Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಮ್ಮ ಒಳಚರಂಡಿಗಳನ್ನು ಸ್ವಚ್ಛ ಮಾಡುವ...

ನಮ್ಮ ಒಳಚರಂಡಿಗಳನ್ನು ಸ್ವಚ್ಛ ಮಾಡುವ ಹುತಾತ್ಮ

ಭಾರತದಲ್ಲಿ ಪ್ರತಿವರ್ಷ ಸಾವಿರಾರು ಪೌರ ಕಾರ್ಮಿಕರು ಒಳಚರಂಡಿಗಳನ್ನು ಸ್ವಚ್ಛ ಮಾಡುವಾಗ ಪ್ರಾಣ ಕಳೆದುಕೊಳ್ಳುತ್ತಾರೆ. ಇವರ ಬಲಿದಾನ ದೇಶ ಕಾಯುವ ಸೈನಿಕರ ಸಾವಿಗಿಂತ ಕಡಿಮೆಯೇ ?

ಆಕರ್ ಪಟೇಲ್ಆಕರ್ ಪಟೇಲ್27 Feb 2016 10:41 AM IST
share
ನಮ್ಮ ಒಳಚರಂಡಿಗಳನ್ನು ಸ್ವಚ್ಛ ಮಾಡುವ ಹುತಾತ್ಮ

 ಎಲ್ಲಾ ಅರೆಬಿಕ್ ಶಬ್ದಗಳಲ್ಲಿ ಮೂರು ಪದಗಳ ಬೇರು ಇರುತ್ತದೆ. ಆ ಬೇರನ್ನು ಒಮ್ಮೆ ಗುರುತಿಸಿದಲ್ಲಿ, ಅದು ರೂಪಿಸಿರುವ ಶಬ್ದವನ್ನು ತಿಳಿದುಕೊಳ್ಳುವುದು ಸುಲಭ. ಎಸ್-ಜೆ-ಡಿ ಎನ್ನುವುದು ಪ್ರಾರ್ಥನೆಯ ರೂಪವಾಗಿ ತಲೆ ಬಾಗಿಸುವುದರ ಮೂಲ ಅಕ್ಷರಗಳು. ಅದರಿಂದಲೇ ನಾವು ಸಜ್ದಾ (ಪ್ರಾರ್ಥನೆಗಾಗಿ ಬಾಗುವುದು), ಸಾಜಿದ್ ಮತ್ತು ಸಾಜಿದಾ (ಪ್ರಾರ್ಥನೆಗಾಗಿ ಬಾಗಿದಾತ/ ಬಾಗಿದಾಕೆ) ಮತ್ತು ಅಲ್ಲದೆ ಮಸೀದಿ (ಪ್ರಾರ್ಥನೆ ನಡೆಯುವ ಸ್ಥಳ) ಪದಗಳನ್ನು ಪಡೆಯುತ್ತೇವೆ. ಸಾಮಾನ್ಯವಾಗಿ ಈ ಮೂರು ಪದಗಳು ವ್ಯಂಜನಗಳಾಗಿರುತ್ತವೆ. ಕೆಲವೊಮ್ಮೆ ಅವು ಹಾಗಿರುವುದಿಲ್ಲ. ಉದಾಹರಣೆಗೆ ಬೆಳಕಿಗೆ ಇರುವ ಶಬ್ದ ನೂರ್, ಆದರೆ ಪ್ರಕಾಶಕ್ಕೆ ಇರುವ ಶಬ್ದ ಅನ್ವರ್. ಹಾಗಿದ್ದರೆ ಒ ಎಲ್ಲಿ ಹೋಯಿತು? ವಾಸ್ತವದಲ್ಲಿ ಅದು ಇನ್ನೂ ಅಲ್ಲೇ ಇದೆ. ಏಕೆಂದರೆ ಅರೆಬಿಕ್‌ನಲ್ಲಿ ಒ ಅಕ್ಷರವು ಡಬ್ಲ್ಯು ಜೊತೆಗೆ ಬದಲಾಗಬಹುದು!


