ಚುಟುಕು ಸುದ್ದಿಗಳು
ಎ.22ರಿಂದ 24: ಜಿಎಸ್ಬಿ ವಿಶ್ವ ಸಮ್ಮೇಳನ
ಮಂಗಳೂರು, ಮಾ.22: ಸುಧಾ ಸೇವಾ ಪ್ರತಿಷ್ಠಾನದ ವತಿಯಿಂದ ಜಿಎಸ್ಬಿ ವಿಶ್ವ ಸಮ್ಮೇಳನವು ಎ.22ರಿಂದ24 ರವರೆಗೆ ನಗರದ ಉರ್ವ ಕೆನರಾ ಹೈಸ್ಕೂಲ್ನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮ್ಮೇಳನದ ಸಂಚಾಲಕ ಅತುಲ್ ಕುಡ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಜಿ.ಎಸ್.ಬಿ ಸಮಾಜದ ಸಂಸ್ಕೃತಿಯ ಕುರಿತು ಜ್ಞಾನವರ್ಧನೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಸಪ್ರಶ್ನೆ ಮತ್ತು ಆಟೋಟ ಹಾಗೂ ಮುಂದಿನ ಜನಾಂಗಗಳಿಗೆ ಸಂಸ್ಕೃತಿ ಹಾಗೂ ಪರಂಪರೆ ಸಂರಕ್ಷಿಸಿ ಪರಿಚಯಿಸುವ ಕುರಿತಾದ ಕಾರ್ಯಾಗಾರಗಳು, ಪ್ರದರ್ಶನ ಮಳಿಗೆಗಳು ಇರಲಿವೆ ಎಂದರು. ಎ.24ಕ್ಕೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಸಮ್ಮೇಳನದ ಸಮಾರೋಪ ಜರಗಲಿದ್ದು, ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡುವರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪದ್ಮನಾಭ ಪೈ, ಸಂಚಾಲಕ ಅತುಲ್ಕುಮಾರ್, ಪ್ರಮುಖರಾದ ದಿನೇಶ್ ಕಾಮತ್, ಟಿ.ಗಣಪತಿ ಪೈ ಹಾಗೂ ಜಗನ್ನಾಥ ಕಾಮತ್ ಉಪಸ್ಥಿತರಿದ್ದರು.
ತುಟ್ಟಿಭತ್ತೆ ವಿತರಣೆಗಾಗಿ ಒತ್ತಾಯ
ಮಂಗಳೂರು, ಮಾ.22: 2015-16 ಮತ್ತು 2016-17ರ ಸಾಲಿನ ತುಟ್ಟಿಭತ್ತೆಯನ್ನು ಬೀಡಿ ಕಾರ್ಮಿಕರಿಗೆ ನೀಡಬೇಕೆಂದು ಸೌತ್ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಬೀಡಿ ಮಾಲಕರನ್ನು ಒತ್ತಾಯಿಸಿದೆ. 2015-16ರ ಸಾಲಿನಲ್ಲಿ 425 ಪಾಯಿಂಟ್ಗೆ ಸಾವಿರ ಬೀಡಿಗೆ ರೂ. 12.75 ನೀಡಬೇಕಾಗಿದ್ದು, ಅದನ್ನು ಬೀಡಿ ಕಾರ್ಮಿಕ ರಿಗೆ ನೀಡದೆ ಮಾಲಕರು ಅನ್ಯಾಯವೆಸಗಿದ್ದಾರೆ. ಈಗ 2016-17ರ ಸಾಲಿನ ಬೆಲೆ ಏರಿಕೆ ಪಾಯಿಂಟ್ 332 ಆಗಿದ್ದು ಅದಕ್ಕೆ ಅನುಗುಣವಾಗಿ ಸಾವಿರ ಬೀಡಿಗೆ ರೂ. 9.96 ನೀಡಬೇಕಾಗಿದ್ದು ಈ ಎರಡು ವರ್ಷಗಳ ತುಟ್ಟಿಭತ್ತೆಯನ್ನು ನೀಡಬೇಕೆಂದು ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿಯವರು ಒತ್ತಾಯಿಸಿದ್ದಾರೆ.
