ಮುಲ್ಕಿ : ಶಿಕ್ಷಣದಿಂದ ಗೌರವಯುತ ಸಾಧ್ಯ, ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು - ಅಭಯಚಂದ್ರ ಜೈನ್
ಮುಲ್ಕಿ, ಮಾ.26: ಶಿಕ್ಷಣದಿಂದ ಗೌರವಯುತ ಸಾಧ್ಯ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು ಎಂದು ರಾಜ್ಯ ಯುವಜನ ಸೇವೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಮುಲ್ಕಿ ಕೆ.ಎಸ್.ರಾವ್ ನಗರದ ಸರಕಾರಿ ಶಾಲೆಯ ನೂತನ ಪೌಢ ಶಾಲೆಯ 84 ಲಕ್ಷ ರೂ ವೆಚ್ಚದಲ್ಲಿ ನೂತನ ವಾಗಿ ನಿರ್ಮಾಣ ಗೊಂಡ ನೂತನ ಕಟ್ಟಡ ಹಾಗೂ ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ನವೀಕರಿಸಿದ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸದ್ಯಕ್ಕೆ ಕೆಲವು ಕೊಠಡಿಗಳನ್ನು ನವೀಕರಿಸಲಾಗಿದ್ದು ಶೀಘ್ರವಾಗಿ ಎಲ್ಲಾ ಕೊಠಡಿಗಳ ನವೀಕರಣ ಮಾಡಲಾಗುವುದು ಎಂದರು.
ಪೋಷಕರಿಗೆ ಇಂಗ್ಲಿಷ್ ನ ಮೇಲಿರುವ ಮಾನಸಿಕ ಹಂಬಲ ಕಡಿಮೆಯಾಗಬೇಕು. ಸರಕಾರದೊಂದಿಗೆ ಹೆತ್ತವರು ಕೈಜೋಡಿಸಿ ಸರಕಾರಿ ಶಾಲೆಗಳನ್ನು ಬೆಳೆಸುವಲ್ಲಿ ಉತ್ತೇಜನ ನೀಡಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಮುಲ್ಕಿ ನಗರ ಪಂಚಾಯತ್ ನ ಅಧ್ಯಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ವಾಣಿ ಆಳ್ವ, ಶಿಕ್ಷಣಾಧಿಕಾರಿ ರಾಜಲಕ್ಷ್ಮಿ , ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ಬಿ.ಎಂ.ಆಸೀಫ್, ಸದಸ್ಯರಾದ ಹಸನ್ ಬಶೀರ್, ವಿಮಲಾ ಎಸ್ ಪೂಜಾರಿ, ಶಂಕ್ರವ್ವ, ಶೈಲೇಶ್, ಭೀಮ ಶಂಕರ್, ಶರೀಪ್, ಹಿರಿಯರಾದ ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.