Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಜ್ಯಕ್ಕೆ ದಕ್ಕದ ಪ್ರಭು ರೈಲು...

ರಾಜ್ಯಕ್ಕೆ ದಕ್ಕದ ಪ್ರಭು ರೈಲು...

ಆರ್‌../... .ಬಿ ಶೇಣವಆರ್‌../... .ಬಿ ಶೇಣವ28 Feb 2016 11:22 PM IST
share

 ಕನ್ನಡಿಗರಾದ ಸದಾನಂದ ಗೌಡರನ್ನು ರೈಲ್ವೆಮಂತ್ರಿ ಪದವಿಯಿಂದ ಮೋದಿಯವರು ಅವಮಾನಕರ ರೀತಿಯಲ್ಲಿ ತೆಗೆದು ಹಾಕಿ ಸುರೇಶ್ ಪ್ರಭುವನ್ನು ರೈಲ್ವೆ ಮಂತ್ರಿ ಮಾಡಿದಾಗ ‘‘ಕರ್ನಾಟಕದ ಮಗ ಹೋಗಿ ಕರ್ನಾಟಕದ ಅಳಿಯ ರೈಲ್ವೆ ಮಂತ್ರಿ ಆದರು, ಹಾಗಾಗಿ ಕನ್ನಡಿಗರಿಗೆ ಅನ್ಯಾಯವಾಗಲಿಕ್ಕಿಲ್ಲ’’ ಎಂದು ಕನ್ನಡಿಗರು ಸಮಾಧಾನಪಟ್ಟಿದ್ದರು. ಆದರೆ ಸುರೇಶ್ ಪ್ರಭುಈಗ ಎರಡನೇ ಬಾರಿಗೆ ರೈಲ್ವೆ ಬಜೆಟ್ ಮಂಡಿಸಿದ್ದಾರೆ, ಆದರೆ ಈ ಎರಡೂ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಅಷ್ಟೇ ಅಲ್ಲ ಹಿಂದಿನ ಉತ್ತರ ಭಾರತೀಯ ರೈಲ್ವೆ ಮಂತ್ರಿಗಳು ಕೊಟ್ಟಿದ್ದಷ್ಟೂ ಈ ಕರ್ನಾಟಕದ ಅಳಿಯ ಕನ್ನಡಿಗರಿಗೆ ಕೊಟ್ಟಿಲ್ಲ. ಆದರೂ ಕರ್ನಾಟಕದ ಬಿಜೆಪಿ ಸಂಸದರು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವುದು ತಮಾಷೆಯಾಗಿದೆ.
 
