Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಳಚಡ್ಡಿಯಲ್ಲಿ ಭೂಸೇನಾ ಗುಮಾಸ್ತರ...

ಒಳಚಡ್ಡಿಯಲ್ಲಿ ಭೂಸೇನಾ ಗುಮಾಸ್ತರ ಪರೀಕ್ಷೆ

ವಿವರಣೆ ನೀಡುವಂತೆ ಸೇವಾ ವರಿಷ್ಠನಿಗೆ ರಕ್ಷಣಾ ಸಚಿವಾಲಯದ ಆದೇಶ

ವಾರ್ತಾಭಾರತಿವಾರ್ತಾಭಾರತಿ1 March 2016 11:45 PM IST
share

ಮುಝಫ್ಫರ್‌ಪುರ, ಮಾ.1: ಅವರು ಪರೀಕ್ಷೆಯೊಂದನ್ನು ಬರೆಯುವುದಕ್ಕಾಗಿ ಬಂದಿದ್ದರು ಬಿಹಾರದ ನೂರಾರು ಯುವಕರಿಗೆ ಮೊದಲು ಅವರ ಬಟ್ಟೆಗಳನ್ನು ಕಳಚುವಂತೆ ಸೂಚಿಸಲಾಯಿತು. ಭೂಸೇನೆಯಲ್ಲಿ ಗುಮಾಸ್ತರ ಹುದ್ದೆಗಳಿಗಾಗಿ ಮುಝಫ್ಫರ್‌ಪುರದಲ್ಲಿ ನಡೆದ ಪರೀಕ್ಷೆಯನ್ನು ಈ ಯುವಕರು ಕೇವಲ ಒಳಚಡ್ಡಿ ಮಾತ್ರ ಧರಿಸಿ ಬರೆದರು.