ಹಾಗೆಯೇ ಎಸ್‌ಎಚ್-ಎಚ್-ಡಿ ಬೇರು ಹುತಾತ್ಮ ಪದಕ್ಕೆ ಸೇರಿದೆ. ಇದರಿಂದ ನಾವು ಶಹೀದ್ ಮತ್ತು ಶಾಹಿದ್ ಪದಗಳನ್ನು ರಚಿಸಬಹುದು. ಹಾಗೆಯೇ ಶಹದಾ ಕೂಡ ಬರೆಯಬಹುದು. ನಮಗೆ ಶಹದಾ ಗೊತ್ತಿದೆ. ಏಕೆಂದರೆ ಅದು ಪುರಾವೆ ಲಾ ಇಲಾಹ ಇಲ್ ಅಲ್ಲಾ ಮುಹಮ್ಮದ್ ರಸುಲುಲ್ಲಾ ಅಂದರೆ ಒಬ್ಬನೇ ಒಬ್ಬ ದೇವ ಅಲ್ಲಾಹ್, ಮತ್ತು ಮುಹಮ್ಮದ್ ಆತನ ಪ್ರವಾದಿ. ಶಹೀದ್ ಮತ್ತು ಶಾಹಿದ್ ಅರ್ಥವು ಈ ಪುರಾವೆಗೆ ಸಾಕ್ಷಿಯಾದ ವ್ಯಕ್ತಿ. ಹಾಗಿದ್ದರೆ ಹುತಾತ್ಮ ಮತ್ತು ಸಾಕ್ಷಿ ಪದಗಳ ನಡುವಿನ ಸಂಬಂಧವೇನು? ಅವುಗಳು ಒಂದೇ ವಿಷಯವಾಗಿರುವುದು ಯಾಕೆ? ಅಬ್ರಹಾಮಿಕ್ ನಂಬಿಕೆಗಳಲ್ಲಿನ ವಿಶೇಷ ಗುಣವಿದು. ಭಾರತೀಯ ಭಾಷೆಗಳಲ್ಲಿ ಹುತಾತ್ಮ ಎನ್ನುವ ಪದಗಳಿಲ್ಲ ಮತ್ತು ನಾನು ಅದೇ ವಿಷಯಕ್ಕೆ ಬರುತ್ತೇನೆ. ಮಾರ್ಟ್ಯರ್ (ಹುತಾತ್ಮ) ಪದವು ಗ್ರೀಕ್‌ನ ಮಾರ್ಟುರಿಯ ಶಬ್ದದಿಂದ ಬಂದಿದೆ. ಪದ ವೈ-ಅಪ್ಸಿಲನ್(ಗ್ರೀಕ್ ವರ್ಣಮಾಲೆಯ 20ನೇ ಅಕ್ಷರ)- ಅನ್ನು ಗ್ರೀಕಿನಲ್ಲಿ ಯು ಎಂದು ಉಚ್ಛರಿಸಲಾಗುತ್ತದೆ. ಮಾರ್ಟುರಿಯ ಅಥವಾ ಮಾರ್ಟ್ಯರ್ ಅಂದರೆ ಸಾಕ್ಷಿ ಎಂದರ್ಥ ಮತ್ತು ಇಲ್ಲಿ ಸಾಕ್ಷಿಯಾಗಿರುವುದು ದೇವರು ಎನ್ನುವ ಪದದ ವಾಸ್ತವಕ್ಕೆ.