 
 ಮೂಲತಃ ಶಿವಸೇನೆಯಿಂದ ಬಂದಿರುವ ಪಕ್ಕಾ ಮರಾಠಿಗನಾಗಿರುವ ಈ ಸುರೇಶ್ ಪ್ರಭುವನ್ನು ಕರ್ನಾಟಕದ ಅಳಿಯ ಎಂದು ಹೇಳಿದ್ದು ಯಾವ ಬೆಪ್ಪನೋ ಗೊತ್ತಿಲ್ಲ. ಈ ಅಳಿಯ ಮನೆ ತೊಳೆಯ ಆಗಿ ತನ್ನ ಅತ್ತೆ ಮನೆ ಕರ್ನಾಟಕಕ್ಕೆ ಚೂರು ಪಾರು ಕೊಟ್ಟು ಕೈತೊಳೆದುಕೊಂಡಿದ್ದಾರೆ. ತನ್ನದ್ದೇ ಅತ್ತೆ ಮನೆ ಇರುವ ಕಾರವಾರವನ್ನು ಸಂಪರ್ಕಿಸುವ ಅತಿ ಮುಖ್ಯ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಈತ ಕೊಟ್ಟಿದ್ದು ಜುಜುಬಿ 18 ಕೋಟಿ ರೂ. ಹಾಗಾದರೆ ಈ 160 ಕಿ.ಮೀ ಮಾರ್ಗ ಪೂರ್ತಿಯಾಗಲು ಇನ್ನೂ ಐವತ್ತು ವರ್ಷಗಳಾದರೂ ಬೇಕು. ಅಷ್ಟರಲ್ಲಿಯೇ ಯಾವುದಾದರೂ ಪರಿಸರ-ವ್ಯಾಧಿ ಮತ್ತೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿ ಅಡ್ಡಗಾಲು ಖಂಡಿತಾ ಹಾಕುತ್ತಾನೆ. ಈ ಮಾರ್ಗ ಪೂರ್ತಿಯಾಗುವಾಗ ನಾನು ಬದುಕಿರುವುದಿಲ್ಲ ಬಿಡಿ. ಯಡಿಯೂರಪ್ಪನವರ ಅತ್ಯಂತ ಮಹತ್ವಾಕಾಂಕ್ಷೆಯ ಶಿವಮೊಗ್ಗ-ತಾಳಗುಪ್ಪ-ಹೊನ್ನಾವರ ಮಾರ್ಗಕ್ಕೆ ಈಗ ಕೊಟ್ಟಿದ್ದು ಪುಡಿಗಾಸು. ಉತ್ತರ ಕನ್ನಡ ಜಿಲ್ಲೆ ಸುರೇಶ್ ಪ್ರಭುವಿನ ಅತ್ತೆ ಮನೆ ಆದರೂ ಈ ಉತ್ತರ ಕನ್ನಡ ಜಿಲ್ಲೆಗೆ ಪ್ರಭುವಿನಿಂದ ಮಂತ್ರದೊಟ್ಟಿಗೆ ಕೇವಲ ಉಗುಳು ಮಾತ್ರ ಸಿಕ್ಕಿದೆ. ಹೋದ ವರ್ಷಕ್ಕಿಂತ ಈ ಸಾರಿ ಕರ್ನಾಟಕ್ಕೆ ರೂ.250 ಕೋಟಿ ಹೆಚ್ಚು ಸಿಕ್ಕಿದೆ ಎಂದು ವಾದಿಸುವ ಬಿಜೆಪಿಯವರು ಗಮನಿಸಬೇಕೆಂದರೆ ಹಣದುಬ್ಬರ ಲೆಕ್ಕ ಹಾಕಿದರೆ ಈ 250 ಕೋಟಿ ರೂಪಾಯಿ ಹೆಚ್ಚಿನ ಅನುದಾನ ಎಂದು ಪರಿಗಣಿಸಲಾಗದು. ಕೆಲವೇ ತಿಂಗಳ ಹಿಂದೆ ಈ ಪ್ರಭು ಉಡುಪಿಗೆ ಬಂದಿದ್ದಾಗ ತಾನು ಕರಾವಳಿಯ ಹಿಂದೂ ಕ್ಷೇತ್ರಗಳ ಪ್ರವಾಸಿ ಕಾರಿಡಾರ್ ಆಗಿ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಹೊರನಾಡು ಇವನ್ನೂ ಒಂದೇ ರೈಲು-ಮಾರ್ಗದಲ್ಲಿ ನೇರವಾಗಿ ಒಳನಾಡಿಗೆ ಸಂಪರ್ಕಿಸುವ ಮೂಡಿಗೆರೆ-ಚಿಕ್ಕಮಗಳೂರು ಮೂಲಕ ಸುಲಭ ಮಾರ್ಗದ ಸಾಧ್ಯತೆ ಬಗ್ಗೆ ನಿಶ್ಚಿತವಾಗಿ ಪರಿಶೀಲಿಸುವುದಾಗಿ ಪೇಜಾವರರಿಗೆ ಕೊಟ್ಟ ಭರವಸೆ ಏನಾಯಿತು? ಎಲ್ಲಿ ಹೋಯಿತು ಬಿಜೆಪಿ ಮೇಲಿನ ಪೇಜಾವರ ಸ್ವಾಮಿಗಳ ಪ್ರಭಾವ?
 
                 ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಒದಗಿಸಿರುವುದು ಕೇವಲ ಕರ್ನಾಟಕ ಮಾತ್ರ. ಉಳಿದ ನಾಲ್ಕು ರಾಜ್ಯಗಳಾದ ತೆಲಂಗಾಣ ಆಂಧ್ರ, ತಮಿಳುನಾಡು, ಕೇರಳ, ಇಲ್ಲೆಲ್ಲಾ ಇನ್ನು ನೂರು ವರ್ಷಗಳಾದರೂ ಬಿಜೆಪಿಗೆ ನೆಲೆ ಸಿಗಲಾರದು. ಕಡೇ ಪಕ್ಷ ಕನ್ನಡಿಗರ ಈ ಋಣ ತೀರಿಸಲಾದರೂ ಕೇಂದ್ರದ ಬಿಜೆಪಿ ಸರಕಾರ ಕರ್ನಾಟಕಕ್ಕೆ ನಿಜವಾಗಿ ಅಗತ್ಯವಿರುವ ಯೋಜನೆಗಳನ್ನು ಕೊಡುವುದಿಲ್ಲವೆಂದಾದರೆ ಕನ್ನಡಿಗರೇಕೆ ಇಂತಹ ಕೃತಘ್ನ ಬಿಜೆಪಿ ಬಗ್ಗೆ ಒಲವು ಹೊಂದಿರಬೇಕು? -

share
ಆರ್‌../... .ಬಿ ಶೇಣವ
ಆರ್‌../... .ಬಿ ಶೇಣವ
Next Story
X