Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಮಠಾಧೀಶರು ಸಮಾಜ ಒಂದುಗೂಡಿಸಲು...

ಮಠಾಧೀಶರು ಸಮಾಜ ಒಂದುಗೂಡಿಸಲು ಯತ್ನಿಸಿದರೆ ರಾಜಕಾರಣಿಗಳು ಛಿದ್ರಗೊಳಿಸುತ್ತಿದ್ದಾರೆ.

ಪಿ.ಎ. ರೈಪಿ.ಎ. ರೈ28 Feb 2016 11:19 PM IST
share
ಮಠಾಧೀಶರು ಸಮಾಜ ಒಂದುಗೂಡಿಸಲು ಯತ್ನಿಸಿದರೆ ರಾಜಕಾರಣಿಗಳು ಛಿದ್ರಗೊಳಿಸುತ್ತಿದ್ದಾರೆ.



                                             -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
    
ರಾಜಕಾರಣಿಗಳು ಛಿದ್ರಗೊಳಿಸುತ್ತಿರುವುದರಿಂದಲೇ, ಮಠಾಧೀಶರಿಗೆ ಒಂದುಗೂಡಿಸುವ ಕೆಲಸ ಸಿಕ್ಕಿರುವುದು. ಇಲ್ಲವಾದರೆ ಅವರು ನಿರುದ್ಯೋಗಿಗಳಾಗಿರಬೇಕಾಗಿತ್ತು.

---------------------
     ವಾಚು ಪ್ರಕರಣ ನಾಯಕತ್ವ ಬದಲಿಸುತ್ತೆ ಎಂಬುದು ಭ್ರಮೆ
                                                        -ಸಿದ್ದರಾಮಯ್ಯ, ಮುಖ್ಯಮಂತ್ರಿ
    ವಾಚು ಕೈ ಬದಲಿಸುವುದಂತೂ ಖಂಡಿತ.
---------------------
     
        ಕನ್ನಡದ ಕೆಲಸ ಸರಿಯಾಗಿ ಆಗುತ್ತಿಲ್ಲ. -ಡಾ. ಎಂ. ವೀರಪ್ಪ ಮೊಯ್ಲಿ, ಸಂಸದ
    ಅದಕ್ಕೇ ಕನ್ನಡದಲ್ಲಿ ಕಲಿತವರಿಗೆ ಕೆಲಸ ಕೊಡುವುದಿಲ್ಲ.
---------------------
     ಮನೆಯ ಬೆಕ್ಕನ್ನು ಹೇಗೆ ದೂರ ಮಾಡಲಾಗುವುದಿಲ್ಲವೋ, ಹಾಗೆಯೇ ನಮ್ಮ ಸಂಪ್ರದಾಯಗಳನ್ನು ದೂರ ಮಾಡಲಾಗುವುದಿಲ್ಲ
                       -ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
    
ಮನೆಯ ಬೆಕ್ಕು ಕಳ್ಳ ಬೆಕ್ಕಾದರೆ ಕಷ್ಟ.

---------------------
                             
                                                             ಚಾ ಮಾರುವವನೊಬ್ಬ ಪ್ರಧಾನಿಯಾಗಿರುವುದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. -ನರೇಂದ್ರ ಮೋದಿ, ಪ್ರಧಾನಿ
    ಚಾ ಮಾರಿದಂತೆ ದೇಶವನ್ನೂ ಮಾರಿದರೆ ಸಹಿಸುವುದಾದರೂ ಹೇಗೆ?
---------------------
     ದಲಿತರು ಮೀಸಲಾತಿಯಿಂದ ಹೊರಬರಬೇಕು
                                                          -ಸತೀಶ್ ಜಾರಕಿಹೊಳಿ, ಸಚಿವ
    
ಮೊದಲು ಅವರನ್ನು ಶೋಷಣೆಯಿಂದ ಹೊರತನ್ನಿ.

---------------------
     ಭಾರತ ನೇಪಾಳದ ಹಿರಿಯಣ್ಣ, ದೊಡ್ಡಣ್ಣನಲ್ಲ
                                                         -ಸುಷ್ಮಾ ಸ್ವರಾಜ್, ಕೇಂದ್ರ ಸಚಿೆ
    ಹಿರಿಯಕ್ಕ, ದೊಡ್ಡಕ್ಕ ಎಂದು ಕರೆಯಬೇಕೇ?
---------------------
     ಪುಂಡರನ್ನು ನಿಯಂತ್ರಿಸಲು ದೇಶದ್ರೋಹ ಕಾನೂನೇ ಬೇಕು
                                  -ನ್ಯಾ. ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ
    ಆದರೆ ಅದೀಗ ಬಳಕೆಯಾಗುತ್ತಿರುವುದು ಅಮಾಯಕ ವಿದ್ಯಾರ್ಥಿಗಳ ಮೇಲೆ.
---------------------
     ನನ್ನನ್ನು ಮುಗಿಸಲು ಕೆಲವು ಶಕ್ತಿಗಳು ಸಂಚು ನಡೆಸುತ್ತಿವೆ.
                                                             -ನರೇಂದ್ರ ಮೋದಿ, ಪ್ರಧಾನಿ
    
