ವಿದ್ಯೆಯಿಂದ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ: ಬೇಕಲ ಇಬ್ರಾಹಿಂ ಮುಸ್ಲಿಯಾರ್
ಮುಡಿಪು ಸೂರಜ್ ವಿದ್ಯಾಸಂಸ್ಥೆಯಲ್ಲಿ ಐಎಸ್ಓ ಪ್ರಮಾಣಪತ್ರ ಹಸ್ತಾಂತರ ಕಾರ್ಯಕ್ರಮ
ಕೊಣಾಜೆ: ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಓರ್ವ ಮನುಷ್ಯನು ಪರಿಪೂರ್ಣ ಮನುಷ್ಯನಾಗಬೇಕಾದರೆ ಶಿಕ್ಷಣವು ಪ್ರಮುಖ ಪಾತ್ರವಹಿಸುತ್ತದೆ. ವಿದ್ಯೆ ಇಲ್ಲದಿದ್ದರೇ ಆತ ಪರಿಪೂರ್ಣ ಆಗಲಾರ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಭಿಪ್ರಾಯಪಟ್ಟರು.
ಮುಡಿಪು ಸೂರಜ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸೂರಜ್ ವಿದ್ಯಾಸಂಸ್ಥೆಗೆ ದೊರೆತ ಅಂತರಾಷ್ಟ್ರೀಯ ಮಾನ್ಯತೆಯುಳ್ಳ ಐಎಸ್ಓ ಪ್ರಮಾಣಪತ್ರವನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಇಸ್ಲಾಂ ವಿದ್ಯಾರ್ಜನೆಗೆ ಪ್ರಮುಖ ಮಹತ್ವ ನೀಡಿದೆ. ಓದಿರಿ ಮತ್ತು ಬರೆಯಿರಿ ಎನ್ನುವುದು ಪ್ರವಾದಿ (ಸ.ಅ) ಅವರಿಗೆ ದೇವನಿಂದ ಬಂದ ಪ್ರಥಮ ಸಂದೇಶವಾಗಿತ್ತು. ಕರಿಯ, ಬಿಳಿಯ, ಮೇಲು, ಕೀಳು ಎನ್ನುವ ಭಾವನೆಯಿಲ್ಲದೆ ಚವಿದ್ಯೆ ಕಲಿಯಿರಿ ಎಂದು ಅವರು ಜಗತ್ತಿಗೆ ಸಾರಿದ್ದರು. ಈ ನಿಟ್ಟಿನಲ್ಲಿ ಸೂರಜ್ ವಿದ್ಯಾಸಂಸ್ಥೆ ಯಾವುದೇ ಬೇದ ಭಾವ ಇಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು. ಮುಡಿಪು ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾಲಯ, ಐಟಿ ಕಂಪನಿ ಇದ್ದು ಪ್ರದೇಶ ಶಿಕ್ಷಣದ ತಾಣವಾಗಿದೆ. ಇಂತಹ ಸಂದರ್ಭದಲ್ಲಿ ಸೂರಜ್ ಎನ್ನುವ ಶಿಕ್ಷಣ ಸಂಸ್ಥೆ ಗ್ರಾಮೀಣ ಮಟ್ಟದ ಮಕ್ಕಳನ್ನು ಸೇರ್ಪಡೆಗೊಳಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿಸುವ ಮೂಲಕ ಅಂತರಾಷ್ಟ್ರೀಯ ಮಾನ್ಯತೆಗೆ ಭಾಜನವಾಗಿದೆ. ಇನ್ನಷ್ಟು ವಿದ್ಯಾರ್ಥಿಗಳನ್ನು ಸಂಸ್ಥೆಗೆ ಸೇರಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವ ಪ್ರಯತ್ನ ಸಂಸ್ಥೆಯಿಂದ ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಮುಡಿಪು ಜೋಸೆಫ್ವಾಜ್ ಚರ್ಚ್ನ ಧರ್ಮಗುರು ರೆ.ಫಾ.ಬೆಂಜಮಿನ ಪಿಂಟೋ ಮಾತನಾಡಿ, ಯಾವುದೇ ಸಂಸ್ಥೆಗಳು ಉತ್ತಮ ಮನೋಭಾವದಿಂದ ಸೇವೆ ಸಲ್ಲಿಸಿದರೆ ಅಂತಹ ಸಂಸ್ಥೆಗೆ ದೇವನ ದಯೆ ಇದೆ ಎನ್ನುವುದಕ್ಕು ಸೂರಜ್ ವಿದ್ಯಾಸಂಸ್ಥೆ ಸಾಕ್ಷಿ ಎಂದು ಸಂತ ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಎಸ್.ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಜೆಡಿಎಸ್ ರಾಷ್ಟ್ರೀಯ ಸದಸ್ಯ ಹೈದರ್ ಪರ್ತಿಪ್ಪಾಡಿ ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಐಎಸ್ಓ ಕನ್ಸಲ್ಟೆಂಟ್ ಪಿ.ಮನೋಹರ್ ಪ್ರಭು, ದಿನೇಶ್ ಕಾಜವ, ಹೇಮಲತಾ ರೇವಣ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಬಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿ ಪದವಿಪೂರ್ವ ಕಾಲೇಜಿನ ಕನ್ಸಲ್ಟೆಂಟ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕಿಂತ ಮುನ್ನ ವಿಜ್ಞಾನ ಪ್ರಯೋಗಶಾಲೆಯನ್ನು ಪ್ರೊ.ಪಿ.ಎಲ್ ಧರ್ಮ, ಕಂಪ್ಯೂಟರ್ ಕೇಂದ್ರವನ್ನು ಫಾ.ಬೆಂಜಮಿನ್ ಪಿಂಟೋ ಅವರು ಉದ್ಘಾಟಿಸಿದರು.