Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಂಬೇಡ್ಕರ್, ಬುದ್ಧನ ಸೆರಗು ಹಿಡಿದು...

ಅಂಬೇಡ್ಕರ್, ಬುದ್ಧನ ಸೆರಗು ಹಿಡಿದು...

ವಾರ್ತಾಭಾರತಿವಾರ್ತಾಭಾರತಿ15 March 2016 5:20 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಂಬೇಡ್ಕರ್, ಬುದ್ಧನ ಸೆರಗು ಹಿಡಿದು...

ದೇಸೀ ಸೊಗಡನ್ನು ಇಟ್ಟು ಕವಿತೆ ಬರೆಯುವ ಮಂಜು ಕೋಡಿ ಉಗನೆ ಅವರ ‘ನಾನು ಮಲ್ಲಿಗೆ ಮತ್ತು ದೇವರು’ ಕೃತಿ ಸಂವೇದನಾಶೀಲ ಮನಸ್ಸು ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಒಡಮೂಡಿರುವುದು. ಒಡಲ ಕುಲುಮೆಯಿಂದೆದ್ದ ಸಾಲುಗಳು, ನೋವುಗಳು ಇಲ್ಲಿ ಕವಿತೆಯ ರೂಪ ಪಡೆದಿದೆ. ಎಲ್ಲ ಆಕ್ರೋಶದ ಸದ್ದುಗಳ ನಡುವೆಯೂ, ಬುದ್ಧ, ಅಂಬೇಡ್ಕರ್, ತಾಯಿಯ ಕುರಿತಂತೆ ಬರೆಯುವಾಗ ಪುಂಗಿಯ ನಾದಕ್ಕೆ ತಲೆಯಾಡಿಸುವ ಹಾವಿನಂತೆ ಸಾಲುಗಳು ಬಳುಕುತ್ತವೆ. ‘‘ತಾಯಿ ಕರುಳ ಕುಡಿಯು ನೀನು

ಕರುಳ ಮಾಲೆ ಪ್ರೀತಿ ಬಂಧ

ಒಡಲ ತೊಗಲ ಅನುಬಂಧ

ಹೃದಯ ಕಮಲ ಕರುಣ ಮಾಲೆ

ಪ್ರೀತಿಗೆ ಮೂಲ ಹೆತ್ತ ತಾಯಿ

ದ್ವೇಷಕ್ಕೆ ಇರುವರೆ ಯಾರಾದರೂ ತಾಯಿ?’’ ಎಂಬ ಪ್ರಶ್ನೆಯನ್ನಿಡುವ ಅವರ ಕವಿತೆಯಲ್ಲಿ ಪ್ರೀತಿಯ ತಹತಹಿಕೆಯಷ್ಟೇ ಇದೆ. ಅವರ ಕವಿತೆಗಳ ಸಿಟ್ಟಿನ ಮೂಲವೂ ಪ್ರೀತಿಯ ಹಪಹಪಿಕೆಯೇ ಆಗಿದೆ.

‘‘ಮುಟ್ಟು ಯಾವುದು ಹೇಳಯ್ಯ?

ಅಮಾದಿಯ ಅಂಡು ತೊಳೆವ ಜಲಮುಟ್ಟೆ

ಮುಟ್ಟು ಯಾವುದು ಹೇಳಯ್ಯ?

ಮುಳುಗಿ ಮಡಿವ ನನ್ನ ಮುಟ್ಟದೆ

ಮಡಿಯೆಂದು ಹಾರುವರ ಅಂತರಂಗ ಮುಟ್ಟೆ...’’

 ಎಂದು ಅಸ್ಪಶ್ಯತೆಯ ವಿರುದ್ಧ ಕವಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವರ ಹೆಚ್ಚಿನ ಕವಿತೆಗಳು ಅಸ್ಪಶ್ಯತೆ, ಜಾತೀಯತೆಯ ಸುತ್ತ ಸುತ್ತುತ್ತವೆ. ಹಾಗೆಯೇ ಮೇಲುಕೀಳುಗಳ ವಿರುದ್ಧ ಧ್ವನಿಯೆತ್ತಿದ ಬುದ್ಧ, ಅಂಬೇಡ್ಕರ್‌ರ ಸೆರಗು ಹಿಡಿದು ಓಡಾಡುತ್ತವೆ. ಅವರ ಕವಿತೆಗಳ ಹಲವು ಸಾಲುಗಳಲ್ಲಿ ಜಾನಪದೀಯ ಲಯಗಳಿವೆ. ಭಾಷೆಗಳು ಆ ಲಯಕ್ಕೆ ಪೂರಕವಾಗಿವೆ. ಅವರೊಳಗಿನ ಆಕ್ರೋಶ, ನೋವು ಕಾವ್ಯದ ಪಾತಳಿಯಲ್ಲಿ ಹರಿಯುವುದಕ್ಕೆ ಇನ್ನಷ್ಟು ದಾರಿಗಳನ್ನು ಹುಡುಕಬೇಕು. ಈ ನಿಟ್ಟಿನಲ್ಲಿ, ಬಂಜಗೆರೆಯವರು ಬೆನ್ನುಡಿಯಲ್ಲಿ ಹೇಳುವಂತೆ, ವೌಖಿಕ ಕಥನಗಳ ವರ್ಣಕತೆ, ಜನಪದ ತತ್ವಜ್ಞಾನಗಳ ಮೋಹಕತೆ ಹಾಗೂ ಆಚರಣಾ ಲೋಕದ ಸಾಂಕೇತಿಕತೆಯ ಅಂಶಗಳನ್ನು ಅಳವಡಿಸಿಕೊಂಡು ಇನ್ನಷ್ಟು ದಟ್ಟವಾದ ಅನುಭವಗಳನ್ನು ತೆರೆದಿಡುವ ಅವಕಾಶ ಮಂಜು ಅವರಿಗಿದೆ.

ಜೋಳಿಗೆ ಪ್ರಕಾಶನ, ಚಾಮರಾಜ ನಗರ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು 9845993527 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X