮಗನಾಗಲಿ ಇತ್ತ ತಲೆಹಾಕಿಲ್ಲ. ಪಂಜಾಬ್ ಮುಖ್ಯಮಂತ್ರಿಯ ಕಾರ್ಯದರ್ಶಿ ಹರಿಚರಣ್ ಭೈಂಸ್ ಇತ್ತೀಚೆಗೆ ಭೇಟಿಯಾಗಿ ನೆರವಿನ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಯೊಂದಿಗೆ ಬಂದು ಭೇಟಿಯಾಗುವೆ ಎಂದು ಹೇಳಿದ್ದಾರೆ. ಸರಕಾರ ತನಗೆ ನೆರವು ನೀಡುತ್ತದೆ. ತನ್ನ ಮುಂದಿನ ದಿನಗಳು ಉತ್ತಮವಾಗುತ್ತದೆಎಂಬ ನಿರೀಕ್ಷೆಯಲ್ಲಿ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾರೆ. ಒಂದುಕಾಲಕ್ಕೆ ಹೇಗಿದ್ದವರು ಹೇಗಾದರು! ಇದನ್ನೇ ವಿಧಿ ನಿಯಮ ಎನ್ನುವುದು ಅಲ್ಲವೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X