ಮಾಧ್ಯಮಗಳಾದ್ಯಂತ ಪ್ರಸಾರ ಮಾಡಲಾದ ಚಿತ್ರಗಳಿಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯವು, ಈ ಬಗ್ಗೆ ವಿವರಣೆ ನೀಡುವಂತೆ ಭೂಸೇನಾ ದಂಡನಾಯಕ ದಲ್ಬೀರ್‌ಸಿಂಗ್ ಸುಹಾಗ್‌ರಿಗೆ ಆದೇಶಿಸಿದೆಯೆಂದು ವರದಿಯಾಗಿದೆ. ಬಿಹಾರದ ಹೈಕೋರ್ಟ್ ಕೂಡ ರಕ್ಷಣಾ ಸಚಿವಾಲಯದಿಂದ ವಿವರಣೆ ಕೇಳಿದೆ.
ರವಿವಾರ, ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ 1,100 ಮಂದಿ ಅಭ್ಯರ್ಥಿಗಳಿಗೆ ಬಟ್ಟೆ ಕಳಚುವಂತೆ ಸೂಚನೆ ನೀಡಿದಾಗ ಅವರು ಆಘಾತಗೊಂಡರು. ಆದರೆ, ಅವರು ಏನು ಮಾಡಬೇಕೋ ಅದನ್ನು ಮಾಡಿದರು. ಉದ್ಯೋಗಾಕಾಂಕ್ಷಿಗಳು ತಮ್ಮ ಅಂಗಿ ಮತ್ತು ಚಡ್ಡಿಗಳನ್ನು ಬಿಚ್ಚಿದ ಬಳಿಕ ಬನಿಯನ್‌ಗಳನ್ನು ತೆಗೆಯುವಂತೆ ಪರೀಕ್ಷಾಧಿಕಾರಿಗಳು ಅವರಿಗೆ ಸೂಚಿಸಿದರು.
ವಂಚನೆಗೆ ಕುಖ್ಯಾತವಾಗಿರುವ ರಾಜ್ಯವೊಂದರಲ್ಲಿ ಪರೀಕ್ಷಾಧಿಕಾರಿಗಳು ಹಾಗೂ ಹೆತ್ತವರ ಸಹಕಾರದಿಂದಲೇ ಭಾರೀ ಅವ್ಯವಹಾರ ನಡೆಯುತ್ತದೆ. ಇಂತಹ ಕಡೆ ಬಟ್ಟೆಗಳಲ್ಲಿ ಕಾಗದದ ಚೂರುಗಳನ್ನು ಅಡಗಿಸಿಕೊಳ್ಳದಂತೆ ತಡೆಯಲು ಇದೇ ಅತ್ಯುತ್ತಮ ಮಾರ್ಗವೆಂದು ಭೂ ಸೇನಾಧಿಕಾರಿಗಳು ನಿರ್ಧರಿಸಿದ್ದರು.
ಆಕ್ರೋಶಕ್ಕೆ ಕಾರಣವಾದ ಈ ನಡೆಯನ್ನು ಸಮರ್ಥಿಸಿರುವ ಭೂ ಸೇನೆಯ ಪ್ರಾದೇಶಿಕ ಕಚೇರಿಯ ನಿರ್ದೇಶಕ, ಕರ್ನಲ್ ವಿ.ಎಸ್. ಗೋಧರ, ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಅಧಿಕಾರವನ್ನು ತನಗೆ ನೀಡಲಾಗಿತ್ತು. ಕಳೆದ ವರ್ಷ ಇಬ್ಬರು ಅಭ್ಯರ್ಥಿಗಳು ತಮ್ಮ ಬನಿಯನ್‌ಗಳು ಹಾಗೂ ಒಳ ಉಡುಪುಗಳಲ್ಲಿ ನಕಲು ಚೀಟಿಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಅಡಗಿಸಿಕೊಂಡಿದ್ದರೆಂದು ಹೇಳಿದ್ದಾರೆ.
ಅಂತಿಮವಾಗಿ ಅಭ್ಯರ್ಥಿಗಳು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಂಡು ತಮ್ಮ ತೊಡೆಗಳನ್ನೇ ಮೇಜುಗಳಂತೆ ಉಪಯೋಗಿಸಿ ಒಂದು ತಾಸಿನ ಪರೀಕ್ಷೆ ಬರೆದರು. ಕೆಲವರು ತಮಗೆ ಶೀತವಾಗಿದೆ ಹಾಗೂ ಆರಾಮವಾಗಿಲ್ಲವೆಂದು ದೂರಿದರಾದರೂ, ಅವರಿಗೆ ಬೇರೆ ಆಯ್ಕೆ ಇರಲಿಲ್ಲ.
ಹವಾಮಾನ ಆಹ್ಲಾದಕರವಾಗಿತ್ತು. ಅದರಲ್ಲಿ ಅವಮಾನವಾಗುವಂತಹದು ಏನೂ ಇರಲಿಲ್ಲ. ಹೇಗಿದ್ದರೂ ಅವರು ಶಾರೀರಿಕ ಪರೀಕ್ಷೆಗಾಗಿ ಒಳಚಡ್ಡಿಗಳಲ್ಲೇ ಓಡಬೇಕಿತ್ತು ಹಾಗೂ ಇತರ ದೈಹಿಕ ಚಟುವಟಿಕೆಗಳನ್ನು ನಡೆಸಬೇಕಿತ್ತೆಂದು ಕ. ಗೋಧರ ಹೇಳಿದ್ದಾರೆ.
 ಕಳೆದ ವರ್ಷ 10ನೆ ತರಗತಿಯ ಮಕ್ಕಳನ್ನೊಳಗೊಂಡ ಸಾಮೂಹಿಕ ನಕಲಿನ ಚಿತ್ರಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿ ಮಾಡಿದ್ದವು. ಅಭ್ಯರ್ಥಿಗಳ ಹೆತ್ತವರು, ಸಂಬಂಧಿಕರು ಹಾಗೂ ಇತರರು, ವಿದ್ಯಾರ್ಥಿಗಳಿಗೆ ಕಾಗದದ ಚೀಟಿಗಳನ್ನು ನೀಡಲು ಪರೀಕ್ಷಾ ಕೇಂದ್ರದ ಗೋಡೆಗಳನ್ನೇರುತ್ತಿದ್ದ ಚಿತ್ರಗಳೂ ಅವುಗಳಲ್ಲಿದ್ದವು.
ಜನವರಿಯಲ್ಲಿ ಮಂಡಳಿಯ ಪರೀಕ್ಷೆಗಳಿಗೆ ಮೊದಲು, ನಕಲು ಮಾಡುವಾಗ ಹಿಡಿಯಲಾಗುವ ವಿದ್ಯಾರ್ಥಿಗಳಿಗೆ ರೂ. 20 ಸಾವಿರ ದಂಡ ಹಾಗೂ ಅವರಿಗೆ ನೆರವಾಗುವ ಬಂಧುಗಳಿಗೆ ಕಾರಾಗೃಹವಾಸ ವಿಧಿಸಲಾಗುವುದೆಂದು ಬಿಹಾರ ಘೋಷಿಸಿತ್ತು. ತರಗತಿ ಕೊಠಡಿಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಹಾಗೂ ಕೆಲವು ಪರೀಕ್ಷಾ ಕೇಂದ್ರಗಳ ನೇರ ಪ್ರಸಾರವನ್ನೂ ಅದು ಆದೇಶಿಸಿತ್ತು.


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X