ಕೋರ್ಟ್ ತೀರ್ಪು ಭಕ್ತರ ಪರವಾಗಿ ಬರಲೆಂದು ಪ್ರಾರ್ಥನೆ
ಪುತ್ತೂರು, ಮಾ.21: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಆಮಂತ್ರಣ ಪತ್ರದಲ್ಲಿ ದ.ಕ.ಜಿಲ್ಲಾಧಿಕಾರಿಯ ಹೆಸರು ಬಳಕೆ ಮಾಡಿರುವ ವಿವಾದ ಕೋರ್ಟ್ ಮೆಟ್ಟಲೇರಿದ ಹಿನ್ನೆಲೆಯಲ್ಲಿ ಸೋಮವಾರ ‘ಕೋರ್ಟು ತೀರ್ಪು ಭಕ್ತರ ಪರವಾಗಿ ಬರಲಿ’ ಎಂದು ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಬಳಿಕ ರಥಬೀದಿಯಲ್ಲಿ ಜರಗಿದ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕನ್ಯಾನ ಬಾಳೆಕೋಡಿ ಕ್ಷೇತ್ರದ ಶಶಿ ಕಾಂತ ಮಣಿ ಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಡಾ.ಪ್ರಸಾದ್ ಭಂಡಾರಿ, ಯು. ಪೂವಪ್ಪ,ರಾಜೇಶ್ ಬನ್ನೂರು, ಬಪ್ಪಳಿಗೆ ಚಂದ್ರಶೇಖರ್, ಮುರಳೀಕೃಷ್ಣ ಹಸಂತ್ತಡ್ಕ ಉಪಸ್ಥಿತರಿದ್ದರು.
Next Story