ವಿವಿಗಳಲ್ಲಿ ಕಲೆ ಆದಾರಿತ ಚಲನಚಿತ್ರಗಳಿಗೆ ಒತ್ತು ನೀಡಬೇಕು: ಬಿ.ಎಸ್. ಲಿಂಗದೇವರು

ಉಳ್ಳಾಲ: ಕಲೆ ಆಧಾರಿತ ಚಲನಚಿತ್ರಗಳ ಅಧ್ಯಯನಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಬಗ್ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಚಲನಚಿತ್ರ ಸರ್ಕ್ಯೂಟ್ಗಳ ಸ್ಥಾಪನೆ ದೇಶದಲ್ಲಿಯೂ ಆಗಬೇಕು. ಚಲನಚಿತ್ರಗಳು ಮನರಂಜನೆಗೆ ಸೀಮಿತಗೊಳ್ಳದೇ ಯುವಸಮುದಾಯದ ವಿಕಸನಕ್ಕೂ ದಾರಿಯಾಗಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ತಿಪಟೂರಿನ ಬಿ.ಯಸ್.ಲಿಂಗದೇವರು ಅಭಿಪ್ರಾಯಪಟ್ಟರು. ವರು ನಿಟ್ಟೆ ವಿಶ್ವವಿದ್ಯಾನಿಲಯದ ಸಮೂಹ ಮಾಧ್ಯಮದ ವತಿಯಿಂದ ದೇರಳಕಟ್ಟೆ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮೀಡಿಯ ಫೆಸ್ಟ್ -2016 ಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆ ಪ್ರಸಕ್ತ ವ್ಯವಹಾರ ಆಗಿ ಬಿಟ್ಟಿದೆ. ಶಿಕ್ಷಣ ಪಡೆದುಕೊಂಡವರು ಸಾಮಾನ್ಯ ಜ್ಞಾನವನ್ನು ಪಡೆಯದೆ ಸೀಮಿತ ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಇಂದು ವಿದ್ಯುನ್ಮಾನ ಮಾಧ್ಯಮಗಳು ಮತ್ತು ಚಲನಚಿತ್ರಗಳು ವೈಯಕ್ತಿಕ ವರ್ತನೆಗಳನ್ನು ಬದಲಾಯಿಸುವತ್ತ ಪ್ರಭಾವ ಬೀರುತ್ತಿದೆ. ಸಿನಿಮಾ ಅಧ್ಯಯನಕ್ಕೆ ಕಾಲೇಜುಗಳಿವೆ.ಚಲನ ಚಿತ್ರಗಳ ಶಾಸ್ತ್ರೀಯ ಅಧ್ಯಯನಕ್ಕೆ ಕಾಲೇಜುಗಳಿಲ್ಲ. ವಿದ್ಯಾರ್ಥಿಗಳಿಗೆ ಲಾಂಗು-ಮಚ್ಚು, ಪ್ರೀತಿ-ಪ್ರೇಮ, ಪ್ರಿಯತಮೆಗಾಗಿ ಹೋರಾಟ ಇವುಗಳೇ ಚಲನಚಿತ್ರ ಆಗಿಬಿಟ್ಟಿದೆ. ಹೆತ್ತವರು ಮೂರು ಗಂಟೆಯ ಕಾಲ ನಿದ್ರಿಸುವಂತಹ ಚಲನಚಿತ್ರಗಳು ಚಿಂತನೆ ಮೂಡಿಸುವ ಬದಲು ಚಿಂತೆ ಮಾಡುವ ಸ್ಥಿತಿಯನ್ನು ತಲುಪಿವೆ. ವಿಶ್ವವಿದ್ಯಾನಿಲಯಗಳಲ್ಲಿ ಇರುವ ನೀತಿಯಂತೆ ದೇಶದಲ್ಲೂ ವ್ಯಕ್ತಿತ್ವ ವಿಕಸನ ನಡೆಸುವಂತಹ ಕಲಾತ್ಮಕ ಚಲನಚಿತ್ರಗಳಿಗೆ ವಿ.ವಿ.ಗಳಲ್ಲಿ ನೀತಿ ಜಾರಿಯಾಗಿ ಸರಕಾರದಿಂದ ಕಲಾತ್ಮಕ ಚಿತ್ರ ರಚಿಸುವವರನ್ನು ಪ್ರೋತ್ಸಾಹಿಸಿದಲ್ಲಿ ಯುವಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.ಸಂದರ್ಭದಲ್ಲಿ ಸಮೂಹ ಮಾಧ್ಯಮ ವಿಭಾಗ ಮುಖ್ಯಸ್ಥ ಪ್ರೊ.ರವಿರಾಜ್ ಕಿಣಿ ಸ್ವಾಗತಿಸಿದರು. ಲಿಯೋರಾ ಡಿಕುನ್ಹಾ ಮತ್ತು ನೀಲ್ ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ರಿತಿಕಾ ‘ ನಾನು ಅವನಲ್ಲ ಅವಳು’ ಚಿತ್ರದ ಕುರಿತು ಮಾಹಿತಿ ನೀಡಿದರು. ದೀಕ್ಷಿತಾ ಪ್ರಶಾಂತ್ ವಂದಿಸಿದರು.





