Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕಾಂಗ್ರೆಸ್ ನಾಯಕರಿಗೆ ತಲೆ ನೋವು ತಂದಿರುವ...

ಕಾಂಗ್ರೆಸ್ ನಾಯಕರಿಗೆ ತಲೆ ನೋವು ತಂದಿರುವ ರಾಹುಲ್‌ರ ’ಸಾವರ್ಕರ್’ ಹೇಳಿಕೆಗಳು

ವಾರ್ತಾಭಾರತಿವಾರ್ತಾಭಾರತಿ25 March 2016 2:13 PM IST
share
ಕಾಂಗ್ರೆಸ್ ನಾಯಕರಿಗೆ ತಲೆ ನೋವು ತಂದಿರುವ ರಾಹುಲ್‌ರ ’ಸಾವರ್ಕರ್’ ಹೇಳಿಕೆಗಳು

ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ವಿಚಾರವಾಗಿ ನೀಡಿದ ಆಕ್ರಮಣಕಾರಿ ಹೇಳಿಕೆಗಳುಪಕ್ಷದ ಹಿರಿಯ ನಾಯಕರುಗಳಿಗೆ ತಲೆನೋವು ತಂದಿದ್ದು ಇದರಿಂದ ಮಹಾರಾಷ್ಟ್ರೀಯರ ಭಾವನೆಗಳಿಗೆ ಘಾಸಿಯಾಗುವ ಸಂಭವವಿರುವುದರಿಂದ ಎಚ್ಚರಿಕೆ ವಹಿಸುವ ಅಗತ್ಯವಿದೆಯೆಂದೂ ಅವರುಪಕ್ಷವನ್ನು ಆಗ್ರಹಿಸಿದ್ದಾರೆ.

ಸಾವರ್ಕರ್ ಆರೆಸ್ಸೆಸ್ ಸದಸ್ಯರಾಗಿರಲಿಲ್ಲದಿದ್ದರೂ ರಾಹುಲ್ ಮತ್ತವರ ಸಹವತಿಗಳು ಬಿಜೆಪಿ ಹಾಗೂ ಸಂಘ ಪರಿವಾರವನ್ನು ಟೀಕಿಸಲು ಅವರ ಹೆಸರು ಬಳಸಿದ್ದಾರೆ. ಭಗತ್ ಸಿಂಗ್ ಮತ್ತಾತನ ಸಹವರ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾದ ದಿನವಾದ ಮಾರ್ಚ್ 23ರಂದು ಕಾಂಗ್ರೆಸ್ ಸಾವರ್ಕರ್ ಅವರನ್ನು ಟೀಕಿಸಿದ್ದು, ಬ್ರಿಟಿಷ್ ಆಡಳಿತಕ್ಕೆ ತಾನು ನಿಷ್ಠನಾಗಿದ್ದೇನೆಂದುಅಂಡಮಾನ್ ಜೈಲಿನಲ್ಲಿರುವಾಗ ಸಾವರ್ಕರ್1913ರಲ್ಲಿ ನೀಡಿರುವ ಪಿಟಿಶನ್ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದೆಯಲ್ಲದೆ ಇದನ್ನು ಭಗತ್ ಸಿಂಗ್ 1931ರಲ್ಲಿಬರೆದಿದ್ದಪಿಟಿಷನ್‌ಗೆ ಹೋಲಿಸಿದೆ. ‘‘ಬ್ರಿಟಿಷ್ ರಾಷ್ಟ್ರ ಮತ್ತು ಭಾರತ ರಾಷ್ಟ್ರದ ನಡುವೆ ಯುದ್ಧವಿದ್ದು, ನಾವು ಆ ಯುದ್ಧದಲ್ಲಿ ಭಾಗವಹಿಸಿರುವುದರಿಂದ ನಾವು ಯುದ್ಧ ಕೈದಿಗಳು,’’ ಎಂದು ಅದರಲ್ಲಿ ಬರೆಯಲಾಗಿತ್ತು.

ಒಂದು ವರ್ಷದ ಹಿಂದೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬಿಜೆಪಿ ಶಾಸಕರೊಂದಿಗೆ ಕೈಜೋಡಿಸಿ. ಅಂಡಮಾನಿನಲ್ಲಿರುವ ಸಾವರ್ಕರ್ ಸ್ಮಾರಕಕ್ಕೆ ಭೇಟಿ ನೀಡಲುದ್ದೇಶಿಸುವವರಪ್ರಯಾಣ ವೆಚ್ಚ ಭರಿಸುವ ನಿರ್ಧಾರನ್ನು ಬೆಂಬಲಿಸಿದ್ದರು.ಫೆಬ್ರವರಿ 2003ರಲ್ಲಿ ವಾಜಪೇಯಿ ಸರಕಾರ ಅಧಿಕಾರದಲ್ಲಿದ್ದಾಗಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಸಾವರ್ಕರ್ ಭಾವಚಿತ್ರವನ್ನಿಡಲುನಿರ್ಧರಿಸಿದ್ದಾಗ ಕಾಂಗ್ರೆಸ್ ಕೂಡ ಅದಕ್ಕೆ ತನ್ನ ಒಪ್ಪಿಗೆ ನೀಡಿತ್ತು.

