ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಮ್ಮತ ಪರಿಹಾರ ಸಿಕ್ಕಿಲ್ಲ
ಕೃಷ್ಣಾ ಮೇಲ್ದಂಡೆ ಯೋಜನೆ

ಸಿಎಜಿ ವರದಿ ಮಾಹಿತಿ
ಬೆಂಗಳೂರು, ಮಾ.5: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ನ್ಯಾಯ ಸಮ್ಮತವಾದ ಪರಿಹಾರ ಲಭ್ಯವಾಗಿಲ್ಲ ಎಂಬ ಮಾಹಿತಿಯನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ(ಸಿಎಜಿ)ವರದಿ ಬಹಿರಂಗಪಡಿಸಿದೆ.
2010-15ರ ಅವಧಿಯಲ್ಲಿ ಕೈಗೆತ್ತಿಕೊಂಡ ಬಾಗಲಕೋಟೆ ಪಟ್ಟಣ, ಅಲಮಟ್ಟಿ ಅಣೆಕಟ್ಟಿನ ಅಡಿಯಲ್ಲಿ ಬರುವ ಮೂರು ಗ್ರಾಮಗಳ ಮತ್ತು ನಾರಾಯಣಪುರ ಅಣೆಕಟ್ಟಿನಡಿಯಲ್ಲಿ ಬರುವ 14 ಗ್ರಾಮಗಳ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಗಳ ಕಾರ್ಯಚಟುವಟಿಕೆ ಅಧ್ಯಯನವನ್ನು ಲೆಕ್ಕಪರಿಶೋಧನೆ ಕೈಗೊಳ್ಳಲಾಗಿತ್ತು.
ಈ ಯೋಜನೆಯಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ನೀರಾವರಿ ಪ್ರದೇಶದಲ್ಲಿ ಭೂಮಿ ಹಂಚಿಕೆಯ ಪ್ರಮುಖ ಅನುವನ್ನು ಸೇರಿಸಿರಲಿಲ್ಲ. ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡ ಯೋಜನೆಯಿಂದ ಸ್ಥಳಾಂತರಿತ ಕುಟುಂಬಗಳು ನೀರಾವರಿ ಪ್ರದೇಶದಲ್ಲಿ ಭೂಮಿ ಹಂಚಿಕೆಯಿಂದ ವಂಚನೆಗೊಳಗಾಗಿದ್ದಲ್ಲದೆ, ಅಸಮರ್ಪಕ ಪರಿಹಾರ ಮೊತ್ತವನ್ನು ಸ್ವೀಕರಿಸಿದ್ದಾರೆ.
ಸರಕಾರವು ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಲಾಭಗಳನ್ನು ಗ್ರಾಹಕರ ದರ ಸೂಚ್ಯಂಕದ ಅನ್ವಯ ಏರಿಕೆ ಮಾಡಲು ಯಾವುದೇ ಅವಕಾಶ ಒದಗಿಸಿಲ್ಲ. ಇದು ರಾಷ್ಟ್ರೀಯ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕಾರ್ಯನೀತಿಯ ವಿರುದ್ಧವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.
ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ 14 ಗ್ರಾಮಗಳಲ್ಲಿ 4,274 ಕುಟುಂಬಗಳಿದ್ದವು. ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದಕ್ಕಾಗಿ ಭೂಮಿಯನ್ನು ಅಸಮರ್ಪಕವಾಗಿ ಸ್ವಾಧೀನಪಡಿಸಿಕೊಂಡಿದ್ದ ಪ್ರಕರಣಗಳಿದ್ದವು, ಇದು ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸುವಲ್ಲಿ ವಿಳಂಬವಾಗಲು ಕಾರಣವಾಯಿತು.
ಕೆಪಿಟಿಸಿಎಲ್ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ ನಿಯಂತ್ರಣ ಗಳು, 2004ರಲ್ಲಿ ನಿರ್ದಿಷ್ಟಪಡಿಸಿದ್ದ ಕಾರ್ಯವಿಧಾನಗಳನ್ನು ಅನುಸರಿಸುವಲ್ಲಿ ವಿಫಲಗೊಂಡಿತು. ಹಾಗೂ ಕ್ರೋಡೀಕೃತ ಗೊಂಡಿದ್ದ ಬಾಕಿಗಳ ವಸೂಲಾತಿ ಯನ್ನು ಖಚಿತಪಡಿಸಿಕೊಳ್ಳದೆಯೇ ವಿದ್ಯುತ್ತಿನ ಮುಕ್ತ ಬಳಕೆ ಅನುಕೂಲತೆಗಳನ್ನು ಮಂಜೂರು ಮಾಡುವುದನ್ನು ಮುಂದುವರಿಸಿಕೊಂಡು ಹೋಯಿತು. ಇದರಿಂದಾಗಿ, 29.21 ಕೋಟಿ ರೂ.ನಷ್ಟವಾಗಿದೆ.
