ಉದ್ಯೋಗ ನೀಡುವುದಾಗಿ ವಂಚನೆ
ಪುತ್ತೂರು, ಮಾ.24: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಪುತ್ತೂರಿನ ವ್ಯಕ್ತಿಯೋರ್ವರಿಂದ ಹಣ ಪಡೆದು ವಂಚಿಸಿದ ಬೆಂಗಳೂರು ರಾಜಾಜಿನಗರ ನಿವಾಸಿಯೋರ್ವರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜಾಜಿನಗರದ ನಾಗರಾಜ್ ಬಂಧಿತ ಆರೋಪಿ. ಈತ ಪುತ್ತೂರು ನೆಹರೂನಗರ ನಿವಾಸಿ ಆಟೊ ಚಾಲಕ ಗೋಪಾಲ ಎಂಬವರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಅವರಿಂದ ರೂ. 1.60 ಲಕ್ಷ ರೂ. ಹಣವನ್ನು ಪಡೆದುಕೊಂಡು ಕೆಲಸ ಕೊಡಿಸದೆ ವಂಚನೆ ಎಸಗಿರುವುದಾಗಿ ಆರೋಪಿಸಲಾಗಿತ್ತು.
ಈ ಬಗ್ಗೆ ಗೋಪಾಲ ಅವರು ಯುವ ಜಯಕರ್ನಾಟಕ ಸಂಘಟನೆಯವರಲ್ಲಿ ವಿಷಯ ತಿಳಿಸಿದ್ದು. ಯುವ ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಅವರು ಆರೋಪಿ ನಾಗರಾಜ್ನನ್ನು ಉಪಾಯವಾಗಿ ಪುತ್ತೂರಿಗೆ ಬರಮಾಡಿಕೊಂಡು ಬಳಿಕ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಿಸಿದಾಗ ಆತ ಮೋಸ ಮಾಡಿರುವುದು ಬೆಳಕಿಗೆ ಬಂದಿತ್ತು. ಬಳಿಕ ಆತನನ್ನು ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.
Next Story