Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಧಾರ್ ಮಸೂದೆಯಲ್ಲಿ ಕಾರ್ಯಾಂಗಕ್ಕೆ...

ಆಧಾರ್ ಮಸೂದೆಯಲ್ಲಿ ಕಾರ್ಯಾಂಗಕ್ಕೆ ಅತಿರೇಕದ ಅಧಿಕಾರ

ವಾರ್ತಾಭಾರತಿವಾರ್ತಾಭಾರತಿ17 March 2016 11:05 PM IST
share

ಹೊಸದಿಲ್ಲಿ, ಮಾ.17: ಸರಕಾರದ ಬೊಕ್ಕಸದಿಂದ ಖರ್ಚಾಗುವ ಒಂದು ಪೈಸೆಯನ್ನೂ 12 ಅಂಕಗಳ ವಿಶೇಷ ಗುರುತು ಸಂಖ್ಯೆಯ ಮೂಲಕ ಕಂಡು ಹಿಡಿಯಬಹುದೆನ್ನುವ ವಿಶ್ವಾಸವು ಅದು ಆಧಾರ್ ಕಾರ್ಯಕ್ರಮವನ್ನು ಉತ್ತೇಜಿಸಲು ಕಾರಣವಾಗಿದೆ. ಆದರೆ, ಆಧಾರ್ ಸಂಖ್ಯೆ ಕೇವಲ ಹಣವನ್ನು ಮಾತ್ರ ಪತ್ತೆ ಹಚ್ಚುವುದಿಲ್ಲ. ಅದು, ಆಶ್ಚರ್ಯಕರ ಸಾಮರ್ಥ್ಯದೊಂದಿಗೆ ಜನರನ್ನು ಗುರುತಿಸಲೂ ಸಹಾಯ ಮಾಡುತ್ತದೆ.

ಇದು ಆಧಾರ್ ಕಾರ್ಯಕ್ರಮದ ಕುರಿತು ವಿವಾದದ ಕೇಂದ್ರ ಬಿಂದುವಾಗಿದೆ.


