Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಣಿಗೆ ವಿಷಪ್ರಾಶನವಾಗಿತ್ತೆ?: ಕಲಾಭವನ್...

ಮಣಿಗೆ ವಿಷಪ್ರಾಶನವಾಗಿತ್ತೆ?: ಕಲಾಭವನ್ ಸಾವಿನ ಹಿಂದೆ ಸಂದೇಹಗಳ ಹುತ್ತ

ವಾರ್ತಾಭಾರತಿವಾರ್ತಾಭಾರತಿ7 March 2016 11:32 AM IST
share
ಮಣಿಗೆ ವಿಷಪ್ರಾಶನವಾಗಿತ್ತೆ?: ಕಲಾಭವನ್ ಸಾವಿನ ಹಿಂದೆ ಸಂದೇಹಗಳ ಹುತ್ತ

   ಕೊಚ್ಚಿ; ನಿನ್ನೆ ಮೃತರಾದ ಕಲಾಭವನ್ ಮಣಿಯ ಮೃತದೇಹವನ್ನು ಸಾವಿನಕಾರಣವನ್ನು ತಿಳಿಯಲಿಕ್ಕಾಗಿ ಪೋಸ್ಟ್ ಮಾರ್ಟಂ ನಡೆಸಲಾಗುವುದು. ನಿನ್ನೆ ರಾತ್ರಿಯೇ ಮೃತದೇಹವನ್ನು ತೃಶೂರ್‌ಗೆ ಕೊಂಡುಹೋಗಿದ್ದು ಇಂದು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂಗೆ ಒಳಪಡಿಸಲಾಗುವುದು ಎಂದು ತಿಳಿದು ಬಂದಿದೆ ಕಲಾಭವನ್ ಮಣಿ ಗೌರವಾರ್ಥ ಇಂದು ಅವರ ಹುಟ್ಟೂರು ಚಾಲಕ್ಕುಡಿ ನಗರದಲ್ಲಿ ಹರತಾಳ ಆಚರಿಸಲಾಗುತ್ತಿದೆ. ಮಣಿಯ ಮೃತದೇಹವನ್ನು ಇಂದು ಮಧ್ಯಾಹ್ನ ಸರಕಾರಿ ಬಾಯ್ಸಾ ಹೈಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಇಡಪಳ್ಳಿ ಅಮೃತ ಆಸ್ಪತ್ರೆಯಲ್ಲಿ ನಿನ್ನೆ ರಾತ್ರೆ 7:15ಕ್ಕೆ ಸಿನೆಮಾಲೋಕವನ್ನೆಕಂಪಿಸಿದ ಮಣಿಯ  ಅನಿರೀಕ್ಷಿತ ನಿಧನ ಸಂಭವಿಸಿತ್ತು. ಅವರು ಸಹಜವಾಗಿ ಮೃತರಾಗಿಲ್ಲ ಎಂದು ಪೊಲೀಸ್ ಸ್ಟೇಶನ್‌ಗೆ ಅಜ್ಞಾತ ಫೋನ್ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹದ ಪೋಸ್ಟ್‌ಮಾರ್ಂ ನಡೆಸಲು ತೀರ್ಮಾನಿಸಿದ್ದಾರೆ. ಕರುಳಿಗೆ ಸಂಬಂಧಿಸಿದ ಅನಾರೋಗ್ಯದಿಂದಾಗಿ ತುಂಬ ದಿವಸಗಳಿಂದ ಅವರು ಚಿಕಿತ್ಸೆಯಲ್ಲಿದ್ದರು. ಶನಿವಾರ ಸಂಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ವೆಂಟಿಲೇಟರ್‌ಗೆ ಹಸ್ತಾಂತರಿಸಲಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಣಿಯವರ ದೇಹದಲ್ಲಿ ವಿಷಾಂಶಗಳು ಪತ್ತೆಯಾಗಿದೆ ಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ. ಪೊಲೀಸರೂ ಇದನ್ನು ದೃಢೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪೋಸ್ಟ್ ಮಾರ್ಟಂಗೆ ಮುಂದಾಗಿದ್ದಾರೆ.

