Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. "ಯೂತ್ ಐಕಾನ್" ಆಗಿ ಹೊರಹೊಮ್ಮಿದ...

"ಯೂತ್ ಐಕಾನ್" ಆಗಿ ಹೊರಹೊಮ್ಮಿದ ಕನ್ಹಯ್ಯಾ ಕುಮಾರ್ -ಸಮದ್ ಬಿ.ಸಿ

ವಾರ್ತಾಭಾರತಿವಾರ್ತಾಭಾರತಿ5 March 2016 12:20 PM IST
share
ಯೂತ್ ಐಕಾನ್ ಆಗಿ ಹೊರಹೊಮ್ಮಿದ ಕನ್ಹಯ್ಯಾ ಕುಮಾರ್ -ಸಮದ್ ಬಿ.ಸಿ

ಸರಿಸುಮಾರು ಫೆಬ್ರವರಿ ತಿಂಗಳ ಮಧ್ಯಭಾಗದವರೆಗೆ ಈ ದೇಶದ ಜನತೆಗೆ 'ಕನ್ಹಯ್ಯಾ' ಎನ್ನುವ ವಿದ್ಯಾರ್ಥಿ ಬರೀ ವಿದ್ಯಾರ್ಥಿಯಷ್ಟೇ ಆಗಿದ್ದ. ಬೇರೇನೂ ಆಗಿರಲಿಲ್ಲ. ನಂತರದ 15 ದಿವಸದ ಅಂತರದಲ್ಲಿ ಭಾರತದ ಮಟ್ಟಿಗೆ ಯುವ ನಾಯಕನಾಗಿ ಬೆಳೆದಿದ್ದಾರೆ.

JNU ಕ್ಯಾಂಪಸ್ ನಲ್ಲಿ ಸೆಮಿನಾರ್ ವಿಷಯವೊಂದರಲ್ಲಿ ಕ್ಯಾಂಪಸಲ್ಲಿ ಹುಲಿಯಾಗಿದ್ದ ಕನ್ಹಯ್ಯಾ ಎನ್ನುವ ವಿದ್ಯಾರ್ಥಿ ನಾಯಕನನ್ನು ಸರಕಾರದ ಒತ್ತಡದೊಂದಿಗೆ 'ದೇಶದ್ರೋಹ(?)'ದ  ಕೇಸು ಜಡಿದು ಆತನನ್ನು ಇಲಿಯಾಗಿಸಲು ನೋಡಿ ಇಡೀ ದೇಶವೇ ಆತನ ಬೆನ್ನ ಹಿಂದೆ ನಿಂತಾಗ ಆತ ಹೆಬ್ಬುಲಿಯಾಗಿ ಹೊರಬಂದು ಭಾಷಣ ಮಾಡಿದಾಗ ಸರಕಾರ ಪೇಚಿಗೆ ಸಿಲುಕಿತು.

ನಿಜವಾಗಿಯೂ ಕನ್ಹಯ್ಯಾ ಮಾಡಿದ ತಪ್ಪಾದರೂ ಏನು? ಸ್ವಾತಂತ್ರ್ಯ ಭಾರತದಲ್ಲಿದ್ದುಕೊಂಡು ತನಗಿನ್ನೂ ನಿಜವಾಗಿ ದಕ್ಕಬೇಕಾದ ಸ್ವಾತಂತ್ರ್ಯ ನನಗಿನ್ನೂ ದಕ್ಕಿಲ್ಲ ಎಂದು ಭಾರತದ ಸ್ವಾತಂತ್ರ್ಯ ನಿರಾಕರಿಸಲ್ಪಟ್ಟ ಸಮುದಾಯಗಳ ಪರವಾಗಿ ಮಾತನಾಡಿದ್ದು ತಪ್ಪೇ? ಹೆಚ್ಚೇನೂ ಬೇಡ. ಒಂದು ವರ್ಷದಿಂದೀಚೆಗಿನ ಭಾರತದ ಸ್ಥಿತಿಗತಿಯನ್ನು ಗಮನಿಸಿದಾಗ ಇಲ್ಲಿ ತಪ್ಪನ್ನು ತಪ್ಪು ಎಂದೂ ಸರಿಯನ್ನು ಸರಿ ಎಂದೂ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿಲ್ಲ. ಅದಲ್ಲದೆ ಭಾರತದಲ್ಲಿ ಬೇರೂರಿರುವ ಜಾತೀಯತೆ, ಅಸ್ಪೃಷ್ಯತೆ, ದಲಿತ-ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಇದನ್ನೆಲ್ಲಾ ಮನಗಂಡ ವಿದ್ಯಾರ್ಥಿ ನಾಯಕನೊಬ್ಬ ತನ್ನ ಭಾಷಣದಲ್ಲಿ  ಇಂತಹ ಅಸಹಿಷ್ಣು ಸಮಾಜ , ಅಸಮಾನತೆಗಳನ್ನು ತೊಡೆದು ಹಾಕಬೇಕೆಂದು ಭಾಷಣ ಮಾಡಿದ್ದು , ಇದು ಹೀಗೆ ಮುಂದುವರಿದಲ್ಲಿ ತಮ್ಮ ಸರಕಾರಕ್ಕೂ ಅಪಾಯವಿದೆಯೆಂದು ಭಾವಿಸಿ ಇಂತಹ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ನೆಮ್ಮದಿಯಲ್ಲಿರಬಹುದೆಂದು ತಿರುಕನ ಕನಸು ಕಂಡವರಿಗೆ  ಅದು ಕನಸಾಗಿಯೇ ಉಳಿಯುವಂತೆ ಮಾಡಿದ ಭಾರತ ದೇಶದ ಕೋಟ್ಯಂತರ ಪ್ರಜೆಗಳು ದೇಶಪ್ರೇಮಿಗಳೇ ನಿಜ. ಒಂದು ಕನ್ಹಯ್ಯಾ ಕುಮಾರ್ ಪರವಾಗಿ ಇಲ್ಲಿ ಲಕ್ಷಾಂತರ ಕನ್ಹಯ್ಯಾರು ಬಂದರು. ಇದು ಶ್ರೇಷ್ಠ ಭಾರತವೇ ಸರಿ.


