ಸರಕಾರಿ ಲೇಖನ ಸಾಮಗ್ರಿ ಸದ್ಯಕ್ಕೆ ಸ್ಥಗಿತ
ಬೆಂಗಳೂರು, ಮಾ. 23: 2015-16ನೆ ಸಾಲಿನ ವಾರ್ಷಿಕ ಸರಕು ಪರಿಶೀಲನೆಯ ಪ್ರಯುಕ್ತ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಧಾರವಾಡಗಳಲ್ಲಿರುವ ಸರಕಾರಿ ಲೇಖನ ಸಾಮಗ್ರಿ ಉಗ್ರಾಣಗಳಲ್ಲಿ ಎ.1ರಿಂದ 16ರ ವರೆಗೆ ಎಲ್ಲ ಸರಕಾರಿ ಕಚೇರಿಗೆ ಲೇಖನ ಸಾಮಗ್ರಿಗಳ ಮತ್ತು ಕಾಗದದ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