ಯುವಕ ನಾಪತ್ತೆ
ಮಂಜೇಶ್ವರ, ಮಾ.22: ಬಂದ್ಯೋಡಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸು ತ್ತಿದ್ದ ಸದ್ದು ಯಾನೆ ಆಸೀರ್(26) ಎಂಬಾತ ನಾಪತ್ತೆ ಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.ವಾರಗಳ ಹಿಂದೆ ಬೆಳಗ್ಗೆ ಕೆಲಸಕ್ಕೆಂದು ತೆರಳಿದ ಈತ ಮರಳಿ ಬಂದಿಲ್ಲ. ಆತನ ಮೊಬೈಲ್ ಫೋನ್ ಸ್ವಿಚ್ ಆಫ್ಗೊಂಡಿದೆ ಎಂದು ಆತನ ತಂದೆ ಪೋಲಿಸರಿಗೆ ದೂರು ನೀಡಿದ್ದಾರೆ. ಇದರಂತೆ ಪೋಲಿಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪೇರಾಲ್ ನಿವಾಸಿ ಶಫೀಕ್ ಎಂಬವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ ಬಂಧಿತನಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು.
ಇಂಟರ್ನೆಟ್ ಕೆಫೆಯಿಂದ ಕಳವು
ಮಂಜೇಶ್ವರ, ಮಾ.22: ಚೌಕಿ ಕಾವುಗೋಳಿ ಕಡಪ್ಪುರದಲ್ಲಿ ಕಾರ್ಯವೆಸಗುತ್ತಿರುವ ನೆಸ್ಟ್ ಇಂಟರ್ನೆಟ್ ಕೆಫೆಯಿಂದ ಲ್ಯಾಪ್ಟಾಪ್, ಮೂರು ಮೊಬೈಲ್ ಫೋನ್ಗಳು, ಐದು ಸ್ಟಿಕ್ಕರ್ಗಳು, ಚೆಕ್ಬುಕ್, ಪಾಸ್ಬುಕ್ ಮತ್ತು 1500 ರೂ. ನಗದು ಕಳವು ಮಾಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.
ನಾಪತ್ತೆ
ಮಲ್ಪೆ, ಮಾ.22: ಬೈಲಕೆರೆಯ ಅಬೂಬಕ್ಕರ್ ಎಂಬವರ ಮಗಳು ರುಬೀನಾ(32) ಎಂಬಾಕೆ ಮಾ.19ರಂದು ಸಂಜೆ ಮನೆಯಲ್ಲಿ ಹೇಳದೇ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ಹತ್ತು ಮಂದಿ ಬಂಧನ
ಮಂಗಳೂರು,ಮಾ.22: ಫಳ್ನೀರ್ ರಸ್ತೆಯ ಖಾಸಗಿ ಹೋಟೆಲ್ವೊಂದರಲ್ಲಿ ಜೂಜಾಟ ನಡೆಸುತ್ತಿದ್ದ ಹತ್ತು ಮಂದಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.ಮಂಗಳವಾರದಂದು ಸಂಜೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಧಿತರಿಂದ ರೂ.6500 ನಗದು ಮತ್ತು ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಇಬ್ಬರ ಬಂಧನ
ಮಂಜೇಶ್ವರ, ಮಾ.22: ಮಟ್ಕಾ ದಂಧೆಯಲ್ಲಿ ನಿರತರಾದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ತಲಪಾಡಿ ಬಸ್ ನಿಲ್ದಾಣದ ಬಳಿಯಿಂದ ಕಣ್ವತೀರ್ಥ ನಿವಾಸಿ ಅರುಣ್(34) ಮತ್ತು ಹೊಸಂಗಡಿ ನಿವಾಸಿ ಪ್ರವೀಣ್(42)ನನ್ನು ಬಂಧಿಸಿದ ಪೊಲೀಸರು 970 ರೂ. ವಶಪಡಿಸಿಕೊಂಡಿದ್ದಾರೆ.