      ಇನ್ನು ಯುವ ಜನಾಂಗವೇ ಹೆಚ್ಚಾಗಿರುವ ಭಾರತದಲ್ಲಿ ಯುವ ಜನತೆಯನ್ನು ತನ್ನತ್ತ ಸೆಳೆಯಲು ಸಾಧ್ಯವಾದರೆ ಆತ ಭಾರತದ ಪಾಲಿಗೆ ಹೀರೋ ಆಗಿಬಿಡುತ್ತಾನೆಂದು ನಮಗೆ ಇತಿಹಾಸ ತೋರಿಸಿದೆ. ಪಾರದರ್ಶಕ ಆಡಳಿತಕ್ಕೆ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ರಂಗಕ್ಕಿಳಿದ ಅಣ್ಣಾ ಹಝಾರೆಯವರು ಮೊದಲನೆಯದಾಗಿ ಭ್ರಷ್ಟ ಸರಕಾರದಿಂದ ನೊಂದಿದ್ದ ಯುವ ಜನತೆಯನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿ ಮುಂದೆ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ರಾಷ್ಟ್ರೀಯ ಪಕ್ಷದ ಬಲವನ್ನು ಪ್ರಾದೇಶಿಕ ಪಕ್ಷದ ಬಲಕ್ಕೆ ಇಳಿಸಿರುವುದನ್ನು ಗಮನಿಸಬಹುದು. ಮುಂದೆ ರಾಜಕೀಯಕ್ಕೆ ಧುಮುಕಿದ ತನ್ನ ಸಹವರ್ತಿಗಳಿಂದ ಮೂಲೆಗುಂಪಾಗಿ ಮುಂದೆ ಅವರ ಲೋಕಪಾಲ ಪರ ಧ್ವನಿ ಕ್ಷೀಣಿಸಿದವು. 


    ಹಾಗೆಯೇ, ಕನ್ಹಯ್ಯಾ ಕುಮಾರ್ ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗಿರದೆ ಇದ್ದರೆ, ಆತನ " ನಮಗೆ ಭಾರತದಿಂದ ಅಝಾದಿ ಬೇಡ- ಭಾರತದಲ್ಲಿ ಅಝಾದಿ ಬೇಕು " ಎಂಬ ಸಂದರ್ಭೋಚಿತ ಬೇಡಿಕೆಗೆ ಈ ಭಾರತದ ಈ ಭಾರತದ ಪವಿತ್ರ ಸಂವಿಧಾನದ ಮೇಲೆ ವಿಶ್ವಾಸವಿರುವ ಭಾರತದ ಕೊಟ್ಯಂತರ  ಪ್ರೌಢ ಪ್ರಜೆಗಳ ಬೆಂಬಲವಿರಬಹುದು.

 
ಕಾಲೇಜಲ್ಲಿ ವ್ಯಾಸಂಗ ಮುಗಿಸಿ ಎಲ್ಲಿಯೋ ಇರಬೇಕಾದ ಕನ್ಹಯ್ಯಾ ಕುಮಾರ್ ಎನ್ನುವ ವಿದ್ಯಾರ್ಥಿಯನ್ನು ಸರಿಯಾದ ಸಮಯದಲ್ಲಿ ಹೊರತಂದು ದೇಶದ ಜನತೆಗೆ  " ಯೂತ್ ಐಕಾನ್"  ಆಗಿ ಪರಿಚಯಿಸಿದ ಸರಕಾರಕ್ಕೂ, ಮಂತ್ರಿಗಳಿಗೂ, ನಕಲಿ ವೀಡಿಯೋ ಟೆಲಿಕಾಸ್ಟ್ ಮಾಡಿದ ಮಾಧ್ಯಮಗಳಿಗೂ ಅಭಿನಂದನೆಗಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X