Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಧನ್ಯಾ ಅತ್ತರೂ, ನಕ್ಕರೂ ಎಲುಬು...

ಧನ್ಯಾ ಅತ್ತರೂ, ನಕ್ಕರೂ ಎಲುಬು ಮುರಿಯುತ್ತದೆ: ಅಪೂರ್ವ ರೋಗಬಾಧಿಸಿದ ಯುವತಿ

ವಾರ್ತಾಭಾರತಿವಾರ್ತಾಭಾರತಿ4 March 2016 5:58 PM IST
share
ಧನ್ಯಾ ಅತ್ತರೂ, ನಕ್ಕರೂ ಎಲುಬು ಮುರಿಯುತ್ತದೆ: ಅಪೂರ್ವ ರೋಗಬಾಧಿಸಿದ ಯುವತಿ

ತಿರುವನಂತಪುರಂ,ಮಾರ್ಚ್.4: ಮುಟ್ಟಿದರೆ ಧನ್ಯಾರ ಎಲುಬು ಮುರಿಯುತ್ತದೆ. ಆದರೆ ಇದರಿಂದ ತನ್ನ ಜೀವನವೇ ಮುಗಿಯಿತೆಂದು ಇಪ್ಪತ್ತೇಳು ವರ್ಷದ ಯುವತಿ ಭಾವಿಸಿಲ್ಲ. ಆಸ್ಟಿಯೊಜನಸಿಸ್ ಇಂಫರ್‌ಪೆಕ್ಟ್ ಎಂಬ ಅತ್ಯಪೂರ್ವ ರೋಗಕ್ಕೆ ಗುರಿಯಾದ ಕೇರಳ ಮೂಲದ ಯುವತಿ ಧನ್ಯಾಳ ದೇಹ ಗಾಜಿನ ಪಾತ್ರೆಯಂತೆ ಮುರಿದು ಬಿಡುತ್ತದೆ. ಭಾರತದ ಗ್ಲಾಸ್ ವುಮೆನ್ ಎಂದು ಆಕೆಯನ್ನು ಕರೆಯಲಾಗುತ್ತಿದೆ.

ಈ ವರೆಗೆ ಮುನ್ನೂರು ಬಾರಿ ಧನ್ಯಾರ ಎಲುಬುಗಳು ಮುರಿದಿವೆ. ಮಂಚದಿಂದ ಬೆಳಗ್ಗೆ ಏಳುವಾಗ ಗೊತ್ತಿಲ್ಲದೆ ಸ್ವಲ್ಪ ಕೈಗೆ ಶಕ್ತಿಹಾಕಿದರೂ ಎಲುಬು ಮುರಿಯುತ್ತವೆ. ಅಷ್ಟೇಕೆ ಗಟ್ಟಿಯಾಗಿ ಅತ್ತರೂ ಕೈ ಬಡಿದರೂ ಆಸ್ಪತ್ರೆಗೆ ಹೋಗಬೇಕು. ಕೆಲವೊಮ್ಮೆ ತನ್ನ ಎಲುಬು ತುಂಡರಿಸಿದರೆ ಅದು ಅಮ್ಮ ನೋಡದಂತೆ ಅಡಗಿಸಿಡುತ್ತೇನೆ ಎಂದು ಧನ್ಯ ಹೇಳುತ್ತಾರೆ. ನೋವಿನಿಂದ ನಾನು ಅಳುತ್ತೇನೆ ಅದರೊಂದಿಗೆ ಅಮ್ಮ ಕೂಡಾ ಅಳುತ್ತಾರೆ ಇದು ನನಗೆ ತುಂಬ ನೋವು ನೀಡುತ್ತದೆ ಎಂದುಧನ್ಯಾ ಹೇಳುತ್ತಾರೆ. ಆದ್ದರಿಂದ ಎಷ್ಟೆ ನೋವು ಆದರೂ ನಾನು ಮುಗುಳ್ನಗುವೆ. ಜೀವನ ವ್ಹೀಲ್ ಚೇರ್‌ಗೆ ಸೀಮಿತವಾದರೂ ಇರುವಷ್ಟು ಕಾಲ ನಗು ನಗುತ್ತಾಬದುಕಲು ಧನ್ಯಾ ಯಸುತ್ತಾರೆ.

 ಇತರರಂತೆ ಓಡಾಡಲು ಜೀವನವನ್ನು ಆಸ್ವಾದಿಸಲು ಸಾಧ್ಯವಾಗಿಲ್ಲವಲ್ಲ ಎಂಬ ಸಂಕಟದೊಂದಿಗೆ ಧನ್ಯಾ ಬೆಳೆದರು. ಯಾವುದೋ ಅನ್ಯಗ್ರಹದ ಜೀವಿಬದುಕಿರುವಂತೆ ಜನರು ನನ್ನನ್ನು ನೋಡುತ್ತಾರೆ. ಎಲುಬುಗಳು ಮುರಿಯುವುದು ಮಾತ್ರವಲ್ಲ ಇತರ ಅವಯವಗಳ ಬೆಳವಣಿಗೆಗೂ ಅದು ಮಾರಕವಾಗಿ ಬಾಧಕವಾಗುತ್ತದೆ. ಅಪ್ಪ ಅಮ್ಮನ ಸಹಾಯವಿಲ್ಲದೆ ಧನ್ಯರಿಗೆ ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ. ಎರಡು ವರ್ಷದ ಮಗುವಾಗಿದ್ದಾಗ ಧನ್ಯಾರ ರೋಗವನ್ನು ಪತ್ತೆಹಚ್ಚಲಾಗಿತ್ತು. ಮಗು ಅತ್ತಾಗಲೆಲ್ಲ ಅವಳನ್ನು ಹೆತ್ತವರು ಆಸ್ಪತ್ರೆಗೆ ಕರೆದು ಕೊಂಡುಹೋಗುತ್ತಿದ್ದರು. ಆಗ ಎಲುಬು ಮುರಿದಿರುವ ವಿಷಯ ಗೊತ್ತಾಗುತ್ತಿತ್ತು. ಆ ನಂತರ ಅವಳ ಬದುಕು ವ್ಹೀಲ್ ಚೇರ್‌ಗೆ ಸೇರಿಹೋಯಿತು. ತನ್ನ ವ್ಹೀಲ್ ಚೇರ್‌ನ್ನು ಧನ್ಯಾ ಬಿಎಂಡಬ್ಲ್ಯೂ ಎಂದು ಧನ್ಯ ಕರೆಯುತ್ತಾರೆ. ಜೀವನವನ್ನು ಧನಾತ್ಮಕವಾಗಿ ನೋಡಲು ಧನ್ಯಾ ಇಷ್ಟರಲ್ಲೇ ಕಲಿತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X