Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿತ್ತಸಚಿವ ಜೇಟ್ಲಿ ಎದುರು ಕೃಷಿಕರು...

ವಿತ್ತಸಚಿವ ಜೇಟ್ಲಿ ಎದುರು ಕೃಷಿಕರು ಮತ್ತು ಹೂಡಿಕೆದಾರರನ್ನು ಸಂತುಷ್ಟಗೊಳಿಸುವ ಕಠಿಣ ಸವಾಲು

ಬಜೆಟ್ 2016

ವಾರ್ತಾಭಾರತಿವಾರ್ತಾಭಾರತಿ28 Feb 2016 10:26 PM IST
share
ವಿತ್ತಸಚಿವ ಜೇಟ್ಲಿ ಎದುರು ಕೃಷಿಕರು ಮತ್ತು ಹೂಡಿಕೆದಾರರನ್ನು  ಸಂತುಷ್ಟಗೊಳಿಸುವ ಕಠಿಣ ಸವಾಲು

ಹೊಸದಿಲ್ಲಿ,ಫೆ.28: ಸೋಮವಾರ ಸಂಸತ್ತಿನಲ್ಲಿ ತನ್ನ ತೃತೀಯ ಮುಂಗಡಪತ್ರವನ್ನು ಮಂಡಿಸಲಿರುವ ವಿತ್ತಸಚಿವ ಅರುಣ್ ಜೇಟ್ಲಿ ಅವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಅಗತ್ಯಗಳನ್ನು ಸಮತೋಲನಗೊಳಿಸಬೇಕಾದ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಇದೇ ವೇಳೆ ಜಾಗತಿಕ ಪ್ರತಿಕೂಲ ಸ್ಥಿತಿಗಳ ನಡುವೆಯೂ ಹೆಚ್ಚಿನ ಬೆಳವಣಿಗೆಗಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಸಂಪನ್ಮೂಲ ಕ್ರೋಢೀಕರಣವನ್ನು ಅವರು ಬಯಸಿದ್ದಾರೆ.
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮುಂಗಡಪತ್ರದಲ್ಲಿ ತೆರಿಗೆಗೆ ಅರ್ಹ ಆದಾಯ ಮಿತಿಗಳಲ್ಲಿ ಯಥಾಸ್ಥಿತಿ ಮುಂದುವರಿಯಬಹುದು ಮತ್ತು ವಿನಾಯಿತಿಗಳು ಪರಿಷ್ಕರಣೆಗೊಳಪಡಬಹುದು.
ಸತತ ಬರಗಾಲಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಂಕಷ್ಟಗಳು ಸಾಮಾಜಿಕ ಯೋಜನೆಗಳಿಗಾಗಿ ಹೆಚ್ಚು ಹಣವನ್ನು ವ್ಯಯಿಸಲು ವಿತ್ತಸಚಿವರ ಮೇಲೆ ಗಣನೀಯ ಒತ್ತಡವನ್ನು ಹೇರಿವೆ. ಇದೇ ವೇಳೆ ತ್ವರಿತ ಸುಧಾರಣೆ ಕ್ರಮಗಳಿಗಾಗಿ ಕಾತುರದಿಂದ ಕಾಯುತ್ತಿರುವ ವಿದೇಶಿ ಹೂಡಿಕೆದಾರರ ವಿಶ್ವಾಸವನ್ನೂ ಅವರು ಮರಳಿ ಗೆದ್ದುಕೊಳ್ಳಬೇಕಾಗಿದೆ.
ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ಏಳನೇ ವೇತನ ಆಯೋಗದ ಶಿಫಾರಸುಗಳಿಂದಾಗಿ 1.02 ಕೋ.ರೂ.ಗಳಷ್ಟು ಭಾರೀ ಮೊತ್ತವನ್ನು ಪಾವತಿಸಬೇಕಾಗಿರುವುದು ಜೇಟ್ಲಿಯವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದಿನ ವರ್ಷ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.5ಕ್ಕೆ ತಗ್ಗಿಸುವ ತನ್ನ ಹಿಂದಿನ ಪ್ರಕಟಿತ ಗುರಿಯೊಂದಿಗೆ ರಾಜಿಯನ್ನು ಮಾಡಿಕೊಳ್ಳದೆ ಅವರು ಇದನ್ನು ಎಷ್ಟರ ಮಟ್ಟಿಗೆ ಸಾಧಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
