Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 12 ವರ್ಷಗಳ ಹಿಂದಿನ ಶೀತಲೀಕೃತ ಭ್ರೂಣದಿಂದ...

12 ವರ್ಷಗಳ ಹಿಂದಿನ ಶೀತಲೀಕೃತ ಭ್ರೂಣದಿಂದ ಪ್ರಣಾಳ ಶಿಶು ಜನನ

ವಾರ್ತಾಭಾರತಿವಾರ್ತಾಭಾರತಿ27 Feb 2016 11:09 PM IST
share

ಬೀಜಿಂಗ್, ಫೆ. 27: ಚೀನಾದ ಶಾಂಕ್ಸಿ ರಾಜ್ಯದಲ್ಲಿ 12 ವರ್ಷಗಳ ಹಿಂದೆ ಶೀತಲೀಕರಿಸಿದ ಭ್ರೂಣದಿಂದ ಆರೋಗ್ಯವಂತ ಶಿಶುವೊಂದು ಜನಿಸಿದೆ. ದೇಶದ ಅತ್ಯಂತ ದೀರ್ಘ ಕಾಲ ಸಂರಕ್ಷಿಸಲ್ಪಟ್ಟ ಪ್ರಣಾಳ ಶಿಶು ಎಂಬ ಹೆಗ್ಗಳಿಕೆಯನ್ನು ಈ ಶಿಶು ಪಡೆದುಕೊಂಡಿದೆ.

40 ವರ್ಷದ ಲಿ ಎಂಬ ಮಹಿಳೆ ಪ್ರಾಂತಿಯ ರಾಜಧಾನಿ ಕ್ಸಿಯನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಬುಧವಾರ ಬೆಳಗ್ಗೆ ತನ್ನ ಎರಡನೆ ಮಗನಿಗೆ ಜನ್ಮ ನೀಡಿದರು.

ಅವರಿಗೆ ಸಾಮಾನ್ಯ ರೀತಿಯಲ್ಲಿ ಗರ್ಭಧರಿಸುವಿಕೆಯಲ್ಲಿ ಸಮಸ್ಯೆಯಿತ್ತು. ಪ್ರಣಾಳ ಶಿಶು (ಟೆಸ್ಟ್ ಟ್ಯೂಬ್) ತಂತ್ರಜ್ಞಾನದ ಮೂಲಕ ಗರ್ಭ ಧರಿಸಲು ಲಿ 2003ರಿಂದ ಪ್ರಯತ್ನಿಸಿದರು.

 ಆ ವರ್ಷ ವೈದ್ಯರು ಮಹಿಳೆಯ 12 ಅಂಡಗಳನ್ನು ಸಂಗ್ರಹಿಸಿದರು ಹಾಗೂ ಅವರ ಗಂಡನ ವೀರ್ಯದೊಂದಿಗೆ 12 ಭ್ರೂಣಗಳನ್ನು ಸೃಷ್ಟಿಸಿದರು. ಅವುಗಳ ಪೈಕಿ ಎರಡು ಭ್ರೂಣಗಳನ್ನು ಮಹಿಳೆಯ ಗರ್ಭಾಶಯದೊಳಕ್ಕೆ ಸೇರಿಸಿದರು. ಏಳು ಭ್ರೂಣಗಳನ್ನು ಶೀತಲೀಕರಿಸಿದರು.

2004ರಲ್ಲಿ ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು.

ಕಳೆದ ವರ್ಷ ಚೀನಾ ಒಂದೇ ಮಗು ನೀತಿಯನ್ನು ಸಡಿಲಿಸಿದಾಗ, ಎರಡನೆ ಮಗುವನ್ನು ಪಡೆಯಲು ಆಕೆ ನಿರ್ಧರಿಸಿದರು. ಈ ಸುದೀರ್ಘ ಅವಧಿಯಲ್ಲಿ ಮೂರು ಭ್ರೂಣಗಳು ಜೀವಂತವಾಗಿ ಉಳಿದಿದ್ದವು. ಅವುಗಳ ಪೈಕಿ ಅತ್ಯುತ್ತಮ ಎರಡನ್ನು ವೈದ್ಯರು ಆಕೆಯ ಗರ್ಭಾಶಯದೊಳಕ್ಕೆ ಸೇರಿಸಿದರು. ಅವುಗಳ ಪೈಕಿ ಒಂದು ಬದುಕುಳಿಯಿತು.

