Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಕ್ಷದ ಸರಕಾರ, ನಾಲ್ಕು ಸಚಿವರು, ಡಝನ್...

ಪಕ್ಷದ ಸರಕಾರ, ನಾಲ್ಕು ಸಚಿವರು, ಡಝನ್ ಶಾಸಕರಿದ್ದರೂ ದ.ಕ. , ಉಡುಪಿಯ ಗದ್ದುಗೆ ಕಳೆದುಕೊಂಡ ಕಾಂಗ್ರೆಸ್

ಪಕ್ಷ ಬೆಳೆಸದ ನಾಯಕರಿಗೆ ಮತದಾರರ ಚಾಟಿ

ವೀಕ್ಷಕವೀಕ್ಷಕ23 Feb 2016 2:13 PM IST
share
ಪಕ್ಷದ ಸರಕಾರ, ನಾಲ್ಕು ಸಚಿವರು, ಡಝನ್ ಶಾಸಕರಿದ್ದರೂ ದ.ಕ. , ಉಡುಪಿಯ ಗದ್ದುಗೆ ಕಳೆದುಕೊಂಡ ಕಾಂಗ್ರೆಸ್

ಮಂಗಳೂರು , ಫೆ 23: ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಗಳನ್ನೂ ಬಿಜೆಪಿ ಉಳಿಸಿಕೊಂಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ಒಟ್ಟು ನಾಲ್ಕು ಸಚಿವರಿದ್ದಾರೆ. ಅವರನ್ನೂ ಸೇರಿಸಿ ಡಝನ್ ಶಾಸಕರಿದ್ದಾರೆ. ಆದರೆ ಇವ್ಯಾವುವೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲ.

ಈ ಎರಡೂ ಜಿಲ್ಲೆಗಳ ಆಡಳಿತದ ಕೇಂದ್ರ ಜಿಲ್ಲಾ ಪಂಚಾಯತ್  ಬಿಜೆಪಿಯ ಕೈ ಯಲ್ಲಿ ಭದ್ರವಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ 21 ಹಾಗು ಕಾಂಗ್ರೆಸ್ 15 ಜಿಲ್ಲಾ ಪಂಚಾಯತ್ ಕ್ಷೇತ್ರ ಗಳನ್ನು ಗೆದ್ದಿವೆ . ಉಡುಪಿಯಲ್ಲಿ ಬಿಜೆಪಿ 20 ಹಾಗೂ ಕಾಂಗ್ರೆಸ್ ಕೇವಲ 6 ಕ್ಷೇತ್ರಗಳನ್ನು ಪಡೆದಿವೆ. 
ಇದು ಉಭಯ ಜಿಲ್ಲೆಗಳ ಕಾಂಗ್ರೆಸ್ ಪಾಲಿಗೆ ಸ್ಪಷ್ಟ ಹಾಗು ದೊಡ್ಡ ಹಿನ್ನಡೆ. ಬಿಜೆಪಿಯ ಪಾಲಿಗೆ ಬಹುದೊಡ್ಡ ಮುನ್ನಡೆ. ಅದರ ಆತ್ಮ ವಿಶ್ವಾಸವನ್ನು ದುಪ್ಪಟ್ಟು ಮಾಡುವ ವಿಜಯವಿದು .

 
ಇಲ್ಲಿನ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಇದು ಆತ್ಮ ವಿಮರ್ಶೆಗೆ ಸಕಾಲವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಜಿಲ್ಲೆಗಳ ಜನರು ಬಿಜೆಪಿಯನ್ನು ಮೂಲೆಗೊತ್ತಿ ಕಾಂಗ್ರೆಸ್  ಅನ್ನು ಬೆಂಬಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ಬಹು ದೊಡ್ಡ ಬಹುಮತಗಳೊಂದಿಗೆ ಜಯಭೇರಿ ಬಾರಿಸಿದ್ದರು. ಆದರೆ ಈಗ ಪರಿಸ್ಥಿತಿ ಅಂದಿನಂತಿಲ್ಲ. ಇಡೀ ಆಡಳಿತ ಯಂತ್ರ ತನ್ನ ಕೈ ಯಲ್ಲಿದ್ದೂ ಕಾಂಗ್ರೆಸ್ ಗೆ ಯಾಕೆ ಇಷ್ಟು ದೊಡ್ಡ ಹಿನ್ನಡೆಯಾಯಿತು ಎಂಬುದನ್ನು ಆ ಪಕ್ಷದ ಮುಖಂಡರು, ಸಚಿವರುಗಳು ಪ್ರಾಮಾಣಿಕವಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಮುಂದಿನ ಚುನಾವಣೆಗೆ ವರ್ಷ ಇನ್ನೆರಡು ಇದ್ದರೂ ಪಂಚಾಯತ್ ಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ರಾಜಕೀಯ ವಲಯಗಳಲ್ಲಿ ಪರಿಗಣಿಸಲಾಗುತ್ತದೆ. ಆ ಲೆಕ್ಕದಲ್ಲಿ ಕಾಂಗ್ರೆಸ್ ಪಾಲಿಗೆ ಈ ಚುನಾವಣೆಯ  ಫಲಿತಾಂಶವು ಬರಲಿರುವ ಚುನಾವಣೆಗಳಲ್ಲಿ ಕಾಡಬಹುದಾದ ಅತೀ ದೊಡ್ಡ ಅಪಾಯದ ಸ್ಪಷ್ಟ ಮುನ್ಸೂಚನೆ ಇದಾಗಿದೆ. ಅಧಿಕಾರದ ಅಮಲಿನಲ್ಲಿ ತೂಕಡಿಸುತ್ತಿರುವ ಇಲ್ಲಿನ ಕಾಂಗ್ರೆಸ್  ಮುಖಂಡರು ಈಗಲಾದರೂ ಎಚ್ಚೆತ್ತು ಇದನ್ನು ತಿಳಿದುಕೊಂಡರೆ ಅವರಿಗೆ ಹಾಗು ಅವರ ಪಕ್ಷಕ್ಕೆ ಪ್ರಯೋಜನವಿದೆ. ಇಲ್ಲದಿದ್ದರೆ ಮತ್ತೆ ಮನೆಯಲ್ಲಿ ಕುಳಿತುಕೊಳ್ಳಲು ಸಿದ್ದರಾಗಿರಬೇಕು ಅಷ್ಟೇ.

