ಪಡೀಲ್ ನಲ್ಲಿ ಚೆರುಶ್ಶೇರಿ ಉಸ್ತಾದರ ಅನುಸ್ಮರಣೆ

ಪುತ್ತೂರು, ಫೆ.28 : ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯಧರ್ಶಿಯಾಗಿದ್ದ ಝೈನುಲ್ ಉಲಮಾ ಝೈನುದ್ಧೀನ್ ಮುಸ್ಲಿಯಾರ್ ಚೆರುಶ್ಶೇರಿ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಫೆ.28 ರಂದು ಮುಹೀನುಲ್ ಇಸ್ಲಾಂ ಮದರಸ ಪಡೀಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹೀನುಲ್ ಇಸ್ಲಾಂ ಜುಮಾ ಮಸೀದಿ ಪಡೀಲ್ ಇದರ ಅಧ್ಯಕ್ಷ ಹಾಜಿ.ಮಹಮ್ಮದ್ ವಹಿಸಿದ್ದರು ಖತೀಬ್ ಮಹಮ್ಮದ್ ಹನೀಫ್ ದಾರಿಮಿ ನೆಕ್ಕಿಲಾಡಿ ಇವರು ಅನುಸ್ಮರಣಾ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಇಬ್ರಾಹಿಂ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಹಾಜಿ ಇಬ್ರಾಹಿಂ ಪಡೀಲ್ , ಅಬ್ಬಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.
Next Story





