Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಇದು ಅಸಲಿಯಲ್ಲ, ಮೂಲ ಭಾರತಮಾತೆಯ ಚಿತ್ರದ...

ಇದು ಅಸಲಿಯಲ್ಲ, ಮೂಲ ಭಾರತಮಾತೆಯ ಚಿತ್ರದ ಕಳ್ಳಮಾಲು

- ಟಿ.ಕೆ. ದಯಾನಂದ್- ಟಿ.ಕೆ. ದಯಾನಂದ್22 March 2016 12:45 PM IST
share
ಇದು ಅಸಲಿಯಲ್ಲ, ಮೂಲ ಭಾರತಮಾತೆಯ ಚಿತ್ರದ ಕಳ್ಳಮಾಲು

ಭಾರತ ಮಾತೆ ಅನ್ನುತ್ತಿದ್ದಂತೆಯೇ.. ಸರ್ವಾಲಂಕಾರ ಭೂಷಿತೆಯಾದ, ಭಗವಾಧ್ವಜ ಹಿಡಿದ, ಸಿಂಹವಾಹಿನಿ ಸ್ಪುರದ್ರೂಪಿ ದೇವತೆಯ ಚಿತ್ರ ಕಣ್ಣೆದುರು ಬರುತ್ತದೆ. ಈ ಭಾರತಮಾತೆಯ ಐಕಾನ್ ಒಂದನ್ನ ಎಲ್ಲರ ಮುಂದಿಟ್ಟು " ಇದೇ ಭಾರತ ಮಾತೆ ಇದಕ್ಕೆ ಜೈ ಅನ್ನು, ಇಲ್ಲವಾದಲ್ಲಿ ನೀನು ದೇಶದ್ರೋಹಿ " ಎಂಬ ರೌಡಿಯಿಸಂ ಧಮಕಿಗಳು ಶುರುವಾಗುತ್ತವೆ. ಆಕ್ಚುಯಲಿ ನಮ್ಮ ಮುಂದಿಡಲಾಗುತ್ತಿರುವ ಭಾರತಮಾತೆಯ ಚಿತ್ರ ಅಸಲಿ ಚಿತ್ರವಲ್ಲ.. ಬದಲಾಗಿ ರವೀಂದ್ರನಾಥ್ ಠಾಗೋರ್ ರಕ್ತಸಂಬಂಧಿಯಾದ ಬೆಂಗಾಲಿ ಚಿತ್ರಕಾರ "ಅಬನೀಂದ್ರ ನಾಥ್ ಠಾಗೋರ್ " ರಚಿಸಿದ ಮೂಲ ಭಾರತಮಾತೆಯ ಚಿತ್ರದ ಇಂಪ್ರೂವ್ಡ್ ವರ್ಷನ್ ಕಳ್ಳಮಾಲು.

1905ರಲ್ಲಿ ಬಂಗಾಳ ವಿಭಜನೆಯ ಸಂದರ್ಭದಲ್ಲಿ ಸ್ವದೇಶಿ ಆಂದೋಳನದ ಹೋರಾಟಗಾರರನ್ನು ಬಂಗಾಳದಲ್ಲಿ ಪ್ರೋತ್ಸಾಹಿಸಲು ಚಿತ್ರಕಲಾವಿದ ಅಬನೀಂದ್ರ ಠಾಗೋರರು "ಬೆಂಗಾಳಿ ಮಾತೆ, ಅಥವ ಬಂಗಮಾತ" ಎಂಬ ಚಿತ್ರ ರಚಿಸುತ್ತಾರೆ. ಈ ಚಿತ್ರದಲ್ಲಿ ಸಾಧ್ವಿ ಬೆಂಗಾಳಿ ಮಹಿಳೆಯೋರ್ವಳು ನಾಲ್ಕು ಕೈಗಳಲ್ಲಿ ಆಹಾರ, ಶಿಕ್ಷಣ, ವಸ್ತ್ರ, ಶಾಂತಿ ಪ್ರತೀಕವಾಗಿ ತಪೋಮಣಿಗಳನ್ನು ಹಿಡಿದಿರುತ್ತಾಳೆ. ಈ ಚಿತ್ರದ ಮೂಲಕ ವಿಭಜನೆಯ ಅಪಾಯದಲ್ಲಿರುವ ತಾಯಿ ಬೆಂಗಾಲಿ ಮಾತೆಯನ್ನು ಬಂಗಾಳದ ಪ್ರಜೆಗಳು ರಕ್ಷಿಸುವ ಕರ್ತವ್ಯ ನಿಭಾಯಿಸಬೇಕು ಎಂಬ ವಿನಂತಿಯ ಸಂದೇಶವನ್ನು ಕಟ್ಟಿ ಕೊಟ್ಟವರು ಅಬನೀಂದ್ರನಾಥ್ ಠಾಗೋರ್. ಈ ಚಿತ್ರ ಬಂಗಾಳದ ಜನತೆಯಲ್ಲಿ ಹೋರಾಟದ ಕಿಚ್ಚು ಹಚ್ಚುವಲ್ಲಿ ಬಹುಮುಖ್ಯ ಪಾತ್ರ ವಹಿಸಿತು. ತದನಂತರ ಸ್ವಾತಂತ್ರ್ಯ ಹೋರಾಟಕ್ಕೂ ಇದು ಬಳಕೆಯಾಗಲೆಂದು ಈ ಚಿತ್ರಕ್ಕೆ ಬೆಂಗಾಲಿ ಮಾತೆ ಎಂಬ ಶೀರ್ಷಿಕೆ ತೆಗೆದು " ಭಾರತಮಾತಾ " ಎಂದು ಅಬನೀಂದ್ರನಾಥ್ ಮರುನಾಮಕರಣ ಮಾಡಿದರು.