   

ಮಣಿ ತೀವ್ರ ಅಸ್ವಸ್ಥರಾಗಿದ್ದಾರೆಂದು ತಿಳಿದು ಚಾಲಕ್ಕುಡಿಯಿಂದ ಪೊಲೀಸರ ಒಂದು ತಂಡ ಕೊಚ್ಚಿಗೆ ಬಂದಿತ್ತು. ಮಣಿಯವರಿಂದ ಈ ತಂಡ ಹೇಳಿಕೆ ಪಡೆಯಲಿದೆಯೆಂದು ಹೇಳಲಾಗುತ್ತಿತ್ತು. ತಂಡ ತಲುಪುವ ಮೊದಲೇ ಮಣಿ ಇಹಲೋಕ ತ್ಯಜಿಸಿದ್ದರು. ಮಣಿಯ ದೇಹದಲ್ಲಿ ಮಿಥೈಲ್ ಆಲ್ಕೋಹಾಲ್ ಪತ್ತೆಯಾಗಿದೆಎಂದು ವೈದ್ಯರು ತಿಳಿಸಿದ್ದು. ಚಾಲಿಕ್ಕುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಣಿ ಇತ್ತೀಚೆಗೆ ತಮಿಳು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬಿಸಿಯಾಗಿದ್ದರು. ಹಾಗಿದ್ದರೂ ಅವರು ಉರಿಗೆ ಬಂದು ಗೆಳೆಯರೊಂದಿಗೆ ಬೆರೆಯುತ್ತಿದ್ದರು. ಚಾಲಕ್ಕಾಡ್‌ನ ಔಟ್‌ಹೌಸ್‌ನಲ್ಲಿ ಗೆಳೆಯರೊಂದಿಗೆ ಸಮಯ ಕಳೆಯುವುದು ಮಣಿಗೆ ಹೆಚ್ಚು ಇಷ್ಟದ ವಿಚಾರವಾಗಿತ್ತು. ಇಲ್ಲಿ ಮಿತಿ ಮೀರಿ ಮದ್ಯಪಾನ ಮಾಡಿದ್ದು ಮಣಿಯ ಮರಣಕ್ಕೆ ಕಾರಣವೆಂದು ಪೊಲೀಸರು ಮೊದಲು ಅಂದಾಜಿಸಿದ್ದರು. ಮಣಿಯ ಈ ಔಟ್ ಹೌಸ್‌ನ್ನು ಪೊಲೀಸರು ಈಗಾಗಲೇ ಪರಿಶೋಧಿಸಿದ್ದಾರೆ. ಮಣಿ ಮೃತರಾದ ಬಳಿಕ ಅವರ ಸಾವನ್ನು ಶಂಕಿಸಿ ಅಜ್ಞಾತ ಕರೆಯೊಂದು ಪೊಲೀಸ್ ಸ್ಟೇಶನ್‌ಗೆ ಬಂದಿದ್ದು ಅದರ ಮೂಲವನ್ನು ಕಂಡು ಹುಡುಕುವುದರಲ್ಲಿ ಪೊಲೀಸರು ವ್ಯಸ್ತರಾಗಿದ್ದಾರೆ. ಔಟ್ ಹೌಸ್‌ನಲ್ಲಿದ್ದ ಮದ್ಯ ಬಾಟ್ಲಿಗಳು ಮತ್ತು ಮದ್ಯದ ಸ್ಯಾಂಪಲ್‌ನ್ನು ರೂರಲ್ ಎಸ್ಪಿ ಕೆ. ಕಾರ್ತಿಕ್‌ರ ನೇತೃತ್ವದ ಪೊಲೀಸರ ತಂಡ ಸಂಗ್ರಹಿಸಿದೆ. ಮಣಿ ನಿಧನರಾದ ಬಳಿಕ ಅಮೃತ ಆಸ್ಪತ್ರೆಯ ಪರಿಸರದಲ್ಲಿ ಮಣಿಯ ಗೆಳೆಯರು ಗುಂಪು ಗೂಡಿದ್ದರು. ಇವರ ಬಗ್ಗೆಯೂ ಪೊಲೀಸರು ಸಂಶಯ ಪ್ರಕಟಿಸಿದ್ದಾರೆ. ಕೆಲವು ಪತ್ರಕರ್ತರೊಂದಿಗೆ ಇವರು ಘರ್ಷಣೆಗಿಳಿದಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಲು ಪೊಲೀಸರು ನಿರ್ಧರಿಸಿದರು. ಮಣಿಯ ಚಾಲಕ ಮನೋಜ್ ಮತ್ತು ಸಮೀಪದ ವೈದ್ಯರು ಮಣಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಪೊಲೀಸರು ಇವರನ್ನೆಲ್ಲ ತನಿಖೆ ನಡೆಸಿದ್ದಾರೆ. ಔಟ್ ಹೌಸ್‌ನಲ್ಲಿ ಮದ್ಯಪಾನ ನಡೆಸಿದ ವೇಳೆ ವಿಷಪ್ರಾಶನವಾಗಿದೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X