ಮರಣೋತ್ತರ ಪರೀಕ್ಷೆ ಪೂರ್ಣ
ಲಾಕಪ್ ಡೆತ್ ಪ್ರಕರಣ
ಬೆಂಗಳೂರು, ಮಾ. 22: ಜೀವನ್ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಹೇಂದ್ರ ರಾಥೋಡ್ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಸಿದ್ದು, ಎರಡು ದಿನಗಳ ಬಳಿಕ ವರದಿ ಬರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಹೇಂದ್ರ ರಾಥೋಡ್ ಅವರ ಸಂಬಂಧಿಕರು, ಮ್ಯಾಜಿಸ್ಟ್ರೀಟ್ ಹಾಗೂ ಸಿಐಡಿ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಸಂಬಂಧಿಕರು ಮಹೆಂದ್ರ ರಾಥೋಡ್ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರ ನಡೆಸಲು ಒಡಿಶಾಗೆ ಕೊಂಡೊಯ್ದಿದ್ದಾರೆ.
Next Story





