Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೇವರ ನಾಡು ಕೇರಳದಲ್ಲಿ ಈಗ ಇನ್ನೊಬ್ಬ ಹೊಸ...

ದೇವರ ನಾಡು ಕೇರಳದಲ್ಲಿ ಈಗ ಇನ್ನೊಬ್ಬ ಹೊಸ ದೇವರು

ವಾರ್ತಾಭಾರತಿವಾರ್ತಾಭಾರತಿ22 March 2016 4:37 PM IST
share
ದೇವರ ನಾಡು ಕೇರಳದಲ್ಲಿ ಈಗ ಇನ್ನೊಬ್ಬ ಹೊಸ ದೇವರು

ತಿರುವನಂತಪುರಂ : ದೇವರ ನಾಡು ಕೇರಳದಲ್ಲಿ ಈಗ ಇನ್ನೊಂದು ದೇವರಿದ್ದಾನೆ. ಈ ದೇವರ ಅನುಯಾಯಿಗಳು ರವಿವಾರ ತಮ್ಮ ದೇವರಿಗೆ ಗೌರವ ಸೂಚಿಸಲು ಸಮ್ಮೇಳನವೊಂದನ್ನೂಆಯೋಜಿಸಿದರು. ಹಳದಿ ಬಣ್ಣದ ಅಂಗಿ, ಕುತ್ತಿಗೆಗೆ ಸುತ್ತಿದ ಕೆಂಪು ಬಟ್ಟೆ ಹಾಗೂ ಸೂಪರ್ ಹೀರೋ ಮಾದರಿಯ ಅಂಡರ್‌ವೇರ್ ಧರಿಸಿದ ಇಲಿಯೇ ಈ ದೇವರು.

ವಿಚಾರವಾದಿಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆಯನ್ನು ಎದುರಿಸಲು 2008ರಲ್ಲಿ ಆರಂಭಿಸಿದ ಅಣಕು ಧರ್ವವೇ ಡಿಂಕೋಯಿಸಂ. ಕೇರಳದಲ್ಲಿ ಮೂರು ದಶಕಗಳ ಕಾಲ ಜನಪ್ರಿಯವಾಗಿದ್ದ ಹಾಗೂ 2012ರಲ್ಲಿ ಪ್ರಕಟಣೆ ನಿಲ್ಲಿಸಿದ್ದಮಕ್ಕಳ ಮ್ಯಾಗಝೀನ್ ‘ಬಾಲಮಂಗಳಂ’ನಲ್ಲಿಪ್ರಕಟವಾಗುತ್ತಿದ್ದ ಕಾಮಿಕ್ ಮಾಲಿಕೆಯಲ್ಲಿನ ಪಾತ್ರ ಡಿಂಕನ್‌ನನ್ನು ಅವರು ತಮ್ಮ ದೇವರಾಗಿಆರಿಸಿಕೊಂಡರು. ಇತರ ಧರ್ಮಗಳಂತೆಯೇ ಡಿಂಕೋಯಿಸಂಗೆ ತನ್ನದೇ ಆದ ಧರ್ಮ ಗ್ರಂಥವಿದೆ,ಭಕ್ತಿ ಗೀತೆಗಳಿವೆ ಹಾಗೂ ಧರ್ಮಗುರುಗಳೂ ಇದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಧರ್ಮಾಂಧರ ಕಾರ್ಯಗಳಿಗೆ ತಕ್ಕ ಉತ್ತರ ನೀಡಲು ವಿಶೇಷ ಘಟಕವೂ ಇದೆ.

ಡಿಂಕೋಯಿಸಂ ಆನ್‌ಲೈನ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದರೂ ಅದು ತನ್ನ ಪ್ರಥಮ ದೊಡ್ಡ ಪರೀಕ್ಷೆಯನ್ನು ರವಿವಾರ ಕೊಝಿಕ್ಕೋಡಿನಲ್ಲಿ ಆಯೋಜಿಸಲಾಗಿದ್ದ ಅದರ ಪ್ರಥಮ ಬೃಹತ್ ಸಮ್ಮೇಳನದಲ್ಲಿ ಎದುರಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಈ ಸಮ್ಮೇಳನಕ್ಕೆ ಜನಸಾಗರ ಹರಿದು ಬಂದಿತ್ತಲ್ಲದೆ ಸಮ್ಮೇಳನದ ಹಾಲ್ ಚಿಕ್ಕದಾಗಿದ್ದರಿಂದ ಹಲವರನ್ನು ಹಿಂದಕ್ಕೆ ಕೂಡ ಕಳುಹಿಸಬೇಕಾಯಿತು.

ಕೊಝಿಕ್ಕೋಡ್ ಜಿಲ್ಲಾ ಕಲೆಕ್ಟರ್ ಪ್ರಶಾಂತ್ ನಾಯರ್ ಕೂಡ ಡಿಂಕೋಯಿಸಂಗೆ ಬೆಂಬಲ ವ್ಯಕ್ತಪಡಿಸಿದ್ದು ಅದರ ಪ್ರಾಯೋಜಕರಿಗೆ ದೊಡ್ಡ ಉತ್ತೇಜನವಾಗಿತ್ತು.ಡಿಂಕೋವಾದಿಗಳ ಧರ್ಮಗ್ರಂಥಯಾವುದೆಂದು ಬಲ್ಲಿರಾ-ಅದುವೇ ಮಕ್ಕಳ ಮ್ಯಾಗಜೀನ್ ‘ಬಾಲಮಂಗಳಂ.’ ಅದರ ಇನ್ನೊಂದು ಧರ್ಮ ಗ್ರಂಥ ‘ಡಿಂಕಾಪುರಾಣಂ.’ ಡಿಂಕೋಯಿಸಂಗೆ ಅಮೆರಿಕಾದಲ್ಲೂ ಅನುಯಾಯಿಗಳಿದ್ದು ಚಿಕಾಗೋ ನಗರದಲ್ಲಿ ಅದರ ಶಾಖೆ ಕೂಡ ಇದೆ. ‘ಡಿಂಕೋಯಿಸಂ’ನ ಜನಪ್ರಿಯತೆ ಗಮನಿಸಿ ಮಂಗಳಂ ಗ್ರೂಪ್ ಮತ್ತೆ ‘ಬಾಲಮಂಗಳಂ’ ಮ್ಯಾಗಜೀನನ್ನು ಹೊರತರುವ ಬಗ್ಗೆ ಯೋಚಿಸುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X