ಹೀಗಾಗಿ ಅಂತಿಮವಾಗಿ ನಾವು ಅರ್ಥ ಮಾಡಿಕೊಳ್ಳುವುದೇನೆಂದರೆ ಈ ಪದವು ನಾವು ನಿಜವಾಗಿಯೂ ಯೋಚಿಸುವ ಅರ್ಥವನ್ನು ಹೇಳುವುದಿಲ್ಲ- ಅದೆಂದರೆ, ತ್ಯಾಗ. ಅಂದರೆ ಒಬ್ಬರು ಅಂತ್ಯದಲ್ಲಿ ಸಾಕ್ಷ್ಯವು ಸತ್ಯವೆಂದು ಒತ್ತಾಯಿಸುವುದು ಎನ್ನುವ ಅರ್ಥ ಬರುತ್ತದೆ. ನನ್ನ ಹಿಂದಿ ಮತ್ತು ಗುಜರಾತಿ ಶಬ್ದಕೋಶಗಳು ಮಾರ್ಟ್ಯರ್ ಪದವನ್ನು ಅಶಹೀದ್ ಎನ್ನುವ ಅರೆಬಿಕ್ ಪದದ ಅರ್ಥ ಕೊಡುತ್ತವೆ. ಅದಕ್ಕೆ ಕಾರಣ ಹಿಂದೂ ಧರ್ಮದಲ್ಲಿ ಸಾಕ್ಷಿಗೆ ಬಹಿರಂಗವಾಗುವುದು ಎನ್ನುವುದು ಇಲ್ಲ. ಮರಾಠಿಯಲ್ಲಿ ಹುತಾತ್ಮ ಎನ್ನುವ ಬಳಕೆಯಿದೆ. ಆದರೆ ಇಲ್ಲಿ ಶಬ್ದವು ಸಾವಿನ ನಂತರದ ಜೀವನವನ್ನು ಸೂಚಿಸುತ್ತದೆ, ಮತ್ತು ಸಾಕ್ಷ್ಯಕ್ಕಿಂತ ಹೆಚ್ಚಾಗಿ ಹುತಾತ್ಮ ಪದ ತ್ಯಾಗದ ಆಯಾಮಕ್ಕೆ ಸಮೀಪದಲ್ಲಿದೆ.

ನಾನು ಇದನ್ನು ಇಲ್ಲಿ ಬರೆಯಲು ಕಾರಣ ನಾವೀಗ ಹುತಾತ್ಮರಾಗಿರುವವರ ಬಗ್ಗೆ ಹೆಚ್ಚು ಉಲ್ಲೇಖವಾಗುತ್ತಿರುವ ದಿನಗಳನ್ನು ಕಾಣುತ್ತಿದ್ದೇವೆ. ಸಿಯಾಚೆನ್‌ನಲ್ಲಿ ಕೆಲ ವಾರಗಳ ಹಿಂದೆ ಹತ್ತು ಸೈನಿಕರು ಪ್ರಾಣ ಕಳೆದುಕೊಂಡರು. ಅವರಲ್ಲಿ ಒಬ್ಬರಾದ ಲಾನ್ಸ್ ನಾಯ್ಕ್ ಹನಮಂತಪ್ಪ ಕೊಪ್ಪದ ಬಹುತೇಕ ದುರಂತದಲ್ಲಿ ಬದುಕುಳಿಯಬಹುದಾದ ಸಾಹಸ ಮೆರೆದರು. ಕೆಲ ದಿನಗಳ ನಂತರ ಭದ್ರತಾಪಡೆಯ ಐವರು ಯೋಧರು ಕಾಶ್ಮೀರದ ದಾಳಿಯಲ್ಲಿ ಮಡಿದರು. ಅವರಲ್ಲಿ ಇಬ್ಬರು ಕ್ಯಾಪ್ಟನ್ ಪವನ್ ಕುಮಾರ್ ಮತ್ತು ತುಷಾರ್ ಮಹಾಜನ್ ಆಫೀಸರುಗಳಾಗಿದ್ದ ಕಾರಣ ಪ್ರತ್ಯೇಕ ಪ್ರಶಂಸೆ ಗಳಿಸಿದರು. ನಾನು ಇತರ ಹುತಾತ್ಮರ ಬಗ್ಗೆ ಮಾತನಾಡಲು ಬಯಸುತ್ತೇನೆ.
