ತಂಡದಿಂದ ಯುವಕನ ದರೋಡೆ
ಮಂಜೇಶ್ವರ, ಮಾ.7: ಅಂಗಡಿ ನೌಕರನೋರ್ವನ ಬೈಕ್ ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಿದ ಆರು ಮಂದಿಯ ತಂಡವೊಂದು ಆತನಲ್ಲಿದ್ದ 10 ಸಾವಿರ ರೂ.ದರೋಡೆಗೈದ ಘಟನೆ ರವಿವಾರ ರಾತ್ರಿ ಆನೆಕಲ್ಲು ಪರಿಸರದಲ್ಲಿ ನಡೆದಿದೆ.
ಆನೆಕಲ್ಲು ವಿಜಯಡ್ಕ ನಿವಾಸಿ ಶಾಫಿ(22)ಇರಿತಕ್ಕೊಳಗಾಗಿ ಹಣ ಕಳೆದುಕೊಂಡ ಯುವಕ.ಗಾಯಗೊಂಡ ಶಾಫಿಯನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಡಿಪುವಿನಲ್ಲಿ ಅಂಗಡಿ ನೌಕರನಾಗಿರುವ ಶಾಫಿ ರವಿವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ತಂಡ ಹೊಂಚುಹಾಕಿ ಕೃತ್ಯವೆಸಗಿ ಪರಾರಿಯಾಗಿದೆ.
ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





