Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸುನೀತಾ ಶೆಟ್ಟಿ: ಸಹೃದಯ ಮನದೊಳಗೆ ಮಿಡಿವ...

ಸುನೀತಾ ಶೆಟ್ಟಿ: ಸಹೃದಯ ಮನದೊಳಗೆ ಮಿಡಿವ ಕಾವ್ಯ ಚಿಟ್ಟೆ

ಕಾರುಣ್ಯಕಾರುಣ್ಯ17 March 2016 12:11 AM IST
share
ಸುನೀತಾ ಶೆಟ್ಟಿ: ಸಹೃದಯ ಮನದೊಳಗೆ ಮಿಡಿವ ಕಾವ್ಯ ಚಿಟ್ಟೆ

ಮುಂಬೈ ಕನ್ನಡವೆಂದಾಗ ನೆನಪಾಗುವ ಹೆಸರುಗಳಲ್ಲಿ ಮುಂಚೂಣಿಯಲ್ಲಿರುವುದು ಡಾ. ಸುನೀತಾ ಎಂ. ಶೆಟ್ಟಿ. ಕತೆಗಾರ್ತಿ, ಕವಯತ್ರಿಯಾಗಿ, ಚಿಂತಕಿಯಾಗಿ, ಸಂಘಟಕಿಯಾಗಿ, ಶಿಕ್ಷಕಿಯಾಗಿ ಮುಂಬೈ ಮಾತ್ರವಲ್ಲ ಕರ್ನಾಟಕಾದ್ಯಂತ ಪರಿಚಿತರು. ಇವರು ತಮ್ಮ ಆತ್ಮತತೆಯನ್ನು ಹಲವೆಡೆಗೆ ಹಲವು ರೀತಿಯಲ್ಲಿ ಕೃತಿಗಿಳಿಸಿದ್ದಾರೆ. ‘ಸಾವಿರದ ಬಿಸಿಲು-ಬೆಳದಿಂಗಳು’ ಅವರ ಆತ್ಮಕಥನದ ವಿಸ್ತೃತ ರೂಪ. ಈ ಕಿರು ಕೃತಿ ವಿಶಿಷ್ಟವೆನಿಸುವುದು, ಅವರ ಬಳಸುವ ಸರಳ ಭಾಷೆಯ ಮೂಲಕ. ಹಾಗೆಯೇ ಇದು ಮುಂಬೈಗಿಂತಲೂ ತುಳುನಾಡಿನ 40ರ ದಶಕದ ಕಾಲ ಘಟ್ಟವನ್ನು ಅತ್ಯಂತ ಆತ್ಮೀಯವಾಗಿ ಹಿಡಿದಿಡುತ್ತದೆ. ಬಾಲ್ಯ ಕಾಲ, ತುಳು ಸಂಸ್ಕೃತಿ, ಜಾತ್ರೆ, ದಿಬ್ಬಣ ಇವೆಲ್ಲವನ್ನೂ ಅತ್ಯಂತ ಲವಲವಿಕೆಯಿಂದ ಕಥನ ರೂಪದಲ್ಲಿ ಕಟ್ಟಿಕೊಡುತ್ತಾರೆ. ಹಾಗೆಯೇ ಮಂಗಳೂರಿನ ಕಾಲೇಜಿನ ದಿನಗಳು ಮತ್ತು ಬರಹ ಲೋಕಕ್ಕೆ ಕಾಲಿಡಲು ಕಾರಣವಾದ ಸಂಗತಿಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಹಾಗೆಯೇ ಬಂಟ ಹುಡುಗಿಯೊಬ್ಬಳು ಆ ಕಾಲ ಘಟ್ಟದಲ್ಲಿ ‘ವರದಕ್ಷಿಣೆ ಕೇಳದ ಗಂಡನನ್ನೇ ಮದುವೆಯಾಗುವೆ’ ಎಂದು ಹಟ ಹಿಡಿಯುವುದು ಮತ್ತು ಅದನ್ನು ಸಾಧಿಸಿಕೊಳ್ಳುವುದನ್ನು ಒಂದು ಅಧ್ಯಾಯದಲ್ಲಿ ಹೇಳಿಕೊಳ್ಳುತ್ತಾರೆ. ಇಂತಹ ಆದರ್ಶಗಳನ್ನು ಹದಿ ಹರೆಯದಲ್ಲೇ ಮುಡಿದುಕೊಂಡಿದ್ದ ಸುನೀತಾ, ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎಂಬ ರೀತಿಯಲ್ಲಿ ಸೃಜನಕ್ರಿಯೆಯನ್ನು ನಂಬಿದವರು. ಸುನೀತಾ ಶೆಟ್ಟಿಯವರ ಬದುಕು ಇನ್ನಷ್ಟು ವಿಸ್ತಾರಗೊಳ್ಳಲು ಕಾರಣವಾದ ಮುಂಬೈಯ ಬಗ್ಗೆಯೂ ಅಪಾರ ಮಾಹಿತಿಗಳನ್ನು ತೆರೆದಿಡುತ್ತಾರೆ.

ಈ ಕೃತಿ, ಮುಂಬೈ ಕನ್ನಡದ ಕುರಿತಂತೆ ಅಧ್ಯಯನ ಮಾಡುವವರಿಗೂ ಒಂದು ಕೈಪಿಡಿಯಾಗಿದೆ. ಮಹಿಳಾ ಸಂವೇದನೆಯನ್ನು ಬದುಕಿನ ಉಸಿರಾಗಿಸಿಕೊಂಡು, ಆ ಮೂಲಕ ಕರ್ನಾಟಕದಲ್ಲೂ, ಮುಂಬೈಯಲ್ಲೂ ಸೃಜನಶೀಲತೆಗೆ ತನ್ನದೇ ಆದ ಮಾರ್ಗವನ್ನು ಕಂಡುಕೊಂಡ ಪರಿಯನ್ನು ನಾವು ಈ ಕೃತಿಯಲ್ಲಿ ಗುರುತಿಸಬಹುದು. ‘ಅರೆ ಶತಮಾನ ಮರಾಠಿ ನೆಲದಲ್ಲಿ

ಕನ್ನಡ ಕುಸುಮ ಅರಳಿಸಿದವಳೇ

ಗುಂಪುಗಾರಿಕೆ ಹುಳುಕು, ಕೆಡುಕು ಮೈಕೊಡವಿ

ಮಂದ್ರದಲಿ ಗೀತ-ಸುನೀತಾ ಉಲಿದವಳೇ

ಅಬಲೆಯಲ್ಲ ದಿಟ್ಟೆ, ಆಲವೋ ಆಲಯವೋ

ಸಹೃದಯ ಮನದೊಳಗೆ ಮಿಡಿವ ಕಾವ್ಯ ಚಿಟ್ಟೆ’ ಬೆನ್ನುಡಿಯಲ್ಲಿ ಗೋಪಾಲ ತ್ರಾಸಿಯವರು ಬರೆದ ಸಾಲುಗಳು ಸುನೀತಾ ಶೆಟ್ಟಿಯವರಿಗೆ ಅನ್ವರ್ಥವಾಗಿದೆ. ಈ ಕೃತಿಯನ್ನು ಸನ್ನಿಧಿ ಪ್ರಕಾಶನ ಮುಂಬೈ ಹೊರತಂದಿದೆ. ಮುಖಬೆಲೆ 250 ರೂಪಾಯಿ. ಆಸಕ್ತರು 2430 8316 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯ
ಕಾರುಣ್ಯ
Next Story
X