ಕುಕ್ಕಾಜೆ ಜುಮಾ ಮಸೀದಿಗೆ ಆಯ್ಕೆ
ಬಂಟ್ವಾಳ, ಮಾ.22: ಮಂಚಿ ಗ್ರಾಮದ ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಜಮಾತ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಇಸ್ಮಾಯೀಲ್, ಉಪಾಧ್ಯಕ್ಷರಾಗಿ ಅಬ್ದುರ್ರಝಾಕ್ ಕುಕ್ಕಾಜೆ, ಡಿ.ಕೆ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್, ಜೊತೆ ಕಾರ್ಯದರ್ಶಿಯಾಗಿ ಅಬೂಬಕರ್ ಮುಸ್ಲಿಯಾರ್, ಕೆ.ಎಚ್.ಉಮರ್, ಕಾಪಿಕಾಡ್ ಮುಹಮ್ಮದ್, ಎಸ್.ಎಂ.ಸುಲೈಮಾನ್, ನಾಡಾಜೆ ಮಜೀದ್, ಕೋಶಾಧಿಕಾರಿಯಾಗಿ ಪಿ.ಕೆ. ಹಸೈನಾರ್, ಸದಸ್ಯರಾಗಿ ಕೆ.ಮೊಯ್ದಿನಬ್ಬ ಹಾಜಿ, ಟಿ.ಅಬೂಬಕರ್, ಟಿ.ಎಂ.ಅಬೂಬಕರ್, ಬೈಲ್ ಅಬ್ದುಲ್ಲ, ಬೈಲ್ ಅಹ್ಮದ್, ಪಿ. ಶೇಕುಂಞಿ, ಇಝತ್ ಮುಹಮ್ಮದ್, ನಾಡಾಜೆ ಸುಲೈಮಾನ್, ಕೆ.ಬಿ.ಸುಲೈಮಾನ್, ಕೆ.ಬಿ.ಹಮೀದ್, ಕುರಿಯಪ್ಪಾಡಿ ಮೊಯ್ದುಕುಂಞಿ, ಕುರಿಯಪ್ಪಾಡಿ, ಅಬ್ಬಾಸ್, ಕೊಪ್ಪಳ ಮುಹಮ್ಮದ್, ನೋಳ ಶೇಕುಂಞಿ, ಪಂಜಾಜೆ ಅಬ್ದುರ್ರಹ್ಮಾನ್, ನೋಳ ಮುಹಮ್ಮದ್, ಅಬ್ದುಲ್ ಸಲಾಂ, ಕೆ.ಎ.ಮುಹಮ್ಮದ್ ಮುಸ್ಲಿಯಾರ್, ಇಮ್ರಾನ್ ಕೆ.ಎಂ., ಟಿ.ಉಸ್ಮಾನ್, ಎಂ.ಅಬೂಬಕರ್, ಪಂಜಾಜೆ ಸುಲೈಮಾನ್, ಬೈಲ್ ಅಬ್ದುಲ್ ಖಾದರ್ರನ್ನು ಆಯ್ಕೆ ಮಾಡಲಾಯಿತು.
ಕಿನ್ಯ ಕೂಟು ಝಿಯಾರತ್ ಸಮಾರೋಪ
ಉಳ್ಳಾಲ, ಮಾ.22: ಸುನ್ನತ್ ಜಮಾಅತ್ನಲ್ಲಿದ್ದುಕೊಂಡು ಇಸ್ಲಾಮ್ನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಬೇಕು ಎಂದು ಮಂಜನಾಡಿ ಜುಮಾ ಮಸೀದಿಯ ಮುದರ್ರಿಸ್ ಅಹ್ಮದ್ ಬಾಖವಿ ಕರೆ ನೀಡಿದರು.
ಕಿನ್ಯದಲ್ಲಿ ನಡೆದ ಕೂಟು ಝಿಯಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಕೂಟು ಝಿಯಾರತ್ನ ನೇತೃತ್ವವನ್ನು ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಸೈಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು. ಅಸ್ಸೈಯದ್ ಬಾತಿಷ್ ತಂಙಳ್, ಕಿನ್ಯ ಮಸೀದಿಯ ಮುದರ್ರಿಸ್ ಅಬೂಬಕರ್ ಅಲ್ ಕಾಸಿಮಿ, ಖತೀಬ್ ಖಾಸಿಂ ದಾರಿಮಿ, ಕುತುಬಿಯ್ಯ ಮದ್ರಸದ ಸದರ್ ಉಸ್ತಾದ್ ಫಾರೂಕ್ ದಾರಿಮಿ, ಜಿಪಂ ಮಾಜಿ ಸದಸ್ಯ ಎನ್.ಎಸ್. ಕರೀಂ, ಮಂಜನಾಡಿ ಗ್ರಾಪಂ ಮಾಜಿ ಅಧ್ಯಕ್ಷ, ಮೊಯಿದಿನ್ ಕುಂಞಿ ಮರಾಠಿಮೂಲೆ, ಕಿನ್ಯ ಗ್ರಾಪಂ ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಹಾಜಿ, ಕಿನ್ಯ ಮಸೀದಿಯ ಉಪಾಧ್ಯಕ್ಷ ಬಶೀರ್ ಕಿನ್ಯ, ಕಾರ್ಯದರ್ಶಿ ಅಬೂಸಾಲಿ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಶಾಸಕರ ಅನುದಾನ ಬಿಡುಗಡೆ