ಈ ತಿಂಗಳ ಆರಂಭಧಲ್ಲಿ ಲೋಕಸಭೆಯಲ್ಲಿ ಚರ್ಚೆಯೊಂದರ ವೇಳೆ ರಾಹುಲ್‌ರವರು ಆಡಳಿತ ಪಕ್ಷವನ್ನುದ್ದೇಶಿಸಿ ‘ನಮಗೆ ಗಾಂಧಿಯಿದ್ದರೆ, ನಿಮಗೆ ಸಾವರ್ಕರ್’ಎಂದು ಹೇಳಿ ಬಿಜೆಪಿ ಸದಸ್ಯರನ್ನು ಕರೆಳಿಸಿದ್ದರು. ಅದಕ್ಕೆ ಕ್ಷಮಾಪಣೆ ಕೋರಬೇಕೆಂದು ಬಿಜೆಪಿ ಆಗ್ರಹಿಸಿದ್ದರೂ ಜಗ್ಗದ ರಾಹುಲ್ ‘‘ನಾನು ತಪ್ಪು ಹೇಳಿದ್ದೇನೇನು?ಸಾವರ್ಕರ್ ನಿಮ್ಮವರಲ್ಲವೇ? ಅವರನ್ನು ಕೈಬಿಟ್ಟಿದ್ದೀರಾ? ಹಾಗೆ ಮಾಡಿದ್ದರೆ ನೀವು ಒಳ್ಳೆಯದನ್ನೇ ಮಾಡಿದ್ದೀರಿ’’ಎಂದು ಹೇಳಿದ್ದರು.

ಅಂದಿನಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಾವರ್ಕರ್ ಅವರನ್ನು ‘ನಕಲಿ’ ಸ್ವಾತಂತ್ರ್ಯ ಹೋರಾಟಗಾರನೆಂದು ಬಣ್ಣಿಸಲಾಗಿದೆ. ಮಾರ್ಚ್ 5ರಂದು ಟ್ವೀಟೊಂದರಲ್ಲಿ ಪಕ್ಷ ಹೀಗೆ ಹೇಳಿದೆ -‘‘ಸರ್ದಾರ್ ಪಟೇಲರು ಬಿಜೆಪಿಯ ದೇಶಭಕ್ತ ವೀರ್ ಸಾವರ್ಕರ್ ಬಗ್ಗೆ ಹೀಗೆ ಹೇಳಿದ್ದರು: ಮಹಾತ್ಮ ಗಾಂದಿಯವರ ಹತ್ಯೆಯಲ್ಲಿ ಸಾವರ್ಕರ್ ಶಾಮೀಲಾಗಿದ್ದರು. ಇಲ್ಲಿಯನಕ ಇಂತಹ ಆರೋಪವನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯವಿಲ್ಲ. ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಸಾವರ್ಕರ್ ಅವರಿಗೆ ತುಂಬ ಹತ್ತಿರದವರು. ಒಂದು ನಿರ್ದಿಷ್ಟ ಬ್ರ್ಯಾಂಡಿನ ಹಿಂದುತ್ವಕ್ಕೆ ರಾಜಕೀಯ ಅಜೆಂಡಾ ನೀಡಿದ ವ್ಯಕ್ತಿ ಅವರೆಂದು ಕೆಲವು ರಾಜಕೀಯ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.’’

ದೇಶಭಕ್ತಿಯ ವಿಚಾರದಲ್ಲಿ ದೇಶಾದ್ಯಂತ ವಿವಾದದ ಕಿಚ್ಚು ಹಬ್ಬಿರುವಂತೆಯೇಕಾಂಗ್ರೆಸ್ ಸಾವರ್ಕರ್ ವಿಷಯವನ್ನು ಎತ್ತಿ ಉದಾರವಾದಿಗಳ ಬೆಂಬಲ ಪಡೆಯುವ ಯತ್ನ ಮಾಡುತ್ತಿದೆಯಲ್ಲದೆಆರೆಸ್ಸೆಸ್ ಸಿದ್ಧಾಂತಕ್ಕೆ ಸವಾಲೊಡ್ಡಲು ಬಾಪು ಸದ್ಭಾವನಾ ಹಾಗೂ ಶಿಕ್ಷಾ ಟ್ರಸ್ಟ್ ಸ್ಥಾಪಿಸುವ ಶಿಫಾರಸ್ಸು ಮಾಡಿರುವ 2003ರ ಶಿಮ್ಲಾ ಸಂಕಲ್ಪ್ ವಿಚಾರವನ್ನೂ ಮೇಲಕ್ಕೆತ್ತುವ ಯತ್ನ ಮಾಡುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X