 
ಸರಕಾರ ಬಂದು ಮೂರು ವರ್ಷವಾದರೂ  ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಆಡಳಿತ ಕಂಡು ಬರಲೇ ಇಲ್ಲ ಎಂಬುದು ಇಲ್ಲಿನ ಜನರಿಗಿರುವ ಅತಿ ದೊಡ್ಡ ದೂರು. ಆಡಳಿತದಲ್ಲಿ ಚುರುಕು, ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ, ಕೋಮುವಾದ ನಿಗ್ರಹಿಸಲು ಆಡಳಿತಾತ್ಮಕ ಹಾಗು ಸಾಮಾಜಿಕ ಕ್ರಮಗಳು - ಇತ್ಯಾದಿಗಳನ್ನು ನಿರೀಕ್ಷಿಸಿದ್ದ ಇಲ್ಲಿನ ಜನರನ್ನು ಈ ಜಿಲ್ಲೆಗಳ ಕಾಂಗ್ರೆಸ್ ಜನಪ್ರತಿನಿಧಿಗಳು ಅದರಲ್ಲೂ ಸಚಿವರು ಸಂಪೂರ್ಣ ನಿರಾಶೆಗೊಳಿಸಿದ್ದರು.

 ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ.  ಅದೇ ಕೇಂದ್ರ ಸರಕಾರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಅವುಗಳನ್ನು ಜನರ ಬಳಿ ತೆಗೆದುಕೊಂಡು ಹೋಗಿ ಪಕ್ಷವನ್ನು ಬೆಳೆಸುವಲ್ಲಿ ಈ ಸಚಿವರು ವಿಫಲರಾಗಿದ್ದಾರೆ . ಇದು ಅವರ ದೊಡ್ಡ ವೈಫಲ್ಯ.

 
ಅಧಿಕಾರ ಸಿಕ್ಕಿದ ಕೂಡಲೇ ಮೈ ಮರೆತು ಪಕ್ಷ ಬೆಳೆಸದೆ ಇದ್ದುದಕ್ಕೆ ಯಾವ ಬೆಲೆ ತೆರಬೇಕು ಎಂಬುದಕ್ಕೆ ಉಭಯ ಜಿಲ್ಲೆಗಳ ಕಾಂಗ್ರೆಸ್ ಸಚಿವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಜಿಲ್ಲೆಯಲ್ಲಿ ತಮ್ಮ ಪಕ್ಷದ ಸಿದ್ಧಾಂತವನ್ನು ಹರಡಲು , ಮತಾಂಧರ ಜೊತೆ ತಿರುಗುತ್ತಿರುವ ಯುವಕರನ್ನು ತಮ್ಮತ್ತ ಸೆಳೆಯಲು, ಜನರಲ್ಲಿ ಜಾತ್ಯತೀತತೆ ಕುರಿತು ಜಾಗೃತಿ ಮೂಡಿಸಲು, ಜಿಲ್ಲೆಯಲ್ಲಿ ಕೋಮುವಾದವನ್ನು ನಿಗ್ರಹಿಸಲು , ಅಂತಹ ಶಕ್ತಿಗಳಿಗೆ ಕಡಿವಾಣ ಹಾಕಲು  ಈ ಸಚಿವರು ತಮ್ಮ ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ ?

 
ಈ ನಿಷ್ಕ್ರಿಯತೆಗೆ ಈಗ ಕಾಂಗ್ರೆಸ್ ಇಲ್ಲಿ ಬೆಲೆ ತೆತ್ತಿದೆ. ತಕ್ಷಣ ಎಚ್ಚೆತ್ತುಕೊಂಡು ಸರಿ ಹೆಜ್ಜೆ ಇಟ್ಟರೆ, ತಪ್ಪುಗಳನ್ನು ಸರಿಪಡಿಸಿಕೊಂಡರೆ ಈಗಲೂ ಸುಧಾರಿಸಿಕೊಳ್ಳಬಹುದು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಇಲ್ಲಿ ಪಕ್ಷಕ್ಕೆ ಉಳಿಗಾಲವಿಲ್ಲ . ಹಿಂಬಾಲಕರನ್ನು ಇಟ್ಟುಕೊಂಡು ತಿರುಗಾಡಿದರೆ ಪಕ್ಷ ಬೆಳೆಯುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ತಡ ಮಾಡಿದಷ್ಟೂ ಅವರಿಗೇ ನಷ್ಟ ಹೆಚ್ಚು.

share
ವೀಕ್ಷಕ
ವೀಕ್ಷಕ
Next Story
X