ಅಕ್ಷರಾಳಿಗೆ ಅಕ್ಷರ ನಿರಾಕರಿಸಿದ ಕಾಲೇಜಿಗೆ ಜಿಲ್ಲಾಧಿಕಾರಿ ತಾಕೀತು: ವಿದ್ಯಾರ್ಥಿನಿ ಮತ್ತೆ ಕಾಲೇಜಿಗೆ

ಕಣ್ಣೂರು, ಮಾ. 9: ಎಚ್ಐವಿ ಪಾಸಿಟಿವ್ ಎಂದು ಪಿಲಾತ್ತರ ವಿರಾಸ್ ಕಾಲೇಜ್ ವಿದ್ಯಾರ್ಥಿನಿ ಅಕ್ಷರಾ ಒಂದು ವಾರದ ನಂತರ ಮತ್ತೆ ಕಾಲೇಜ್ಗೆ ತೆರಳಲಿದ್ದಾರೆ. ಎಚ್ಐವಿ ಪಾಸಿಟಿವ್ ಎಂಬ ಕಾರಣದಿಂದ ಕಾಲೇಜ್ ನಿಂದ ದೂರವಿರಿಸಲಾದ ವಿದ್ಯಾರ್ಥಿನಿ ತನ್ನ ಮನೆಯಲ್ಲಿಯೇ ಉಳಿದುಕೊಂಡಿದ್ದರು.
ಸಾಮಾಜಿಕ ರಾಜಕೀಯ ಕ್ಷೇತ್ರದಿಂದ ಕಾಲೇಜ್ ಆಡಳಿತ ಮಂಡಳಿ ತೀರ್ಮಾನದ ವಿರುದ್ಧ ಆಕ್ರೋಶ ಎದುರಾದಾಗ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಮ್ಯಾನೇಜ್ ಮೆಂಟ್ನೊಂದಿಗೆ ಚರ್ಚಿಸಿ ವಿದ್ಯಾರ್ಥಿನಿಗೆ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಮಾತ್ರವಲ್ಲ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ವಿದ್ಯಾ ಸಂಸ್ಥೆಗಳಲ್ಲಿ ಇಂತಹ ಘಟನೆಗಳನ್ನು ಮತ್ತೊಮ್ಮೆ ಸೃಷ್ಟಿಸಬೇಡಿ ಎಂದು ಜಿಲ್ಲಾಧಿಕಾರಿ ಪಿ ಬಾಲಕಿರಣ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಮಾಹಿತಿ ಶಿಬಿರವನ್ನು ನಡೆಸಲಾಗುವುದು. ವಿದ್ಯಾರ್ಥಿನಿ ಅಕ್ಷರಾ ತನ್ನ ಅಮ್ಮನೊಂದಿಗೆ ಕಾಲೇಜಿಗೆ ಮರಳಲಿದ್ದಾರೆ. ಸಹಪಾಠಿಗಳು ತನ್ನಲ್ಲಿ ಹಿಂದಿನಂತೆ ವರ್ತಿಸುವರೆಂದು ಅಕ್ಷರಾ ಭರವಸೆ ಹೊಂದಿದ್ದಾರೆ. ಈ ಮೊದಲೂ ಅವರಿಂದ ತನಗೆ ಯಾವ ತೊಂದರೆಯೂ ಆಗಿಲ್ಲವೆಂದು ಆಕೆ ಹೇಳಿದ್ದಾರೆ. ಆಗಿದ್ದೆಲ್ಲ ಮರೆತು ಕಲಿಯುವುದು ತನ್ನ ಗುರಿಯಾಗಿದ್ದು ಆದರೆ ಯಾವುದೇ ನಿರ್ಲಕ್ಷ್ಯವನ್ನೂ ನಾನು ಸಹಿಸಲಾರೆ ಎಂದು ಅಕ್ಷರಾ ಹೇಳಿದ್ದಾರೆ.