‘‘ನಮ್ಮ ಮೊದಲ ಮಗನಿಗೆ ಈಗ 12 ವರ್ಷ. ಮುಂದೆ ಯಾವಾಗಲಾದರೂ ಎರಡನೆ ಮಗುವನ್ನು ಪಡೆಯುವ ಉದ್ದೇಶದಿಂದ ಭ್ರೂಣಗಳನ್ನು ಸಂರಕ್ಷಿಸಿಡಲಾಗಿತ್ತು. ಅದೃಷ್ಟವಶಾತ್ ನಾವು ಅದರಲ್ಲಿ ಯಶಸ್ವಿಯಾಗಿದ್ದೇವೆ’’ ಎಂದು ಮಹಿಳೆಯ ಗಂಡ ಹೇಳಿದ್ದಾರೆ.

ಮೊದಲ ಪ್ರಣಾಳ ಶಿಶು

ಜಗತ್ತಿನ ಮೊದಲ ಪ್ರಣಾಳ ಶಿಶು ಲೂಯಿಸ್ ಬ್ರೌನ್ ಜನಿಸಿದ್ದು ಬ್ರಿಟನ್‌ನಲ್ಲಿ 1978ರಲ್ಲಿ.

ಅಂದಿನಿಂದ ಸುಮಾರು 50 ಲಕ್ಷ ಪ್ರಣಾಳ ಶಿಶುಗಳು ಜನಿಸಿವೆ.

ಭಾರತದ ಮೊದಲ ಪ್ರಣಾಳ ಶಿಶು ದುರ್ಗಾ ಸೃಷ್ಟಿಕರ್ತನ ದುರಂತ ಅಂತ್ಯ

ಭಾರತದ ಮೊದಲ ಹಾಗೂ ಜಗತ್ತಿನ ಎರಡನೆ ಪ್ರಣಾಳ ಶಿಶು ದುರ್ಗಾ ಜನಿಸಿದ್ದು ಜಗತ್ತಿನ ಮೊದಲ ಪ್ರಣಾಳ ಶಿಶು ಲೂಯಿಸ್ ಬ್ರೌನ್ ಬ್ರಿಟನ್‌ನಲ್ಲಿ ಜನಿಸಿದ 67 ದಿನಗಳ ಬಳಿಕ. ಅಂದರೆ 1978 ಅಕ್ಟೋಬರ್ 3 ರಂದು.

ಈ ಸಾಧನೆಯ ರೂವಾರಿ ಕೋಲ್ಕತದ ವೈದ್ಯ ಸುಭಾಶ್ ಮುಖೋಪಾಧ್ಯಾಯ.

ಆದರೆ, ದುರದೃಷ್ಟವಶಾತ್ ರಾಜ್ಯ ಸರಕಾರ ಈ ಜೀವ ವಿಜ್ಞಾನಿಗೆ ಕಿರುಕುಳ ನೀಡಿತು ಹಾಗೂ ತನ್ನ ಸಾಧನೆಯನ್ನು ಅಂತಾರಾಷ್ಟ್ರೀಯ ವಿಜ್ಞಾನ ಸಮುದಾಯದೊಂದಿಗೆ ಹಂಚಿಕೊಳ್ಳಲು ಸರಕಾರ ಅವಕಾಶ ಕೊಡಲಿಲ್ಲ.

ಇದರಿಂದ ರೋಸಿದ ಸುಭಾಶ್ ಮುಖೋಪಾಧ್ಯಾಯ 1981 ಜೂನ್ 19ರಂದು ಆತ್ಮಹತ್ಯೆ ಮಾಡಿಕೊಂಡರು.

ಅವರ ಬದುಕು, ಸಾಧನೆ ಮತ್ತು ಸಾವಿನ ಕಥಾವಸ್ತುವನ್ನೊಳಗೊಂಡ ಹಿಂದಿ ಚಿತ್ರ ‘ಏಕ್ ಡಾಕ್ಟರ್ ಕಿ ವೌತ್’ 1990ರಲ್ಲಿ ತೆರೆ ಕಂಡಿದೆ. ಬಂಗಾಳಿ ನಿರ್ದೇಶಕ ತಪನ್ ಸಿನ್ಹಾ ನಿರ್ದೇಶನದ ಚಿತ್ರದಲ್ಲಿ ಪಂಕಜ್ ಕಪೂರ್, ಶಬಾನಾ ಅಝ್ಮಿ, ಇರ್ಫಾನ್ ಖಾನ್ ಮುಂತಾದವರು ನಟಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X