Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದಲಿತ ಸಂಘಟಕರ ಕಣ್ಣಲ್ಲಿ ಅಮೆರಿಕ

ದಲಿತ ಸಂಘಟಕರ ಕಣ್ಣಲ್ಲಿ ಅಮೆರಿಕ

-ಕಾರುಣ್ಯಾ-ಕಾರುಣ್ಯಾ10 March 2016 11:28 PM IST
share
ದಲಿತ ಸಂಘಟಕರ ಕಣ್ಣಲ್ಲಿ ಅಮೆರಿಕ

 ಒಂದು ಕಾಲವಿತ್ತು ‘ಸಾಹಿತಿಗಳು, ಲೇಖಕರು ಅಮೆರಿಕಕ್ಕೆ ಪ್ರವಾಸ ಹೋಗುವುದು’ ಎಂದರೆ, ವೌಂಟ್ ಎವರೆಸ್ಟ್ ಶಿಖರವನ್ನು ಏರಿದಂತೆ. ಅಮೆರಿಕದಲ್ಲಿ ತಮ್ಮ ಪುತ್ರರು, ಮೊಮ್ಮಕ್ಕಳ ಜೊತೆ ಒಂದೆರಡು ತಿಂಗಳು ತಂಗಿ, ಮರಳಿ ಊರಿಗೆ ಬಂದಾಗ ಅದರ ಬಗ್ಗೆ ಒಂದು ಪ್ರವಾಸ ಕಥನ ಬರೆಯುವುದು ಲೇಖಕರಿಗೆ ಅಭ್ಯಾಸವೇ ಆಗಿ ಬಿಟ್ಟಿತ್ತು. ಅಪರಿಚಿತ ಊರಿನ ಕುರಿತಂತೆ ಆ ತೆಳುವಾದ ಬರಹ, ಎಷ್ಟು ಸವಕಲಾಗಿರುತ್ತಿತ್ತು ಎಂದರೆ, ಎಲ್ಲ ಪ್ರವಾಸಕಥನಗಳೂ ಒಂದೇ ದಾಟಿಯಲ್ಲಿರುತ್ತಿತ್ತು. ಲೇಖಕರು ಅಮೆರಿಕವನ್ನು ನೋಡುವ ದೃಷ್ಟಿ, ಪೂರ್ವ ನಿರ್ಧರಿತ ವಾಗಿರುತ್ತಿತ್ತು. ಅಮೆರಿಕ ಪ್ರವಾಸವೇ ಒಂದು ಸಾಧನೆಯೇನೋ ಎಂಬ ಹೆಮ್ಮೆಯೂ ಅದರೊಳಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಮೆರಿಕ ಪ್ರವಾಸಗೈಯುತ್ತಿರುವುದರಿಂದ ಮತ್ತು ಅಮೆರಿಕ ಜನಸಾಮಾನ್ಯರಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡಿರುವುದರಿಂದ, ಈ ರೀತಿಯ ಪ್ರವಾಸ ಕಥನಗಳು ಕಡಿಮೆಯಾಗತೊಡಗಿವೆ.
   
  ಇದೇ ಸಂದರ್ಭದಲ್ಲಿ ದಲಿತ ಸಂಘಟಕನೊಬ್ಬ ಅಮೆರಿಕ ಪ್ರವಾಸ ಗೈದರೇ, ಅವರು ತೆರೆದಿಡುವ ಅನುಭವ ಯಾವ ರೀತಿ ಇರಬಹುದು? ಈ ಪ್ರಶ್ನೆಗೆ ಉತ್ತರವಾಗಿದೆ ‘ಬಂದಾರಪ್ಪೋ ಬಂದಾರು ನಮ್ಮ ಜನಗೋಳು’ ಅಮೆರಿಕ ಪ್ರವಾಸ ಕಥನ. ಈ ಪ್ರವಾಸಕಥನವನ್ನು ಹಂಚಿಕೊಂಡವರು ದಲಿತ ಮುಖಂಡ ಲಕ್ಷ್ಮೀ ನಾರಾಯಣ ನಾಗವಾರ. ಅವರ ಪಾಲಿಗೆ ಇದು ತಿಂದು, ಉಂಡು ಬರುವ ಮೋಜಿನ ಪ್ರವಾಸವಾಗಿಲ್ಲ. ಅಮೆರಿಕದಲ್ಲಿದ್ದ ವರ್ಣಭೇದ ನೀತಿಯ ಇತಿಹಾಸವನ್ನು ಪ್ರತ್ಯಕ್ಷ ದರ್ಶಿಯಾಗಿ ತಿಳಿಯುವ, ವರ್ಣಭೇದದ ಕ್ರೌರ್ಯ, ಅಮಾನವೀಯತೆಗಳ ವಿರುದ್ಧ ಹೋರಾಟ ಮಾಡಿದವರ ಬಗೆಗಿನ ಅಧ್ಯಯನಕ್ಕೆ ಈ ಪ್ರವಾಸ ಸಹಾಯ ಮಾಡಿದೆ. ಪ್ರವಾಸದ ವೇಳೆ, ಅಮೆರಿಕದ ತಳದಲ್ಲಿ ಇನ್ನೂ ಕೆನೆಗಟ್ಟಿರುವ ವರ್ಣ ನೀತಿಯ ಕುರಿತಂತೆ ತಿಳಿದುಕೊಳ್ಳುವ ಸಣ್ಣದೊಂದು ಪ್ರಯತ್ನವನ್ನು ಈ ಪ್ರವಾಸ ಕಥನ ಮಾಡುತ್ತದೆ. ಅಮೆರಿಕದ ಜನರ ಸ್ನೇಹ, ವಿಶ್ವಾಸ, ಅಲ್ಲಿರುವ ಕನ್ನಡಿಗರ ಕುರಿತ ಅನಿಸಿಕೆಗಳು, ಅಲ್ಲಿನ ಇತಿಹಾಸ ಮತ್ತು ವರ್ತಮಾನ ಇವೆಲ್ಲವನ್ನೂ ತನ್ನ ಮಿತಿಯಲ್ಲಿ ಈ ಕೃತಿ ಪರಿಚಯಿಸುತ್ತದೆ. ಬರಹಕ್ಕೆ ಪೂರಕವಾಗಿ ವರ್ಣಮಯ ಚಿತ್ರಗಳೂ ಇವೆ. ಮಿಲಿಂದ್ ಪ್ರಕಾಶ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಮುಖಬೆಲೆ 175 ರೂ. ಆಸಕ್ತರು 94490 59393 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X