ಭಟ್ಕಳ: ಕೊಮಾಸ್ಥಿತಿಯಲ್ಲಿರುವ ಯುವಕನ ಅಂಗಾಂಗ ದಾನಕ್ಕೆ ಕುಟುಂಬಿಕರ ನಿರ್ಧಾರ
ಭಟ್ಕಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ಪುರುಷೋತ್ತಮ ನಾಯ್ಕ ಕೆಲವು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಕಿ ತಲೆಗೆ ಗಂಭೀರವಾಗಿ ಗಾಯಗೊಂಡು ಕೊಮಾಸ್ಥಿತಿಯಲ್ಲಿ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಅವರು ಬದುಕುವ ಯಾವುದೇ ಸಾಧ್ಯತೆ ಇಲ್ಲ ಎಂದು ಡಾಕ್ಟರ್ ಕುಟುಂಬದ ಸದಸ್ಯರುಗಳಿಗೆ ತಿಳಿಸಿದ್ದರಿಂದ ಇಂದು ಅವರ ಕುಟುಂಬದವರು ಪುರುಷೋತ್ತಮನ ಆಸೆಯಂತೆ ಅವನ ಅಂಗಾಂಗಗಳಲ್ಲಿ ದಾನ ಮಾಡುತ್ತಿದ್ದಾರೆ. ಇಂಥ ಪುಣ್ಯದ ಕೆಲಸವನ್ನು ಮಾಡಿದ ಆತನ ಕುಟುಂಬದ ಸದಸ್ಯರುಗಳಿಗೆ ದೇವರು ಸದಾ ಒಳ್ಳೆಯದುನ್ನು ಮಾಡಲಿ. ಹಾಗೆಯೇ ಸಾವಿನಲ್ಲಿ ತನ್ನ ಅಂಗಾಂಗಗಳ ದಾನಮಾಡಿದ ಪುರುಷೋತ್ತಮನು ಜನರ ಮನಸಲ್ಲಿ ಸದಾ ಚಿರಾಯುವಾಗಿದ್ದಾನೆ.
Next Story