ವಿದ್ಯಾರ್ಥಿನಿಯ ತಾಯಿ ಕಾಲೇಜು ಮ್ಯಾನೇಜ್ ಮೆಂಟ್ ಇನ್ನೂ ಉಲ್ಟಾ ಮಾಡಬಹುದೇ ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ನೆರೆಯವರು ತಮ್ಮ ಮಕ್ಕಳೊಂದಿಗೆ ಆಡಿ ಬೆಳೆದ ಮಗು ಅದು. ಅವಳು ಎಲ್ಲರಿಗೂ ಪ್ರೀತಿ ಪಾತ್ರಳಾಗಿದ್ದಾಳೆ. ಆದ್ದರಿಂದ ಅವಳಿಗೆ ಎದುರಾಗುವ ಯಾವ ಸಮಸ್ಯೆಯನ್ನೂ ನಾವು ಎತ್ತಿಕೊಂಡು ಹೋರಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ವಿದ್ಯಾರ್ಥಿನಿಯನ್ನು ಕಾಲೇಜ್ನಿಂದ ಹೊರಹಾಕಿದ್ದು ತಿಳಿದು ಊರವರು ಕುಪಿತರಾಗಿ ಮ್ಯಾನೇಜ್ ಮೆಂಟ್ ವಿರುದ್ಧ ಪ್ರತಿಭಟನೆಗಿಳಿದಿದ್ದರು. ಆದರೆ ತಾಯಿ ಮತ್ತು ಮಗಳು ಸೇರಿ ಅವರನ್ನು ಸಮಧಾನ ಪಡಿಸಿದ್ದರು. ಅಂತಿಮವಾಗಿ ಜಿಲ್ಲಾಧಿಕಾರಿ ತೀರ್ಮಾನಿಸಲಿ ಎಂಬ ನಿಲುವನ್ನು ಊರವರು ತಳೆದಿದ್ದರು. ಹನ್ನೆರಡು ವರ್ಷ ಮೊದಲು ಈ ಕುಟುಂಬವನ್ನು ಒಂಟಿಗೊಳಿಸಿದ್ದವರು ಈಗ ಆ ಕುಟುಂಬಕ್ಕೆ ನೆರಳಾಗಿ ವರ್ತಿಸುತ್ತಿದ್ದಾರೆ. ಆ ಅಪರಾಧ ಮನೋಭಾವದಿಂದ ಇನ್ನೂ ಮುಕ್ತರಾಗಿಲ್ಲ. ವಾದಿಹುದಾ ಇನ್ ಸ್ಟಿಟ್ಯೂಟ್ ಆಫ್ ರಿಸರ್ಚ್ ಆಂಡ್ ಅಡ್ವಾನ್ಸ್ಡ್ ಸ್ಟಡೀಸ್ನ ಒಂದನೆ ವರ್ಷದ ಸೈಕಾಲಜಿ ವಿದ್ಯಾರ್ಥಿನಿಯಾಗಿರುವಾಗಲೇ ಕಲಿಕೆಯನ್ನು ಅಕ್ಷರಾ ಅರ್ಧದಲ್ಲಿ ಮೊಟಕುಗೊಳಿಸಬೇಕಾಗಿ ಬಂದಿತ್ತು. ಅವಳೊಂದಿಗೆ ಹಾಸ್ಟೆಲ್ನಲ್ಲಿ ಜೊತೆಯಾಗಿ ವಾಸ್ತವ್ಯದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿದ್ದು ಸಮಸ್ಯೆಗೆ ಕಾರಣವಾಗಿತ್ತು. ವಿದ್ಯಾರ್ಥಿನಿಯನ್ನು ಸಮೀಪದ ಹಿರಿಯರ ಆಶ್ರಯ ಧಾಮದಲ್ಲಿ ವಾಸಿಸುವಂತೆ ಅಧ್ಯಾಪಕರು ಸೂಚಿಸಿದ್ದರು. ಆಗ ಕಾಲೇಜು ತೊರೆದು ಬಂದಿದ್ದರು.
ಘಟನೆಯ ಕುರಿತು ಮೆಡಿಕಲ್ ತಜ್ಞರು ಮಾಹಿತಿ ಶಿಬಿರ ನಡೆಸಲಿದ್ದಾರೆ. ವಿದ್ಯಾರ್ಥಿನಿಯ ಮುಂದಿನ ಕಲಿಕೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಮ್ಯಾನೇಜ್ಮೆಂಟ್ ಪ್ರತಿನಿಧಿಗಳ ಜಂಟಿ ಕಮಿಟಿ ಮೇಲ್ನೋಟ ವಹಿಸಲಿದೆ. ವಿದ್ಯಾರ್ಥಿನಿ ಕಾಲೇಜಿಗೆ ಬಂದಾಗ ಸಾಮಾನ್ಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.