ಮಂಗಳೂರು, ಮಾ.22: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಯಡಿಯಲ್ಲಿ ವಿಧಾನಸಭಾ ಸದಸ್ಯ ಎಸ್. ಅಂಗಾರ ಅವರ 2014-15ನೆ ಸಾಲಿನ ಅನುದಾನದಲ್ಲಿ ಸುಳ್ಯ ತಾಲೂ ಕಿನ ಸುಳ್ಯ ಗ್ರಾಮದ ಕಾಯರ್ತೋಡಿ ಮಹಾವಿಷ್ಣು ಪ್ರಾರ್ಥನಾ ಮಂದಿರದ ಬಳಿ ಸಾರ್ವಜನಿಕರ ಉಪಯೋಗಕ್ಕೆ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ 5ಲಕ್ಷ ರೂ. ಅಮರ ಮುಡ್ನೂರು ಗ್ರಾಮದ ಪೆಲತ್ತಡ್ಕ ಎಂಬಲ್ಲಿ ಕುಡಿಯುವ ನೀರಿನ ವ್ಯವ ಸ್ಥೆಗೆ 5ಲಕ್ಷ ರೂ. ಅನುದಾನವನ್ನು ಮಂಜೂರುಗೊಳಿಸಲಾಗಿದೆ ಎಂದು ಪ್ರಕಟನೆೆ ತಿಳಿಸಿದೆ.
ತುಳುವಿಗೆ ಸ್ವತಂತ್ರ ಲಿಪಿ ಇಲ್ಲ: ಡಾ.ವಿಷ್ಣು ಭಟ್
ಕಲ್ಯಾಣಪುರ, ಮಾ.22: ಕನ್ನಡ ಲಿಪಿ ಬಳಸಿ ತುಳು ಲಿಪಿ ಬಳಕೆ ಮಾಡಲಾಗುತ್ತಿದೆ. ತುಳುವಿಗೆ ಸ್ವತಂತ್ರ ಲಿಪಿ ಇಲ್ಲ. ಕ್ರೈಸ್ತ ಮಿಶನರಿಯ ಬಾಸೆಲ್ ಮಿಷನ್ ಕನ್ನಡ ಲಿಪಿ ಬಳಸಿ ತುಳುವನ್ನು ಬರವಣಿಗೆಗೆ ತರುವ ಪ್ರಯತ್ನ ಮಾಡಿದೆ. ಆದರೆ ಇಂದು ಹಲವು ನಾಟಕ, ಜನಪದ ಸಾಹಿತ್ಯ, ಪಾಡ್ದನ ಇತ್ಯಾದಿಗಳು ತುಳುವಿನಲ್ಲಿ ಬಂದಿವೆ ಎಂದು ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ ಅಭಿಪ್ರಾಯ ಪಟ್ಟಿದ್ದಾರೆ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗ, ಮಂಗಳೂರು ವಿವಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಹಯೋಗದೊಂದಿಗೆ ಕಾಲೇಜಿನ ಆಡಿಯೊ ವಿಜುವಲ್ ಹಾಲ್ನಲ್ಲಿ ಏರ್ಪಡಿಸಿದ ತುಳು ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ನೇರಿ ಕರ್ನೇಲಿಯೋ ವಹಿಸಿದ್ದರು. ಮಂಗ ಳೂರು ವಿವಿ ಪ್ರಾಧ್ಯಾಪಕ, ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕ ಪ್ರೊ. ಅಭಯ್ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಅಂಬಿಕಾ ವಂದಿಸಿ, ವಿನೀತಾ ಸಪಲ್ಯ ಕಾರ್ಯಕ್ರಮ ನಿರ್ವಹಿಸಿದರು.