ಹಾಗೆಂದು ನೀವು ಅಡ್ವಾಣಿಯ ಕಡೆಗೆ ವಾರೆ ನೋಟ ಬೀರಿದ್ದು ಸರಿಯಲ್ಲ

 ---------------------
     ಮೀಸಲಿಗೆ ಅರ್ಹತೆಯನ್ನು ನಿರ್ಧರಿಸಲು ರಾಜಕೀಯೇತರ ಸಂಸ್ಥೆಯೊಂದನ್ನು ರಚಿಸಬೇಕು
                                         -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
    ಆರೆಸ್ಸೆಸ್ ರಾಜಕೀಯೇತರ ಸಂಸ್ಥೆ ಎಂದು ಈಗಾಗಲೇ ಘೋಷಿಸಿದ್ದೀರಿ ಅಲ್ಲವೇ?
---------------------
     ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ.
                                                -ಕೃಷ್ಣ ಜೆ. ಪಾಲೆಮಾರ್, ಮಾಜಿ ಸಚಿವ
    
 ಬ್ಲೂಫಿಲಂಗಳು ಮತ್ತೆ ಸದನದೊಳಗೆ ಪ್ರವೇಶಿಸಲಿದೆ ಎಂದಾಯಿತು.

---------------------
     ತಾಪಂ-ಜಿಪಂ ಚುನಾವಣಾ ಫಲಿತಾಂಶದಿಂದ ಬೇಸರವಾಗಿಲ್ಲ
                                             -ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
    

     ಅಭ್ಯಾಸವಾಗಿದೆ ಎಂದು ಕಾಣುತ್ತದೆ.

...........................

ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು.
                                       -ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
    
ಅದನ್ನು ದಮನಿಸುವುದು ನನ್ನ ಹಕ್ಕು ಎನ್ನುತ್ತಿದ್ದಾರೆ ಮೋದಿ.

---------------------
     ಭಾರತವು ಭಯೋತ್ಪಾದಕರ ಸಣ್ಣ ಗೂಡಿನ ಮಧ್ಯೆ ಸಿಲುಕಿಗೊಂಡಿದೆ.
-ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
    
ಸದ್ಯಕ್ಕೆ ಭಯೋತ್ಪಾದಕರೇ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆಯೇ ಎನ್ನುವ ಶಂಕೆ ಜನರದು

. ---------------------
     ನಿಮಗೆ (ವಿಪಕ್ಷ) ಸವಾಲು ಹಾಕುತ್ತೇನೆ. ನನ್ನ ಜಾತಿ ಯಾವುದು ಹೇಳಿ?
-ಸ್ಮತಿ ಇರಾನಿ, ಕೇಂದ್ರ ಸಚಿವೆ
    ಇದೇ ಪ್ರಶ್ನೆಯನ್ನು ಕೆಳಜಾತಿಯ ಜನರು ಹೆಮ್ಮೆಯಿಂದ ಕೇಳಲಾರರು.
---------------------
     ಕೆಲವು ಸಚಿವರನ್ನು ಬದಲಿಸದಿದ್ದರೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ.
-ಎಚ್. ವಿಶ್ವನಾಥ್, ಕಾಂಗ್ರೆಸ್ ಮುಖಂಡ
    ಕಾಂಗ್ರೆಸ್‌ನ್ನು ಬದಲಿಸದೇ ಇದ್ದರೆ ಜನರಿಗೆ ಭವಿಷ್ಯವಿಲ್ಲ.
---------------------
     ನನ್ನ ಕಂಡರೆ ಸರಕಾರಕ್ಕೆ ಭಯ
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
    
ಕಾಂಗ್ರೆಸ್‌ಗೂ ಕೂಡ.

---------------------
     ಸಿನೆಮಾ ಬೇರೆ ಪರ್ಸನಲ್ ಲೈಫ್ ಬೇರೆ.
-ಶಿವರಾಜ್ ಕುಮಾರ್, ಚಿತ್ರನಟ
    
ಹೌದು. ಕಳೆದ ಚುನಾವಣೆಯಲ್ಲಿ ಅದು ಸಾಬೀತಾಯಿತು.

---------------------
     ಸಂಸ್ಕೃತ ಭಾಷೆ ಉಳಿದರೆ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿಯುತ್ತದೆ.
-ವಜುಭಾಯಿ ವಾಲಾ, ರಾಜ್ಯಪಾಲ
    ಸಂಸ್ಕೃತ ಸತ್ತ ಭಾಷೆ ಎಂದು ಹೇಳುತ್ತಾರಲ್ಲ!
---------------------

share
ಪಿ.ಎ. ರೈ
ಪಿ.ಎ. ರೈ
Next Story
X