ಕಾಸರಗೋಡು: ಏಕಕಾಲದಲ್ಲಿ 100 ತೆಂಗು ಸಸಿ ನೆಡುವ ಮೂಲಕ ಚಾಲನೆ
ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಶತಮಾನೋತ್ಸವ
.jpg)
ಕಾಸರಗೋಡು: ಕಾಸರಗೋಡು ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ( ಸಿ ಪಿ ಸಿ ಆರ್ ಐ ) ನ ಶತಮಾನೋತ್ಸವಕ್ಕೆ ಶನಿವಾರ ಏಕಕಾಲದಲ್ಲಿ ೧೦೦ ತೆಂಗು ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ನೂರು ವರ್ಷ ತುಂಬಿದ ಸಂದರ್ಭದಲ್ಲಿ ೧೦೦ ತೆಂಗು ನೀಡಲಾಗಿದೆ.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೆಹಲಿ ತೋಟಗಾರಿಕಾ ಸಯನ್ಸ್ ಕೇಂದ್ರ (ಐಸಿಎರ್) ದ ಉಪ ನಿರ್ದೇಶಕ ಡಾ . ಎನ್ . ಕೆ ಕೃಷ್ಣ ಕುಮಾರ್ ಉದ್ಘಾಟಿಸಿದರು.
ಕ್ಯಾ೦ಪ್ಕೋ ಅಧ್ಯಕ್ಷ ಎಸ್. ಆರ್ ಸತೀಶ್ ಕುಮಾರ್ ಮುಖ್ಯ ಭಾಷಣ ನೀಡಿದರು.
ಸಮಾರಂಭದಲ್ಲಿ ಸಿಪಿಸಿಆರ್ ಐ ಡಾ . ಪಿ . ಚೌಡಪ್ಪ ,
ಸಿಪಿಸಿಆರ್ ಐ ಪೂರ್ವ ನಿರ್ದೇಶಕ ಡಾ . ಕೆ . ವಿ ಆಹಮ್ಮದ್ ಬಾವಪ್ಪ , ಡಾ. ಕೆ . ಯು. ಕೆ ನಂಬೂದಿರಿ, ಡಾ . ಜೋರ್ಜ್ ವಿ . ಥಾಮಸ್ , ಡಾ . ಎನ್. ಪಿ ಸಿಂಗ್ , ಡಾ . ಪಿ . ಎಲ್ ಸರೋಜ್, ಡಾ . ಸಿ . ಎನ್ ರವಿ ಶಂಕರ್ , ಡಾ . ಜೇಮ್ಸ್ ಜೇಕಬ್, ಕೊಂಕೋಡಿ ಪದ್ಮನಾಭ , ಜ್ಯೋತಿಷ್ ಜಗನ್ನಾಥ್ , ಡಾ . ಎ೦. ಗೋವಿಂದನ್ ಮೊದಲಾದವರು ಉಪಸ್ಥಿತರಿದ್ದರು .
ಸಿಪಿಸಿಆರ್ ಐ ನಿರ್ದೇಶಕ ಡಾ . ಪಿ. ಚೌಡಪ್ಪ .
ಡಾ . ಸಿ. ತಂಬಾನ್ ಸ್ವಾಗತಿಸಿದರು . ಡಾ . ಕೆ ಮುರಳೀಧರನ್ ವಂದಿಸಿದರು.
ಸಮಾರಂಭದಲ್ಲಿ ಚಿತ್ರಕಲಾವಿದ ಪಿ. ಎಸ್ ಪುಣಿ೦ಚತ್ತಾಯ
ರವರನ್ನು ಸನ್ಮಾನಿಸಲಾಯಿತು.
ಶತಮಾನೋತ್ಸವದಂಗವಾಗಿ ಡಿಸೆಂಬರ್ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತೆಂಗಿನಕಾಯಿ ಆಧರಿಸಿ ಸಿಪಿಸಿಆರ್ಐ ತಯಾರಿಸಿದ ಚಾಕಲೇಟ್, ಕೃಷಿಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ನಡೆಯಿತು.