ಮೆಳೆಹಳ್ಳಿಯಲ್ಲಿನ ವಿದ್ಯುತ್ಹೊರೆ ಮಾದರಿಯನ್ನು ಅಧ್ಯಯನ ಮಾಡದೆಯೇ 15.97 ಕೋಟಿ ರೂ.ವೆಚ್ಚದಲ್ಲಿ ಜಾಲಮಂಗಲ, ಕುಟಗಲ್ಲು ಹಾಗೂ ಚಿಕ್ಕಗಂಗನವಾಡಿಯಲ್ಲಿ ಉಪ ಸ್ಟೇಷನ್ಗಳನ್ನು ಸ್ಥಾಪಿಸಿದ್ದು, ಅಗತ್ಯತೆಯ ಆಧಾರದ ಮೇರೆಗೆ ಆಗಿರಲಿಲ್ಲ ಹಾಗೂ ಈ ಹೂಡಿಕೆಯು ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಯಾವುದೇ ಸೂಕ್ತ ವೌಲ್ಯವರ್ಧನೆಯನ್ನೂ ನೀಡಲಿಲ್ಲ.
ಮೈಸೂರು ಸಕ್ಕರೆ ಕಂಪೆನಿಯು ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳದೆ ಹಾಗೂ ಮಿಲ್ಲುಗಳ ಆಧುನೀಕರಣದ ಜೊತೆ ಏಕಕಾಲಿಕವಾಗಿಸದೆ ವಿದ್ಯುತ್ತಿನ ಸಹ-ಉತ್ಪಾದನಾ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, 124.08 ಕೋಟಿ ರೂ.ಹೂಡಿಕೆಯು ನಿಷ್ಫಲಗೊಳ್ಳುವಲ್ಲಿ ಹಾಗೂ 59.04 ಕೋಟಿ ರೂ.ಬಡ್ಡಿಯ ಹೊರೆಯನ್ನು ಹೊತ್ತುಕೊಳ್ಳುವಂತಾಯಿತು.
ಗುತ್ತಿಗೆದಾರರ ಜೊತೆ ಒಡಂಬಡಿಕೆಯನ್ನು ಮಾಡಿಕೊಂಡ ನಂತರ ರಾಜ್ಯ ತೆಂಗಿನನಾರು ಅಭಿವೃದ್ಧಿ ನಿಗಮ ಘೋಷಿಸಲಾಗಿದ್ದಂತಹ ದರವನ್ನು ಮೇಲ್ಮುಖ ಪರಿಷ್ಕರಣೆ ಮಾಡಿದ ಕಾರಣ ಹಾಗೂ ಘೋಷಿಸಿಕೊಂಡಿದ್ದ ದರಕ್ಕೆ ವೌಲ್ಯವರ್ಧಿತ ತೆರಿಗೆಯನ್ನು ಸೇರಿಸಿದ ಕಾರಣ ಗುತ್ತಿಗೆದಾರರಿಗೆ 3.17 ಕೋಟಿ ರೂ.ಅಸಮರ್ಥನೀಯವಾದಂತಹ ಲಾಭವನ್ನು ಮಾಡಿಕೊಟ್ಟಿದೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಗಾಗಿ ಒಂದು ಪರಿಣಾಮ ಕಾರಿಯಾದ ಕರೆ ಕೇಂದ್ರವನ್ನು(ಕಾಲ್ಸೆಂಟರ್) ಸ್ಥಾಪಿಸುವಲ್ಲಿ ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವಿಫಲತೆ ಯು ಕಂಪೆನಿಯ ಹಾಗೂ ಬೆಂಗಳೂರಿನ ಹೆಸರನ್ನು ಮಾತ್ರವಲ್ಲದೆ, ಸರ್ವಪ್ರಧಾನ ಪ್ರಾಮುಖ್ಯತೆಯನ್ನು ಹೊಂದಿರುವ ಪ್ರಯಾಣಿಕರ ಸುರಕ್ಷತೆ ಯನ್ನೂ ಸಂಭಾವ್ಯ ಅಪಾಯಕ್ಕೆ ಸಿಲುಕಿಸು ವಂತಾಗಿದೆ ಎಂದು ಸಿಎಜಿ ವರದಿಯಲ್ಲಿ ಟೀಕಿಸಲಾಗಿದೆ.