ಭಾರತದಲ್ಲಿ ಅತೀ ಮಾರಕ ಕೆಲಸ ಯಾವುದು? ಅದನ್ನು ತಮ್ಮ ಕೆಲಸ ಅಪಾಯಕಾರಿ ಎಂದು ತಿಳಿದೇ ಮಾಡಲಾಗುತ್ತಿರುತ್ತದೆ ಮತ್ತು ಮರಣ ಮತ್ತು ಗಾಯಗಳ ಸಾಧ್ಯತೆ ಅಧಿಕವಿರುತ್ತದೆ.

ದೆಹಲಿಯಲ್ಲಿ ಈ ಕೆಲಸ ಮಾಡುವವರಲ್ಲಿ, ಶೇ 2ರಷ್ಟು ಮಂದಿಯನ್ನು ಇದು ಕೊಲ್ಲುತ್ತಿದೆ. ಝೀ ನ್ಯೂಸ್ ವೆಬ್‌ತಾಣದಲ್ಲಿರುವಂತೆ 2014ರ ವರದಿಯ ಪ್ರಕಾರ 5000 ಇರುವ ಸಮುದಾಯದಲ್ಲಿ 100 ಮರಣಗಳು ದಾಖಲಾಗಿವೆ. ಈ ಅನುಪಾತವನ್ನು ಸಶಸ್ತ್ರಪಡೆಗಳಿಗೆ ಅನ್ವಯಿಸಿದಲ್ಲಿ ವರ್ಷಕ್ಕೆ 40,000 ಯೋಧರು ಸಾವನ್ನಪ್ಪುವುದನ್ನು ನಿರೀಕ್ಷಿಸಬೇಕು. ಆಗ ಇಂತಹ ಸುದ್ದಿ ಕವರೇಜ್‌ಗೆ ಕೊನೆಯೇ ಇರುವುದಿಲ್ಲ. ಆದರೆ ನಾನು ಹೇಳುತ್ತಿರುವಂತಹ ಈ ಹುತಾತ್ಮರಿಗೆ ಮಾಧ್ಯಮಗಳ ಕವರೇಜ್ ಸಿಗುವುದಿಲ್ಲ ಮತ್ತು ಗೌರವವೂ ಸಿಗುವುದಿಲ್ಲ. ಏಕೆಂದರೆ ಅವರು ಒಳಚರಂಡಿಗಳಲ್ಲಿ ಕೆಲಸ ಮಾಡುತ್ತಾರೆ.
 ದೆಹಲಿಯ ಒಳಚರಂಡಿ ಕಾರ್ಮಿಕರು ಔದ್ಯೋಗಿಕವಾಗಿ ಮತ್ತು ಆರೋಗ್ಯ ಅಪಾಯದ ಜತೆಗೆ ಗುತ್ತಿಗೆ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಡೌನ್ ದ ಡ್ರೈನ್‌ಎನ್ನುವ ನಾನ್ ಪ್ರಾಫಿಟ್ ಪ್ರಾಕ್ಸಿಸ್ ಇಂಡಿಯಾದ 2014ರ ಜನವರಿಯ ಅಧ್ಯಯನವೊಂದು ಆಘಾತಕಾರಿ ಸತ್ಯ ಹೊರ ಹಾಕಿದೆ. ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗಳ 

ಅತಿಯಾದ ತಾಪ, ಜಾರುವ ಗೋಡೆಗಳು, ನೆಲಗಳು ಮತ್ತು ವಿಷಕಾರಿ ಅನಿಲಗಳಿಂದಾಗಿ ಅದರೊಳಗೆ ಸಾಗುವ ಪೌರ ಕಾರ್ಮಿಕರಲ್ಲಿ ಪ್ರತೀ ವರ್ಷ ದೆಹಲಿಯಲ್ಲಿಯೇ 100 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ ಬಹುತೇಕ ಒಳಚರಂಡಿ ಕಾರ್ಮಿಕರು ವೈದ್ಯಕೀಯ ಗಮನದ ಕೊರತೆಯಿಂದಾಗಿ ಹೃದಯ ರೋಗ, ಮಸ್ಕ್ಯುಲೋಸ್ಕೆಲಿಟಲ್ ರೋಗ, ಸೋಂಕುಗಳು, ಚರ್ಮದ ಸಮಸ್ಯೆಗಳು ಮತ್ತು ಶ್ವಾಸಕೋಶದ ಸಮಸ್ಯೆಗಳಂತಹ ಹಲವಾರು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಸೇರ್ಪಡೆಯಾಗಿದೆ: ಆರೋಗ್ಯ ಸಮಸ್ಯೆಗಳ ಜೊತೆಗೆ ಇವರನ್ನು ಬಾಧಿಸುವ ಇತರ ವಿಚಾರಗಳೆಂದರೆ, ಕಡಿಮೆ ವೇತನ, ಜಾತಿ ಆಧಾರಿತ ತಾರತಮ್ಯ, ಪೂರ್ವಗ್ರಹ, ಔದ್ಯೋಗಿಕ ಭದ್ರತೆಯ ಕೊರತೆ ಮತ್ತು ಸರ್ಕಾರಿ ಸಂಘಟನೆಗಳ ನಿರ್ಲಕ್ಷ್ಯ. ನಾವು ಈ ಜನರನ್ನು ಹೇಗೆ ನೋಡುತ್ತೇವೆ?
ವರದಿ ಹೇಳುವಂತೆ, ಬಹುತೇಕ ಪ್ರಕರಣಗಳಲ್ಲಿ, ಒಳಚರಂಡಿ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಆದರೆ ಅವರ ಅವಧಿ ಮುಗಿಯುವ ಮೊದಲೇ ನಿವಾರಿಸಲಾಗುತ್ತದೆ ಮತ್ತು ಒಪ್ಪಂದದ ಪ್ರಕಾರ ವೇತನವನ್ನೂ ನೀಡಲಾಗುವುದಿಲ್ಲ. ಡೆತ್ಸ್ ಇನ್ ದ ಡ್ರೈನ್ಸ್ ವರದಿ ಬರೆದ ಎಸ್ ಆನಂದ್ ಪ್ರಕಾರ, 2007ರಲ್ಲಿ ನಾನು ಮಾಡಿರುವ ಅಂದಾಜಿನಂತೆ ಭಾರತದಲ್ಲಿ ಪ್ರತೀ ವರ್ಷ 22,327 ಪುರುಷರು ಮತ್ತು ಮಹಿಳೆಯರು ವಿವಿಧ ನೈರ್ಮಲ್ಯ ಕೆಲಸದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಬಹುತೇಕ ಭಾರತವು ಜನಸಂಖ್ಯೆಯ ಈ ಭಾಗದತ್ತ ಗಮನ ಕೊಡದೆ ಇರುವ ಕಾರಣ ಮರಣದ ಕಾಳಜಿ ಅತೀ ಕಡಿಮೆ ಇರುವ ಕಾರಣ ಸರಿಯಾದ ಅಂಕಿ ಅಂಶಗಳೂ ಲಭ್ಯವಿಲ್ಲ. ಪೌರ ಕಾರ್ಮಿಕರ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿದ್ದ ಸಂತೋಷ್ ಚೌಧುರಿ ಆಗ ನನಗೆ ಹೇಳಿರುವಂತೆ, 2007ರಲ್ಲಿ ಕನಿಷ್ಠ ಭಾರತದಾದ್ಯಂತ ಮ್ಯಾನ್‌ಹೋಲ್‌ಗಳಲ್ಲಿ ಪ್ರತೀ ದಿನ ಇಬ್ಬರು ಅಥವಾ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಇದು ದಿಗ್ಭ್ರಮೆಗೊಳಿಸುವ ಸಂಖ್ಯೆಗಳು ಮತ್ತು ನಮಗೆ ಈ ಬಗ್ಗೆ ಹೆಚ್ಚು ವಿವರಗಳು ತಿಳಿಯದಿರುವುದು ಮತ್ತು ಒಟ್ಟಾಗಿ ಈ ಪ್ರಮಾಣದ ತ್ಯಾಗದ ಬಗ್ಗೆ ಅಲಕ್ಷ್ಯ ತೋರುವುದು ನಮ್ಮ ಸಮಾಜದ ಬಗ್ಗೆ ಸಾಕಷ್ಟು ಹೇಳುತ್ತದೆ. ಇದ್ಯಾವುದೂ ಉತ್ತಮವಲ್ಲ. ನಮ್ಮಲ್ಲಿ ಬಹುತೇಕರಿಗೆ ಹುತಾತ್ಮರೆನ್ನುವ ಕಲ್ಪನೆಯು ಸಮವಸ್ತ್ರ ಧರಿಸಿದ ವ್ಯಕ್ತಿಯ ಸಾವಿಗೇ ಸೀಮಿತವಾಗಿದೆ. ನಮ್ಮ ಭಾವನೆಗಳು ಅದರ ಜೊತೆಗೆ ಮಿಳಿತವಾಗಿದೆ. ಅವರ ಕೃತ್ಯಗಳನ್ನು ನಮ್ಮನ್ನು ದುಷ್ಟರಿಂದ ರಕ್ಷಿಸುವಂತೆ ಕಾಣುತ್ತದೆ ಮತ್ತು ಅವರ ತ್ಯಾಗವು ಉದ್ದೇಶಪೂರ್ವಕವಾಗಿ ಪವಿತ್ರ ಎಂದು ತೋರಿಸಲಾಗುತ್ತಿದೆ. ನಾವು 1947 ಆಗಸ್ಟ್ 14ರಂದು ಒಂದು ಸೇನೆಯನ್ನು ಪಡೆದುಕೊಂಡೆವು ಮತ್ತು ಆ ಸೇನೆ ಆ ಮಧ್ಯರಾತ್ರಿಯ ಒಂದು ಕ್ಷಣಕ್ಕೆ ಮೊದಲಿನವರೆಗೂ ಬಾಡಿಗೆಗಾಗಿ ಯುದ್ಧ ಮಾಡುತ್ತಿತ್ತು. ಜನರಲ್ ಡೈಯರ್ ಜಲಿಯನವಾಲಾ ಬಾಗ್ ಅಲ್ಲಿ ಒಂದು ಆದೇಶವನ್ನಷ್ಟೇ ಕೊಟ್ಟಿದ್ದ: ಗುರಿಯನ್ನು ಇಟ್ಟದ್ದು ಮತ್ತು ಬಂದೂಕಿನ ನಳಿಕೆಯನ್ನು ಎಳೆದದ್ದು ಗುರ್ಖಾ ರೆಜಿಮೆಂಟ್ ಮತ್ತು ಬಲೋಚ್ ರೈಫಲ್ಸ್.
ಆದರೆ ಹಾಗಿದ್ದರೂ, ಸೇವೆಯಲ್ಲಿರುವ ಎಲ್ಲಾ ಮರಣಗಳಿಗೂ ನಮ್ಮ ಗೌರವ ಮತ್ತು ನಮ್ಮ ಮೆಚ್ಚುಗೆಯ ಅಗತ್ಯವಿದೆ. ಮತ್ತು ನಮ್ಮ ಸೈನಿಕರಿಗೂ ಸಹ ಇದು ಅನ್ವಯವಾಗುತ್ತದೆ. ಆದರೆ ಅವರಂತೆಯೇ ನಮ್ಮಲ್ಲಿ ಇನ್ನೂ ಕೆಲವರು ದೇಶಕ್ಕಾಗಿ ಉದ್ದೇಶಪೂರ್ವಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ, ಮೌನವಾಗಿ ಮತ್ತು ಯಾವುದೇ ಗುರುತುಗಳಿಲ್ಲದೆಯೂ ಸಹ.

ಕೃಪೆ : livemint.com

share
ಆಕರ್ ಪಟೇಲ್
ಆಕರ್ ಪಟೇಲ್
Next Story
X