  ಕಾರ್ಪೊರೇಟ್ ತೆರಿಗೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಶೇ.30ರಿಂದ ಶೇ.25ಕ್ಕೆ ತಗ್ಗಿಸುವ ತನ್ನ ಹಿಂದಿನ ವರ್ಷದ ಭರವಸೆಯನ್ನು ಜೇಟ್ಲಿಯವರು ಪೂರೈಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಗೆ ಅವರು ನಾಳೆಯ ಮುಂಗಡಪತ್ರದಲ್ಲಿ ಚಾಲನೆ ನೀಡಬಹುದೆಂದು ನಿರೀಕ್ಷಿಸಲಾಗಿದೆ,ಜೊತೆಗೆ ಇದರಿಂದಾಗಿ ಕಾರ್ಪೊರೇಟ್ ತೆರಿಗೆ ಆದಾಯ ಯಥಾಸ್ಥಿತಿಯಲ್ಲಿ ಮಂದುವರಿಯುವಂತಾಗಲು ತೆರಿಗೆ ವಿನಾಯಿತಿಗಳ ಹಿಂದೆಗೆದುಕೊಳ್ಳುವಿಕೆಯನ್ನು ಅವರು ಸೂಚಿಸಬಹುದು. ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿತ್ತಸಚಿವರು ಪರೋಕ್ಷ ತೆರಿಗೆ ದರಗಳನ್ನು ಹೆಚ್ಚಿಸುವುದು ಅಥವಾ ಹೊಸ ತೆರಿಗೆಗಳನ್ನು ಹೇರುವುದು ಅಗತ್ಯವಾಗಬಹುದು. ಕಳೆದ ವರ್ಷ ಶೇ.14.5ಕ್ಕೆ ಏರಿಕೆಯಾಗಿರುವ ಸೇವಾ ತೆರಿಗೆಯು ಜಿಎಸ್‌ಟಿಯಲ್ಲಿ ಚಿಂತನೆ ನಡೆಯುತ್ತಿರುವ ಶೇ.18ರ ಮಟ್ಟಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇನ್ನೊಂದು ಏರಿಕೆಯನ್ನು ಕಾಣಬಹುದು.  ಕಳೆದ ವರ್ಷ ಸ್ವಚ್ಛ ಭಾರತ ಸೆಸ್ ಹೇರಿದಂತೆ ಈ ವರ್ಷ ಸ್ಟಾರ್ಟ್‌ಪ್ ಇಂಡಿಯಾ ಅಥವಾ ಡಿಜಿಟಲ್ ಇಂಡಿಯಾದಂತಹ ಹೊಸ ಉಪಕ್ರಮಗಳಿಗೆ ಮತ್ತು ಇತರ ಕಾರ್ಯಕ್ರಮಗಳಿಗೆ ಹಣಕಾಸು ಕ್ರೋಢಿಕರಿಸಲು ಹೊಸ ಸೆಸ್ ಹೇರಲಾಗುವುದೆಂಬ ಊಹಾಪೋಹಗಳೂ ಕೇಳಿ ಬರುತ್ತಿವೆ.
ಹೂಡಿಕೆ ಚಕ್ರದ ಪುನಶ್ಚೇತನವೂ ಜೇಟ್ಲಿಯವರ ಅಜೆಂಡಾದಲ್ಲಿರಲಿದೆ.
2015-16ರಲ್ಲಿ ಬಂಡವಾಳ ವೆಚ್ಚವನ್ನು ಹಿಂದಿನ ಹಣಕಾಸು ವರ್ಷದಲ್ಲಿದ್ದ ಮೊತ್ತಕ್ಕಿಂತ ಶೇ.25.5ರಷ್ಟು ಹೆಚ್ಚಿಸಲಾಗಿತ್ತಾದರೂ ಅದಿನ್ನೂ ಜಿಡಿಪಿಯ ಶೇಕಡಾ 1.7ರ ಮಟ್ಟದಲ್ಲಿಯೇ ಇದ್ದು ಶೇ.2ರವರೆಗೆ ಏರಿಕೆಯಾಗಬೇಕಾದ ಅಗತ್ಯವಿದೆ.
ಖಾಸಗಿ ಹೂಡಿಕೆಯು ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲವಾದ್ದರಿಂದ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ವೆಚ್ಚ ಮತ್ತು ಸಾರ್ವಜನಿಕ ವ್ಯಯವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಜೇಟ್ಲಿಯವರಿಗಿದೆ.
 ಜಾಗತಿಕ ಬೇಡಿಕೆ ಮತ್ತು ಹೆಚ್ಚಿನ ಪೂರೈಕೆಯಿಂದಾಗಿ ಸರಕು ಆಧಾರಿತ ಕ್ಷೇತ್ರಗಳು ಒತ್ತಡದಲ್ಲಿರುವುದರಿಂದ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಈ ಕ್ಷೇತ್ರಗಳತ್ತಲೂ ಮುಂಗಡಪತ್ರವು ಗಮನ ಹರಿಸುವುದು ಅಗತ್ಯವಾಗಿದೆ.
ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ಜೊತೆಗೆ ಬ್ಯಾಂಕ್ ಮರುಬಂಡವಾಳೀಕರಣದ ಸವಾಲು ಕೂಡ ಜೇಟ್ಲಿಯವರಿಗೆ ಎದುರಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X