ಅಡ್ಡೂರಿನಲ್ಲಿ ಧಾರ್ಮಿಕ ಪ್ರವಚನ
ಮಂಗಳೂರು, ಮಾ.22: ಅಡ್ಡೂರು ಮುಸ್ಲಿಂ ಐಕ್ಯತಾ ಸಮಿತಿ ಆಶ್ರಯದಲ್ಲಿ ಬಡ ಹೆಣ್ಣು ಮಕ್ಕಳ ಮದುವೆಯ ಸಹಾಯಾರ್ಥ ಅಂಗವಾಗಿ ಹಮ್ಮಿಕೊಂಡಿರುವ 3 ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು
ಕಾರ್ಯಕ್ರಮದಲ್ಲಿ ಸೈಯದ್ ಜಾಫರ್ ಸಾದಿಕ್ ತಂಙಳ್ ಕುಂಬೋಳ್ ದುಆಶೀರ್ವಚನ ನೀಡಿದರು. ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಮಾತನಾಡಿ, ಸಮುದಾಯಕ್ಕೆ ಮಾರಕವಾಗಿ ಬೆಳೆದಿರುವ ವರದಕ್ಷಿಣೆಯನ್ನು ಸಮಾಜದಿಂದ ಕಿತ್ತೆಸೆಯಬೇಕು ಎಂದರು. ಕೌನ್ಸಿಲ್ನ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಬಾಖವಿ ಮುಖ್ಯ ಭಾಷಣ ಮಾಡಿದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸೈಯದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶರೀಫ್ ದಾರಿಮಿ, ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ, ಮುಸ್ಲಿಮ್ ಐಕ್ಯತಾ ಸಮಿತಿಯ ಅಧ್ಯಕ್ಷ ಹಬೀಬ್, ಅಡ್ಡೂರು ಗ್ರಾಪಂ ಸದಸ್ಯರಾದ ಎ.ಕೆ.ಮುಹಮ್ಮದ್, ಅಹ್ಮದ್ ಬಾವ ತೋಕೂರು, ಪಿಎಫ್ಐ ಅಡ್ಡೂರು ಫಟಕ ಅಧ್ಯಕ್ಷ ಅಶ್ರಫ್ ಅಡ್ಡೂರು ಉಪಸ್ಥಿತರಿದ್ದರು. ಅಸ್ತಾರ್ ಅಡ್ಡೂರು ಸ್ವಾಗತಿಸಿದರು. ಜಮಾಲ್ ಪಾಂಡೇಲ್ ಕಾರ್ಯಕ್ರಮ ನಿರೂಪಿಸಿದರು.
ಆರ್ಟಿಐ ಕಾರ್ಯಕರ್ತನ ಹತ್ಯೆ: ತನಿಖೆಗೆ ಮೂರು ತಂಡ ರಚನೆ
ಮಂಗಳೂರು,ಮಾ.22: ಆರ್ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂರು ತಂಡಗಳ ಮೂಲಕ ತನಿಖೆ ನಡೆಸುತ್ತಿದ್ದಾರೆ. ಆರ್ಟಿಐ ಕಾರ್ಯಕರ್ತನನ್ನು ಸುಪಾರಿ ನೀಡುವ ಮೂಲಕ ಕೊಲೆಗೈಯ್ಯಲಾಗಿದೆ ಎಂಬ ಶಂಕೆ ಪೊಲೀಸರಲ್ಲಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ವಿನಾಯಕ ಪಾಂಡುರಂಗ ಬಾಳಿಗ ಅವರ ಬಳಿಯಲ್ಲಿದ್ದ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮದ್ಯ ಸಹಿತ ಬಂಧನ ಮಂಜೇಶ್ವರ, ಮಾ.22: ದೇಲಂಪಾಡಿಯಿಂದ 15 ಬಾಟ್ಲಿ ವಿದೇಶಿ ಮದ್ಯ ಸಹಿತ ದೇಲಂಪಾಡಿ ವಾಲ್ತಾಜೆ ನಿವಾಸಿ ಭುವನೇಶ್ವರಿ(32)ಎಂಬವರನ್ನು ಅಬಕಾರಿ ದಳ ಬಂಧಿಸಿದೆ.
ಅಪಘಾತದಲ್ಲಿ ಮೃತ್ಯು: ಕುಟುಂಬಕ್ಕೆ ನಷ್ಟ ಪರಿಹಾರ
ಮಂಜೇಶ್ವರ, ಮಾ.22: ವಾಹನ ಅಪಘಾತದಲ್ಲಿ ಸಾವನ್ನಪ್ಪಿದ ಹವ್ಯಾಸಿ ಪತ್ರಕರ್ತನ ಕುಟುಂಬಕ್ಕೆ 19.36ಲ. ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಹೆಚ್ಚುವರಿ ಎಂಎಸಿಟಿ ನ್ಯಾಯಾಲಯ(ಪ್ರಥಮ) ತೀರ್ಪು ನೀಡಿದೆ. 2014 ಎ.15ರಂದು ಪಯ್ಯನ್ನೂರು ಕಾರಾಮ್ಮಲ್ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೊರಿಕ್ಷಾಕ್ಕೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಪಿಲಿಕೋಡ್ ಮಾಣಿಯಾಟ್ ಪ್ರಣವಂನ ಪ್ರಸನ್ನನ್ ಕೆ(43) ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿ ಈ ಮೊತ್ತವನ್ನು ನೀಡಬೇಕಾಗಿದೆ.
