Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಭಕ್ತ್.. ಜನೋಂ..ಕೇ.. ಸಂಕಟ್...

ಭಕ್ತ್.. ಜನೋಂ..ಕೇ.. ಸಂಕಟ್...

ದಯಾನಂದ್ ಟಿ. ಕೆ.ದಯಾನಂದ್ ಟಿ. ಕೆ.19 March 2016 6:20 PM IST
share
ಭಕ್ತ್.. ಜನೋಂ..ಕೇ.. ಸಂಕಟ್...

ನಮ್ಮ ಮನೆ ಮಗನೇ ಪ್ರಧಾನಿ ಆಗ್ತಿದ್ದಾನೇನೋ ಅನ್ನೋಷ್ಟು ಸಂಭ್ರಮಪಟ್ಟು ಈ ದೇಶದ ಮಧ್ಯಮವರ್ಗ ಬಿಜೆಪಿಯ ಪರವಾಗಿ ತುತ್ತೂರಿ ಊದಿಕೊಂಡು ಸಪೋರ್ಟಿಗೆ ನಿಂತಿತ್ತಲ್ಲ.. ಅದೇ ಮಿಡಲ್ ಕ್ಲಾಸ್ ಗೆ ಇದೀಗ ಬಿಜೆಪಿ.. ಬೆನ್ನಿಗೆ ಚೂರಿ ಹಾಕಿದೆ. ಸಣ್ಣಮಟ್ಟದ ಉದ್ಯೋಗದಲ್ಲಿದ್ದುಕೊಂಡು ಸ್ವಂತಮನೆ, ಮಗಳ ಮದುವೆ, ಖಾಯಿಲೆಕಸಾಲೆ ಚಿಕಿತ್ಸೆಗೆಂದು ಪೋಸ್ಟ್ ಆಫೀಸ್, ಪ್ರಾವಿಡೆಂಡ್ ಫಂಡ್, ಕಿಸಾನ್ ವಿಕಾಸ ಪತ್ರಗಳ ರೂಪದಲ್ಲಿ ಸೇವಿಂಗ್ಸ್ ಮಾಡ್ತಿದ್ರಲ್ಲ.. ಅದಕ್ಕಿದ್ದ ಬಡ್ಡಿರೇಟನ್ನು ಕಟ್ ಮಾಡಲಾಗಿದೆ.

ಪಾಪ ಮಿಡಲ್ ಕ್ಲಾಸ್ ಭಕ್ತರ ಫಜೀತಿ ಯಾರಿಗೂ ಬೇಡ. ಯಾರ ಪರವಾಗಿ ನಿಂತು ನರ ಹರಿದುಕೊಂಡು ಗೆಲ್ಲಿಸಿಕೊಂಡರೋ.. ಅವರೇ ಈಗ ಮಿಡಲ್ ಕ್ಲಾಸ್ ಭವಿಷ್ಯದ ಉಳಿತಾಯ ಯೋಜನೆಗೂ ಕನ್ನ ಹೊಡೆದಿದ್ದಾರೆ. ಆರ್ಥಿಕ ಮಾರುಕಟ್ಟೆಯಲ್ಲಿ ಏರುತ್ತಿರುವ ದರಗಳನ್ನು ಇದಕ್ಕೆ ಕಾರಣವಾಗಿ ತೋರಿಸಲಾಗ್ತಿದೆ. ಆದ್ರೆ ಇದನ್ನ ಇಂಟರ್ ನ್ಯಾಷನಲ್ ಮಾರ್ಕೆಟ್ಟಲ್ಲಿ ಪಾತಾಳಕ್ಕೆ ಬಂದಿರೋ ಕ್ರೂಡ್ ಆಯಿಲ್ ರೇಟಿಗೆ ಅನ್ವಯ ಮಾಡಿ ಪೆಟ್ರೋಲ್ ರೇಟ್ ಇಳಿಸ್ರಪ್ಪ ಅಂದ್ನೋಡಿ.. ಆಗಲ್ಲ.. ಆಗಲ್ಲ ಅಂತಾರೆ.. ಒಂದೂಕಾಲು ಲಕ್ಷ ಕೋಟಿಯಷ್ಟು ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ್ರಲ್ಲ.. ಅವಾಗ ಆರ್ಥಿಕ ಮಾರುಕಟ್ಟೆ ದರಕ್ಕೆ ಯಾವ ಅಪಾಯವೂ ಆಗಲಿಲ್ಲ.

15 ಲಕ್ಷ ಪುಗ್ಸಟ್ಟೆ ದುಡ್ಡು ಅಕೌಂಟಿಗೆ ಬಂದು ಬೀಳ್ತದೆ ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕ್ಯಾಂಪೇನ್ ಮಾಡ್ಕೊಂಡು ಕುಂತಿದ್ದ ಮಿಡಲ್ ಕ್ಲಾಸ್ ಭಕ್ತರಪಡೆಗೆ ಇದೀಗ ಜ್ಞಾನ ಅನ್ನೋದು ಸರ್ವಾಂಗಗಳಿಂದಲೂ ಉದಯವಾಗುತ್ತಿರುವಂತಿದೆ. ದೆವ್ವಗಳ ರಾಜ್ಯದೊಳಗೆ ಹೆಣ ತಿನ್ನೋದೇ ಕಾನೂನು ಅನ್ನೋದನ್ನ ತಡವಾಗಿ ಅರ್ಥ ಮಾಡಿಕೊಂಡ ಭಕ್ತ ಭಕ್ವಾಸ್ ಗಳ ಪಾದಾರವಿಂದದ ಮೇಲೊಂದು ಕರ್ಪೂರ, ಆದಷ್ಟು ಬೇಗ ಉರಿಯಲಿ..

ಭಕ್ತ್ .. ಜನೋಂ..ಕೀ.. ಸಂಕಟು.. 
ಚಣು ಮೇ.. ದೂರು ಕರೇ.. 
ಓಂ.. ಫೊಟೋಸಾಪು, ಸರ್ಕಾರು ಹರೇ..

share
ದಯಾನಂದ್ ಟಿ. ಕೆ.
ದಯಾನಂದ್ ಟಿ. ಕೆ.
Next Story
X