Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೈಗಳಿಲ್ಲದಿದ್ದರೇನಂತೆ ಕಾಲುಗಳಿಲ್ಲವೇ?...

ಕೈಗಳಿಲ್ಲದಿದ್ದರೇನಂತೆ ಕಾಲುಗಳಿಲ್ಲವೇ? ಕಾಶ್ಮೀರದ ಸಾಹಸಿ ಕ್ರಿಕೆಟಿಗನ ಕಥೆಯಿದು

ವಾರ್ತಾಭಾರತಿವಾರ್ತಾಭಾರತಿ5 March 2016 2:21 PM IST
share
ಕೈಗಳಿಲ್ಲದಿದ್ದರೇನಂತೆ ಕಾಲುಗಳಿಲ್ಲವೇ? ಕಾಶ್ಮೀರದ ಸಾಹಸಿ ಕ್ರಿಕೆಟಿಗನ ಕಥೆಯಿದು

ಶ್ರೀನಗರ : ದಕ್ಷಿಣ ಕಾಶ್ಮೀರದ ಬಿಜ್‌ಬೆಹರಾ ಗ್ರಾಮದಈ ಭಿನ್ನ ಸಾಮರ್ಥ್ಯದ ಯುವಕನ ಜೀವನಕಥೆ ಎಂತಹವರನ್ನೂ ಚಕಿತಚಿತ್ತರನ್ನಾಗಿಸಬಹುದು. ಆತನ ಛಲ, ಸಾಹಸ, ಧೈರ್ಯ ಹಾಗೂ ಮನೋಬಲವೇ ಆತನ ಶಕ್ತಿಯಾಗಿದೆ.

ಈ ಯುವಕನ ಹೆಸರೇ ಅಮೀರ್ ಹುಸೈನ್. ಎಂಟು ವರ್ಷದವನಿರುವಾಗ ಮರದ ಮಿಲ್ಲಿನಲ್ಲಿ ನಡೆದ ದುರ್ಘಟನೆಯೊಂದರಲ್ಲಿ ತನ್ನೆರಡೂ ಕೈಗಳನ್ನು ಕಳೆದುಕೊಂಡ ನತದೃಷ್ಟನೀತ. ಮೂರು ವರ್ಷಗಳ ತನಕ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂತು.ಹಳ್ಳಿಯ ಕೆಲವರಂತೂ ಈತ ಇನ್ನುತನ್ನ ಕುಟುಂಬಕ್ಕೆದೊಡ್ಡ ಹೊರೆಯಾಗುತ್ತಾನೆ ಹಾಗೂ ತಿಳಿದುಕೊಂಡು ಬಿಟ್ಟಿದ್ದರು, ಕೆಲವರು ಆತನ ತಂದೆಗೆ ‘ಈ ಪೀಡೆಯನ್ನು ತೊಲಗಿಸುವಂತೆಯೂ’ ಸಲಹೆ ನೀಡಿದ್ದರು. ಆದರೆ ಇಂದು ಎಲ್ಲರನ್ನೂ ಸುಳ್ಳಾಗಿಸಿ ಅಮೀರ್ ತನ್ನ ಕುಟುಂಬದ ಹೆಮ್ಮೆಯ ದ್ಯೋತಕವಾಗಿದ್ದಾನೆ.
ಇಂದು ಆತನ ಎರಡು ಕಾಲುಗಳೇ ಆತನಿಗೆ ಕೈಗಳಿಗಿಂತಲೂಮಿಗಿಲಾಗಿವೆ. ಆತ ಈಜಾಡಲು ಕಲಿತಿದ್ದಾನೆ ಹಾಗೂ ಕ್ರಿಕೆಟ್ ಆಟದಲ್ಲಿ ನಿಪುಣನಾಗಿದ್ದಾನೆ. ಇಂದು ಆತಜಮ್ಮು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕನೂ ಹೌದು.
ಬಾತುಕೋಳಿಯಂತೆ ಈಜಾಡುವುದನ್ನು ಮೊದಲು ಅಭ್ಯಾಸ ಮಾಡಿದ ಅಮೀರ್ ನಂತರ ಕ್ರಿಕೆಟ್ ಆಟ ಕಲಿಯಲು ಶುರುವಿಟ್ಟುಕೊಂಡ. ಬ್ಯಾಟನ್ನು ತನ್ನ ಗಲ್ಲ ಹಾಗೂ ಭುಜದ ನಡುವೆ ಇರಿಸಿ ಅಮೀರ್ ಚೆಂಡನ್ನು ಬಾರಿಸುವುದನ್ನು ನೋಡುವುದೇ ಒಂದು ಅಚ್ಚರಿ. ತನ್ನ ಬಲಗಾಲಿನ ಬೆರಳುಗಳ ಸಹಾಯದಿಂದಊಟ ಮಾಡುವ ಅಮೀರ್ ಇವೇ ಬೆರಳುಗಳನ್ನು ಉಪಯೋಗಿಸಿ ಬರೆಯುತ್ತಾರೆ ಹಾಗೂ ಇನ್-ಸ್ವಿಂಗ್ ಹಾಗೂ ಔಟ್-ಸ್ವಿಂಗ್‌ಗಳನ್ನೂ ಎಸೆಯುತ್ತಾರೆ. ಅಮೀರ್ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾಗ ಅವರ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರೊಬ್ಬರು ಅಮೀರ್ ಅವರನ್ನು ಪ್ಯಾರಾ ಕ್ರಿಕೆಟ್‌ಗೆ ಪರಿಚಯಿಸಿದ್ದರು.
‘‘ನಾನು ಯಾವುದಕ್ಕೂ ಪ್ರಯೋಜನವಿಲ್ಲದವನು ಎಂಬ ಜನರ ಭಾವನೆಯೇ ನನಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಮೂಡಿಸಿತು,’’ಎನ್ನುತ್ತಾರೆ ಅಮೀರ್. ಅವರ ತಂದೆ ಬಶೀರ್ ಅಹಮದ್ ತಮ್ಮ ಮಗನಿಗೆ ಯಾವತ್ತೂ ಬೆನ್ನೆಲುಬಾಗಿ ನಿಂತಿದ್ದಾರೆ.
ತನ್ನಂತಹ ಅಂಗವಿಕಲರಿಗೆ ಸಾಕಷ್ಟು ನೆರವು ನೀಡುತ್ತಿಲ್ಲವೆಂಬುದು ಅಮೀರ್‌ಗಿರುವ ಒಂದೇ ಕೊರಗು. ಕ್ರೀಡಾ ಅಥವಾ ಅಂಗವಿಕರಖೋಟಾದಡಿಯಲ್ಲಿ ತನಗೆ ನೌಕರಿಯೊಂದು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಈ ಸಾಹಸಿ ಯುವಕ.

courtesy : hindustantimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X