ಮೋಡಲ್ ಎಕ್ಸ್ಪೋ ಕಾರ್ಯಕ್ರಮ
ಉಡುಪಿ, ಮಾ.22: ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಕುರ್ಆನ್ ಎಲ್ಲರಿಗಾಗಿ’ ಅಭಿಯಾನದ ಪ್ರಯುಕ್ತ ಮಹಿಳಾ ವಿಭಾಗದಿಂದ ವಿದ್ಯಾರ್ಥಿನಿಯರಿಗಾಗಿ ಮೋಡಲ್ ಎಕ್ಸ್ಪೋ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿ ನಾಯರಕೆರೆಯ ಹಾಶ್ಮೀ ಮಸ್ಜಿದ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ ಇಬಾದಾ ಶಾಲೆಯ ಪ್ರಾಂಶುಪಾಲೆ ಜುವೈರಿಯಾ ಸುಲ್ತಾನ ಮಾತನಾಡಿದರು. ಖದೀಜಾ ಹುದಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಝೈರಾ ಹಫೀಝ್ ಉಪಸ್ಥಿತರಿದ್ದರು. ಹಫ್ಸತ್ ಬಾನು ಕುರ್ಆನ್ ಪಠಿಸಿದರು. ಸಾನಿಯಾ ಹೂಡೆ ಸ್ವಾಗತಿಸಿದರು. ಬಸೀರ ಸನಾ ಕಾರ್ಯಕ್ರಮ ನಿರೂಪಿಸಿದರು.
ಕೆಎಸ್ಸಾರ್ಟಿಸಿ ಅಧಿಕಾರಿಗೆ ಮನವಿ
ಕೊಣಾಜೆ, ಮಾ.22: ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿರುವ ಬೋಳಿಯಾರ್ ಗ್ರಾಮದ ಅಮ್ಮೆಂಬಳ ದರ್ಗಾದಿಂದ ಚೇಳೂರು-ಬಿ.ಸಿ.ರೋಡು ಮೂಲಕ ಸ್ಟೇಟ್ಬ್ಯಾಂಕ್ಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಸಂಚಾರವನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿ ಸಚಿವ ಯು.ಟಿ.ಖಾದರ್ರ ಪತ್ರದ ಮೂಲಕ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ತಾಪಂ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್ ನಿಯೋಗದ ನೇತೃತ್ವ ವಹಿಸಿದ್ದರು. ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಉಪಸ್ಥಿತರಿದ್ದರು.
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರಶಸ್ತಿ
ಮಂಗಳೂರು, ಮಾ.22: ನಗರದ ಕೆಂಜಾರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯಕ್ಕೆ 2016ನೆ ಸಾಲಿನ ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ (ಎಕ್ಸಲೆಂಟ್ ಇಂಜಿ ನಿಯರಿಂಗ್ ಕಾಲೇಜು ಇನ್ ಕರ್ನಾಟಕ) ಪ್ರಶಸ್ತಿ ಲಭಿಸಿದೆ ಎಂದು ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ಸಿಎಂಎಐ ಅಸೋ ಸಿಯೇಶನ್ನ ಜಂಟಿ ನೇತೃತ್ವದಲ್ಲಿ ಆಯೋ ಜಿಸಲಾದ 2ನೆ ರಾಷ್ಟ್ರೀಯ ಕರ್ನಾಟಕ ಶಿಕ್ಷಣ ಶೃಂಗ ಸಭೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ತನ್ನ ಶ್ರೇಷ್ಠತೆ, ಬೋಧನೆ, ಮೂಲ ಸೌಕರ್ಯ, ಉದ್ಯೋಗ ಪ್ರಯತ್ನ ಹಾಗೂ ಇನ್ನಿತರ ವಿಷ ಯಗಳಲ್ಲಿನ ಪ್ರಗತಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಿಧೀಶ್ ಎಸ್. ಶೆಟ್ಟಿ , ಟ್ರಸ್ಟಿ ಪ್ರಿಯಾಂಕಾ ಎನ್. ಶೆಟ್ಟಿ ಹಾಗೂ ಪ್ರಾಂಶುಪಾಲ ಡಾ.ದಿಲೀಪ್ ಕುಮಾರ್ ಕೆ. ಉಪಸ್ಥಿತರಿದ್ದರು.