ರಾಜ್ಯಸಭೆಯಲ್ಲಿ ಬುಧವಾರ ಆಧಾರ್ (ಆರ್ಥಿಕ ಮತ್ತು ಇತರ ಸಬ್ಸಿಡಿಗಳು, ಲಾಭಗಳು ಹಾಗೂ ಸೇವೆಗಳ ಪೂರೈಕೆ ಗುರಿ) ಮಸೂದೆ-2016 ಮಂಜೂರಾತಿಗಾಗಿ ಬಂದಾಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಸೂದೆಯನ್ನು ಬಲವಾಗಿ ಸಮರ್ಥಿಸಿದ್ದರು. ಖಾಸಗಿತನದ ವಿಚಾರಕ್ಕೆ ಬಂದಾಗ, ಎನ್‌ಡಿಯ ಸರಕಾರದ ಮಸೂದೆಯು 2010ರಲ್ಲಿ ಯುಪಿಎ ಸರಕಾರ ಪ್ರಸ್ತಾವಿಸಿದ್ದ ಕರಡಿಗಿಂತ ಅತಿ ಹೆಚ್ಚು ಕಠಿಣವಾಗಿದೆ. ಈ ಮಸೂದೆಯನ್ವಯ ಕೇವಲ 2 ಸಂದರ್ಭಗಳಲ್ಲಿ ಮಾತ್ರ ಯುಐಡಿಎಇ ಸಂಗ್ರಹಿಸಿರುವ ವೈಯಕ್ತಿಕ ಮಾಹಿತಿಯನ್ನು ಹಂಚಲು ಸಾಧ್ಯವಿದೆ. ಮೊದಲನೆಯದು, ತನ್ನ ವಿವರವನ್ನು ಹಂಚಿಕೊಳ್ಳಲು ಆಧಾರ್ ಸಂಖ್ಯೆ ಹೊಂದಿರುವವನ ಸಮ್ಮತಿಯಿದ್ದಾಗ ಹಾಗೂ ಎರಡನೆಯದು, ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ಸರಕಾರಿ ಸಂಸ್ಥೆಯೊಂದು ಈ ಮಾಹಿತಿ ಬಯಸಿದಾಗ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಎನ್‌ಡಿಎಯಾಗಲಿ ಯುಪಿಎಯಾಗಲಿ ಬಗೆಹರಿಸದ ಖಾಸಗೀತನದ ಕಳವಳದ ಕುರಿತ ಚರ್ಚೆ ಹಾಗೂ ಹೊಸ ಮಸೂದೆ ಅತೀ ಹೆಚ್ಚು ಮೂಲಭೂತವಾಗಿದೆ.
ಆಧಾರ್ ಮಸೂದೆಯ ಕಾನೂನನ್ನು ಹೇಗೆ ನಿರ್ವಹಿಸಬೇಕು ಎಂದು ನಿರ್ಧರಿಸುವ ಮಿರಿಮೀರಿದ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡುತ್ತದೆ.
ಪ್ರತಿಯೊಂದು ಕಾಯ್ದೆಯೂ, ಅದರ ಜಾರಿಯ ಸಾಧಕ-ಬಾಧಕಗಳನ್ನು ವಿವರಿಸುವ ನಿಯಮಗಳನ್ನು ಸರಕಾರ ರೂಪಿಸುವುದನ್ನು ಬಯಸುತ್ತದೆ.
ಆದರೆ, ಸಂಸತ್ತು ಮಂಜೂರು ಮಾಡಿರುವ ಆಧಾರ್‌ಮಸೂದೆಯು, ಸುಮಾರು ಎಲ್ಲ ಪ್ರಸ್ತಾಪಗಳಿಗೆ ನಿಬಂಧನೆಗಳನ್ನು ರೂಪಿಸುವ ಹಾಗೂ ಸಂಗ್ರಹಿಸಿ ಬೇಕಾದ ಜೈವಿಕ ಹಾಗೂ ಜೀವಶಾಸ್ತ್ರೀಯ ಗುರುತುಗಳ ಬಗ್ಗೆ ಬರೆಯುವ ಅಧಿಕಾರವನ್ನು ಯುಐಡಿಎಐಗೆ ನೀಡುತ್ತದೆ.
ಕಾಯ್ದೆಯು ಕಾರ್ಯಾಂಗದ ಕೈಗೆ ಮಿತಿ ಮೀರಿದ ಅಧಿಕಾರ ನೀಡಿದೆಯೆಂದು ಬೆಂಗಳೂರು ಮೂಲದ ಸಂಶೋಧನೆ ಸಮರ್ಥಕ ಗುಂಪು ‘ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ’ ಕಾರ್ಯವಾಹಿ ನಿರ್ದೇಶಕ ಸುನೀಲ್ ಅಬ್ರಹಾಂ ಅಭಿಪ್ರಾಯಿಸಿದ್ದಾರೆ.
ಉದಾಹರಣೆಗೆ: ಜನರ ಯಾವುದೇ ಜೀವಶಾಸ್ತ್ರೀಯ ಗುರುತನ್ನೂ ಸಂಗ್ರಹಿಸ ಬೇಕೇ ಎಂದು ನಿರ್ಧರಿಸುವ ಅಧಿಕಾರವನ್ನು ಯುಐಡಿಎಐಗೆ ಮಸೂದೆ ನೀಡುತ್ತದೆ. ಅಂದರೆ, ಮುಂದೊಂದು ದಿನ ಸರಕಾರ ಎಲ್ಲ ಆಧಾರ್ ಕಾರ್ಡ್‌ಧಾರಿಗಳ ಡಿಎನ್‌ಎಯನ್ನೂ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಬಹುದು. ಈ ಉದಾಹರಣೆ ಬುಧವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ.
ಯುಐಡಿ ಪ್ರಾಧಿಕಾರ ನಾಳೆ ಡಿಎನ್‌ಎ ಅಗತ್ಯವೆಂದು ನಿರ್ಧರಿಸಬಹುದು. ಆಗ, ಅವರು ಡಿಎನ್‌ಎ ಮಾಹಿತಿಯನ್ನೂ ಪಡೆಯುವ ಅಧಿಕಾರ ಪಡೆಯುತ್ತಾರೆ. ಆದುದರಿಂದ ಯುಐಡಿ ಪ್ರಾಧಿಕಾರಕ್ಕೆ ಯಾವುದೇ ಅಧಿಕಾರ ನೀಡಬಾರದೆಂದು ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.
 ಸಚಿವರು ಯುಐಡಿಎಐ ಹೊರಡಿಸಿರುವ ನಿಬಂಧನೆಗಳ ಬಗ್ಗೆ ವಿಶ್ವಾಸವನ್ನು ವಿವರಿಸಲು ಪ್ರಯತ್ನಿಸಿದರು. ಕಾಯ್ದೆಯಾದ್ಯಂತ ‘ನಿಬಂಧನೆಗಳು’ ಎಂಬ ಶಬ್ದ ಸುಮಾರು 50 ಬಾರಿ ಬಂದಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಥವಾ 2010ರ ಮಸೂದೆಯ ಪಾಠಗಳಲ್ಲಿ ಆ ಶಬ್ದ 10ಕ್ಕಿಂತಲೂ ಕಡಿಮೆ ಸಲ ಪ್ರಯೋಗವಾಗಿದೆ.
ಯುಐಡಿಎಐ ಹೊರಡಿಸಿರುವ ಅಧಿಸೂಚನೆಗಳನ್ನು ಸಂಸದೀಯ ಅನುಮೋದನೆಗೆ ಇರಿಸಿದಾಗ, ಸದಸ್ಯರು ಈಗಲೂ ಅವುಗಳನ್ನು ಪರಾಮರ್ಶಿಸಬಹುದೆಂದು ಜೇಟ್ಲಿ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X