ಚಿತ್ರವೊಂದರ ಮೂಲಕ ಭಾವನಾತ್ಮಕವಾಗಿ ಜನರನ್ನು ಒಗ್ಗೂಡಿಸಬಹುದೆಂಬ ಸುಳಿವು ಸಿಕ್ಕ ಕೂಡಲೇ ಇದೇ ಚಿತ್ರವನ್ನು ಆಧಾರವಾಗಿಟ್ಟುಕೊಂಡ ಧರ್ಮ ಹೋರಾಟಗಾರರು (ಸ್ವಾತಂತ್ರ್ಯ ಹೋರಾಟಗಾರರಲ್ಲ) ಕುರೂಪಗೊಳಿಸಿಟ್ಟರು. ಸಾಧಾರಣ ಬೆಂಗಾಲಿ ಸಾಧ್ವಿ ಮಹಿಳೆಯ ಜಾಗದಲ್ಲಿ ಕಿರೀಟ, ಕಂಠಾಭರಣ, ಸರ್ವಾಲಂಕಾರ ಭೂಷಿತೆಯನ್ನಾಗಿಸಿ, ಕೈಗೊಂದು ಭಗವಾ ಧ್ವಜ ಕೊಟ್ಟು, ಸಿಂಹದ ಮೇಲೆ ಕೂರಿಸಿ ದೇವರನ್ನಾಗಿಸಿದರು. ಅಬನೀಂದ್ರರ ಚಿತ್ರದಲ್ಲಿ ಬೆಂಗಾಲಿ ಮಾತೆಯನ್ನು ಪ್ರಜೆಗಳು ರಕ್ಷಿಸಬೇಕೆಂಬ ವಿನಂತಿಯಿದ್ದರೆ, ಈ ವಿರೂಪಗೊಂಡ ಚಿತ್ರದಲ್ಲಿ ಭಾರತಮಾತೆಯೇ ಪ್ರಜೆಗಳನ್ನು ರಕ್ಷಿಸುವ ಅಧಿಕಾರ ಪಡೆದುಕೊಂಡಳು. ಅನ್ನ, ಶಿಕ್ಷಣ, ಬಟ್ಟೆ, ಶಾಂತಿಯನ್ನು ಹಿಡಿದಿದ್ದ ನಾಲ್ಕು ಕೈಗಳಿಗೆ ನಾಲ್ಕು ವೆಪನ್ನುಗಳು ಬಂದವು. ಅಬನೀಂದ್ರರ ಚಿತ್ರದಲ್ಲಿ ನೆಲದ ಮೇಲೆ ಓಡಾಡುವ ಸಾಧಾರಣ ಮಹಿಳೆಯಿದ್ದರೆ, ಧರ್ಮಕೋರರ ಚಿತ್ರದೊಳಗೆ ಶಿಕ್ಷಿಸುವ ದೇವತೆ ಬಂದು ಕುಳಿತಳು.

ಹೀಗೆಲ್ಲ ಇರುವಾಗ ನಮಗೆ ನಮ್ಮಂತೆಯೇ, ನಮ್ಮಗಳ ತಾಯಿಯಂತೆಯೇ ಕಾಣುವ ಅಬನೀಂದ್ರ ಠಾಗೋರರ ಮಾತೆ ಸಹನಾಶೀಲತೆಯ, ತಾಳ್ಮೆಯ ಪ್ರತೀಕವಾಗಿ, ಅನ್ನವಿಟ್ಟು, ಬಟ್ಟೆ ಹಾಕಿ ಓದಿಸುವ ತಾಯಿ ಹೃದಯದವಳಾಗಿ ಮುಖ್ಯವಾಗುತ್ತಾಳೆ..

ಕೈಯಲ್ಲಿ ರಾಷ್ಟ್ರಧ್ವಜವೂ ಇಲ್ಲದ ಸಿಂಹವಾಹಿನಿ ಸಾಹುಕಾರ ಮಾತೆ.. ಉಹುಂ.. ನಮಗೆ ಯಾವ ಬಗೆಯಲ್ಲೂ ನಮ್ಮ ಸಂವೇದನೆಯನ್ನು ಮುಟ್ಟುವುದೇ ಇಲ್ಲ. ಸಾಧ್ವಿ ನೆಲದವ್ವನಿಗೆ ಶರಣು. ಅಬನೀಂದ್ರರ ಮೂಲ ಚಿತ್ರದಲ್ಲಿನ ಒರಿಜಿನಲ್ ಭಾರತವ್ವನಿಗೆ ಜೈ.

( ಫೆಸ್ಬುಕ್ ನಿಂದ.)

share
- ಟಿ.ಕೆ. ದಯಾನಂದ್
- ಟಿ.ಕೆ. ದಯಾನಂದ್
Next Story
X