ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ರಸ್ತೆ ಸುರಕ್ಷತೆ, ಪ್ರಥಮ ಚಿಕಿತ್ಸೆ ಮತ್ತು ಅಗ್ನಿ ಅಪಘಾತದ ಬಗ್ಗೆ ಮಾಹಿತಿ
ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ವತಿಯಿಂದ ಚೈಲ್ಡ್ ಫಂಡ್ ಇಂಟರ್ ನ್ಯಾಷನಲ್ ನ ಸಹಯೋಗದಲ್ಲಿ ಯುವಕೂಟದ ಸದಸ್ಯರಿಗೆ ಬೆಳ್ತಂಗಡಿ ಅಗ್ನಿ ಶಾಮಕ ಕೇಂದ್ರದಲ್ಲಿ ರಸ್ತೆ ಸುರಕ್ಷತೆ, ಪ್ರಥಮ ಚಿಕಿತ್ಸೆ ಮತ್ತು ಅಗ್ನಿ ಅಪಘಾತದ ಪ್ರ್ರಾತ್ಯಕ್ಷಿಕತೆಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಸಂಪನ್ಮೂಲ ವ್ಯಕ್ತಿಯಾದ ಬೆಳ್ತಂಗಡಿ ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಸಂದೇಶ್ರವರು ಮಾತನಾಡುತ್ತಾ ಕಾನೂನನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ, ವಾಹನ ಪರವಾನಿಗೆ ಇಲ್ಲದ ವ್ಯಕ್ತಿಯು ಯಾವುದೇ ಕಾರಣಕ್ಕೂ ವಾಹನವನ್ನು ಚಲಾಯಿಸುವಂತಹ ಪ್ರಯತ್ನವನ್ನು ಮಾಡಬಾರದು ಎಂದು ತಿಳಿಸಿದರು.ಅದೇರೀತಿ ಯಾವುದೇ ವಾಹನವನ್ನು ಚಲಾಯಿಸುವ ಮುನ್ನ ವಾಹನಗಳ ದಾಖಲೆಯ ಪರಿಪೂರ್ಣತೆ ಇರಬೇಕು ತದನಂತರವೆ ವಾಹನವನ್ನು ರಸ್ತೆಗೆ ತರಬೇಕೆಂದು ತಿಳಿಸಿದರು, ದ್ವಿಚಕ್ರ ವಾಹನ ಸವಾರರುಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರಿಂದ ಕಾನೂನನ್ನು ಕಾಪಾಡುವುದರ ಜೊತೆಗೆ ಸ್ವಪ್ರಾಣರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ.ಎ ರವರು ಅಪಘಾತವಾದ ವೇಳೆ ಪ್ರಥಮ ಚಿಕಿತ್ಸೆಯನ್ನು ಜನ ಸಾಮಾನ್ಯರಾದ ನಾವು ಯಾವರೀತಿಯಾಗಿ ಮಾಡಬಹುದು ಎಂದು ತಿಳಿಸಿಕೊಟ್ಟರು. ಬೆಳ್ತಂಗಡಿ ಅಗ್ನಿ ಶಾಮಕ ದಳದ ಠಾಣಾಧಿಕಾರಿಯಾದ ಕ್ಲೇವಿಯಸ್ ಡಿ'ಸೋಜ ಮಾತನಾಡುತ್ತಾ, ನಮ್ಮ ಸುತ್ತಮುತ್ತ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡಿಕೊಳ್ಳೋಣ, ದಿನನಿತ್ಯದ ಉಪಕರಣಗಳಾದ ಗ್ಯಾಸ್, ಇಲೆಕ್ಟ್ರಾನಿಕ್ಗಳನ್ನು ಉಪಯೋಗಿಸುವ ಸಂದರ್ಭಗಳಲ್ಲಿ ಬಹಳ ಜಾಗರೂಕತೆಯಿಂದ ಉಪಯೋಗಿಸೋಣ, ಅಗ್ನಿ ಅನಾಹುತದ ವೇಳೆಯು ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿ ನಿಖರವಾದ ಮಾಹಿತಿಯೊಂದಿಗೆ ಸರಿಯಾದ ವಿಳಾಸವನ್ನು ತಿಳಿಸಿರಿ ಎಂದರು. ಅಗ್ನಿದುರಂತದ ಸಮಯದಲ್ಲಿಅಗ್ನಿ ಶಾಮಕ ಸಿಬ್ಬಂದಿಗಳ ಕಾರ್ಯಾಚರಣೆಯ ಕುರಿತು ಪ್ರಾತ್ಯಕ್ಷಿಕತೆಯನ್ನು ತೋರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಾಸ್ಕರೆನ್ಹಸ್,ಕಾರ್ಯಕರ್ತರಾದ ಪದ್ಮನಾಭ, ಶೋಭಾ, ಸುಮಂಗಲಾ ಮತ್ತು ಸಂಯೋಜಕರಾದ ಸುನಿಲ್ ರವರು ಉಪಸ್ಥಿತರಿದ್ದರು.
ಯುವಕೂಟದ ಸಂಯೋಜಕಿಯಾದಕು.ಅಕ್ಷಿತಾ ರವರುಕಾರ್ಯಕ್ರಮವನ್ನು ನಿರೂಪಿಸಿದರು.