ಕೊಣಾಜೆ : ಮಾ, 27: ಬೋಳಿಯಾರ್ನಲ್ಲಿ ಝೈನುಲ್ ಉಲಮಾ ಅನುಸ್ಮರಣೆ
ಕೊಣಾಜೆ: ಸಜಿಪ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಸಮಸ್ತ ಕಾರ್ಯದರ್ಶಿ ಝೈನುಲ್ ಉಲಮಾ ಚೆರುಶ್ಯೇರಿ ಝೈನುದ್ದೀನ್ ಮುಸ್ಲಿಯಾರ್ ಅವರ ಅನುಸ್ಮರಣಾ ಸಮಾರಂಭವು ಬೋಳಿಯಾರ್ ಕೇಂದ್ರ ಮಸೀದಿ ವಠಾರದಲ್ಲಿ ಮಾ.27ರಂದು ಸಂಜೆ 5 ಗಂಟೆಗೆ ರೇಂಜ್ ಅಧ್ಯಕ್ಷರಾದ ಕೆ.ಬಿ.ಅಬ್ದುಲ್ ಖಾದರ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ಉದ್ಘಾಟಿಸುವರು.
ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಭಾಷಣ ಮಾಡಲಿದ್ದು, ಸಯ್ಯಿದ್ ಹುಸೈನ್ ತಂಙಲ್ ದುವಾ ಆಶೀರ್ವಚನ ನೀಡಲಿದ್ದಾರೆ. ರೇಂಜ್ ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಸ್.ಅಬ್ಬಾಸ್ ಹಾಜಿ, ಗೌರವಾಧ್ಯಕ್ಷ ಎಸ್.ಅಬ್ದುಲ್ ರಝಾಕ್, ಸಾಹುಲ್ ಹಮೀದ್ ನಂದಾವರ, ಬೋಳಿಯಾರು ಖತೀಬ್ ಕೆ.ಎಸ್.ಅಹ್ಮದ್ ದಾರಿಮಿ, ಅಬೂಬಕ್ಕರ್ ರಿಯಾರ್ ರಹ್ಮಾನಿ, ರಶೀದ್ ಮುಸ್ಲಿಯಾರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ರೇಂಜ್ ಪ್ರಧಾನ ಕಾರ್ಯದರ್ಶಿ ಕೆ.ಯು.ಅಬ್ದುಲ್ ಮಜೀದ್ ಫೈಝಿ ಕೋಲ್ಪೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





