ನಾಳೆ ಸುನ್ನತ್ ಜಮಾಅತ್ ಅದರ್ಶ ವಿಶಧೀಕರಣ, ಶೈಖುನಾ ಝೈನುಲ್ ಉಲಮಾರವರ ಅನುಸ್ಮರಣಾ ಕಾರ್ಯಕ್ರಮ
ಉಳ್ಳಾಲ. ಫೆ, 27: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಮತ್ತು ಬೆಳ್ಮ ರೆಂಜಾಡಿ ಶಾಖೆ ವತಿಯಿಂದ ಸುನ್ನತ್ ಜಮಾಅತ್ ಅದರ್ಶ ವಿಶಧೀಕರಣ ಮತ್ತು ಶೈಖುನಾ ಝೈನುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಫೆ, 29 ಸೋಮವಾರ ಸಂಜೆ 4ಗಂಟೆಗೆ ಝೈನುಲ್ ಉಲಮಾ ವೇದಿಕೆ ದೇರಳಕಟ್ಟೆ ಸಿಟಿ ಗ್ರೌಂಡ್ನಲ್ಲಿ ನಡೆಯಲಿದೆ.
ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀರ್ ದಾರಿಮಿ ಅನು್ಮರಣಾ ಭಾಷಣವನ್ನು ಮಾಡಲಿದ್ದು, ಪಾನೂರು ಜಮಾಲಿಯಾ ಅರಬಿಕ್ ಕಾಲೇಜ್ನ ಪ್ರಿನ್ಸಿಪಾಲ್ ಉಸ್ತಾದ್ ಸಲೀಂ ಫೈಝಿ ಇರ್ಫಾನಿ ಅಲ್-ಅಝ್ಝರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Next Story





