Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಲೆ ನೋವು...! ಕಾರಣಗಳು ಮತ್ತು ಚಿಕಿತ್ಸೆ

ತಲೆ ನೋವು...! ಕಾರಣಗಳು ಮತ್ತು ಚಿಕಿತ್ಸೆ

ಡಾ.ಕರುಣಾಕರ ಬಂಗೇರ, ಮುಲ್ಕಿಡಾ.ಕರುಣಾಕರ ಬಂಗೇರ, ಮುಲ್ಕಿ11 March 2016 11:59 PM IST
share
ತಲೆ ನೋವು...! ಕಾರಣಗಳು ಮತ್ತು ಚಿಕಿತ್ಸೆ

ಭಾಗ-5

ಕೆನ್ನೆದವಡೆಯ ತೊಂದರೆಗಳು
(Temporomandibular Disorders)
ದೇಹದ ಹಲವಾರು ರೋಗ ಪ್ರಕ್ರಿಯೆಗಳು ಅಂತಿಮವಾಗಿ ಈ ರೋಗ ಲಕ್ಷಣಗಳೊಂದಿಗೆ ವ್ಯಕ್ತಗೊಳ್ಳಬಹುದು. ಈ ತೊಂದರೆಯ ಸಾಮಾನ್ಯ ಲಕ್ಷಣಗಳೆಂದರೆ, ಕೆನ್ನೆಯ ಭಾಗದಲ್ಲಿ ತಲೆನೋವು, ಕಿವಿನೋವು, ಮುಖನೋವು, ಬಾಯಿ ಅಗಲವಾಗಿ ತೆರೆಯಲು ಸಾಧ್ಯವಾಗದಿರುವುದು ಅಥವಾ ದವಡೆಗಳ ಸಂದಿನಲ್ಲಿ ಸದ್ದು. ಹೆಚ್ಚಿನ ಈ ತೊಂದರೆಗಳು ಆಕಾರಣವಾಗಿ ಹಠಾತ್ ತಲೆಯೆತ್ತಿರುತ್ತವಾದರೂ, ನೂರಕ್ಕೆ 40 ಮಂದಿಯಲ್ಲಿ ಆಘಾತದಂತಹ ಪೂರ್ವ ಕಾರಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ತೊಂದರೆಯಲ್ಲಿ ಭಾವನಾತ್ಮಕ-ಮಾನಸಿಕ ಅಂಶಗಳ ಪಾತ್ರವನ್ನೂ ಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ.
ನೇರವಾಗಿ ಕೆನ್ನೆಯ ದವಡೆ ಸಂದಿಯಲ್ಲಿ ಊತ ಮತ್ತು ದವಡೆ ಸಂದಿ ಚಲಿಸಿದಾಗ ನೋವು ಕಂಡುಬರುವುದು ಅಪರೂಪ ಮತ್ತ್ತು ಇಂತಹ ಸ್ಥಿತಿಯನ್ನು ಕ್ಷ-ಕಿರಣ ಬಿಂಬ ತಪಾಸಣೆಯ ವೇಳೆ ಖಂಡಿತವಾಗಿ ಗುರುತಿಸುವುದು ಸಾಧ್ಯ. ಆದರೆ ನೂರಕ್ಕೆ 60-70 ಮಂದಿಯಲ್ಲಿ ಈ ನೋವಿನ ಜೊತೆ ಇದಕ್ಕಿಂತ ಹೆಚ್ಚಾಗಿ ಸ್ನಾಯುಗಳ ನೋವಿರುತ್ತದೆ. ಜಗಿಯುವ ಸ್ನಾಯುಗಳನ್ನು ಮುಟ್ಟಿದರೆ ನೋವು ಇರುತ್ತದೆ.

ತಲೆಬುರುಡೆಯೊಳಗೆ ರಕ್ತದೊತ್ತಡ ಏರು ನಿರಪಾಯಕಾರಿ ಸ್ಥಿತಿ
(Pseudotumor Cerebri)
ಆಗಾಗ ವೈವಿಧ್ಯಮಯ ತೀವ್ರತೆಯ ತಲೆನೋವು ಕಾಣಿಸಿಕೊಳ್ಳುವ ಸ್ಥಿತಿ ಇದು. ಹೆಚ್ಚಾಗಿ ಅವರ ನರ ಸಂಬಂಧಿ ತಪಾಸಣೆಗಳ ವೇಳೆ ಗಮನಾರ್ಹ ದೋಷಗಳೇನೂ ಪತ್ತೆ ಆಗಿರುವುದಿಲ್ಲ. ರೋಗಿಗೆ ಕಣ್ಣುಗುಡ್ಡೆಗಳು ಊದಿಕೊಂಡಿರುತ್ತವಾದರೂ (ಜ್ಝ್ಝಿಛಿಛಿಞ), ಸಿ.ಟಿ. ಸ್ಕ್ಯಾನ್ ವೇಳೆ ಗಡ್ಡಿಯಾಗಲಿ, ತಲೆಬುರುಡೆಯಲ್ಲಿ ದ್ರವ ತುಂಬಿರುವ ಸ್ಥಿತಿಯಾಗಲಿ, ಕಂಡುಬರುವುದಿಲ್ಲ. ಬೆನ್ನುಹುರಿಯ ದ್ರವದ ಒತ್ತಡ 200ಞಞ ಏ2ಗಿಂತ ಹೆಚ್ಚಿರುತ್ತದಾದರೂ, ಅದರಲ್ಲಿ ಅಸಹಜತೆಗಳೇನಾದರೂ ಇರುವುದಿಲ್ಲ.
ಇಂತಹ ರೋಗಿಗಳಲ್ಲಿ ಈ ತೊಂದರೆಯ, ಜೊತೆಗೆ ಅನಿಯಮಿತ ಋತುಸ್ರಾವ ಅಥವಾ ಬೇರೆ ಎಂಡೊಕ್ರೈನ್ ತೊಂದರೆಗಳು, ಕಳೆದ 6 ತಿಂಗಳಿನಲ್ಲಿ ಶೇ.10ಕಿಂತ ಹೆಚ್ಚು ತೂಕ ಏರಿರುವುದು, ಹಲವಾರು ತಿಂಗಳುಗಳ ಕಾಲ ದೃಷ್ಟಿಯ ವ್ಯಾಪ್ತಿ ಸಂಕುಚನಗೊಂಡಿರುವುದು ಮೊದಲಾದ ಲಕ್ಷಣಗಳು ಕಂಡುಬರಬಹುದು.
ಈ ತೊಂದರೆ ಇರುವವರಿಗೆ ಅಸೆಟಾಸೀಲಾಮೈಡ್ ಮತ್ತು ಪ್ಯುರೊಸೆಮೈಡ್‌ನಂತಹ ಔಷಧಿಗಳನ್ನು ಬಳಸಿ ಬೆನ್ನುಹುರಿಯದ ದ್ರವ ಉತ್ಪಾದನೆಯ ಪ್ರಮಾಣವನ್ನು ತಗ್ಗಿಸಬೇಕಾಗುತ್ತದೆ.

share
ಡಾ.ಕರುಣಾಕರ ಬಂಗೇರ, ಮುಲ್ಕಿ
ಡಾ.ಕರುಣಾಕರ ಬಂಗೇರ, ಮುಲ್ಕಿ
Next Story
X